Karnataka news paper

ಕಾರ್ಯಕರ್ತರ ಶ್ರಮದಿಂದ ಮೈಸೂರಲ್ಲಿ ಜೆಡಿಎಸ್ ಗೆದ್ದಿದೆ: ಸಾರಾ ಮಹೇಶ್ ಭಾವುಕ


ಹೈಲೈಟ್ಸ್‌:

  • ಮೈಸೂರು-ಚಾಮರಾಜನಗರ‌ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಗೆಲುವು
  • ಕಾರ್ಯಕರ್ತರ ಶ್ರಮದಿಂದ ಜೆಡಿಎಸ್‌ ಗೆದ್ದಿದೆ ಎಂದು ಸಾರಾ ಮಹೇಶ್‌ ಭಾವುಕ
  • ಸಿದ್ದರಾಮಯ್ಯಗೆ ಸ್ವಂತ ಬಲ ಇಲ್ಲವಾ ಎಂದು ಪ್ರಶ್ನಿಸಿದ ಸಾರಾ ಮಹೇಶ್‌

ಮೈಸೂರು: ಮೈಸೂರು-ಚಾಮರಾಜನಗರ‌ ಕ್ಷೇತ್ರದ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಪಕ್ಷ ದ್ರೋಹಿಗಳಿಗೆ ಪಾಠ. ಈ ಚುನಾವಣೆ ನನಗೆ ಸಾಕಷ್ಟು ನೋವನ್ನುಂಟು ಮಾಡಿದೆ ಎಂದು ಶಾಸಕ ಸಾರಾ ಮಹೇಶ್ ಭಾವುಕರಾಗಿ ನುಡಿದರು.

ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಅಚ್ಚರಿ ಗೆಲುವು ದಾಖಲಿಸಿದ್ದಂತೆ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಾರಾ ಮಹೇಶ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ಚುನಾವಣೆ ನನಗೆ ಸಾಕಷ್ಟು ನೋವನ್ನುಂಟು ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿಕೊಂಡು ನಮ್ಮ ಪಕ್ಷವನ್ನು ಸೋಲಿಸಲು ಮುಂದಾದರು. ನಮ್ಮ ಪಕ್ಷವನ್ನು ಬಿ ಟೀಮ್ ಎಂದು ಟೀಕಿಸಿದರು ಎಂದರು.

ನಮ್ಮ ಪಕ್ಷದಲ್ಲಿನ ಕೆಲವರು ಕೂಡಾ ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ಕೈ ಜೋಡಿಸಿದರು. ಆದರೂ ಪಕ್ಷದ ಕಾರ್ಯಕರ್ತರು, ಮತದಾರರ ಕೃಪೆಯಿಂದ ಜೆಡಿಎಸ್ ಗೆಲುವು ಸಾಧಿಸಿದೆ ಎಂದು ಕಿಡಿಕಾರಿದರು. ಮೈಸೂರು ಹಾಗೂ ಚಾಮರಾಜನಗರದ ಮತದಾರರು ಜೆಡಿಎಸ್ ಕೈ ಹಿಡಿದಿದ್ದಾರೆ. ಎರಡು ರಾಜಕೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವನ್ನ ಉಳಿಸಿದ್ದಾರೆ. ಕಾರ್ಯಕರ್ತರ ಶ್ರಮದಿಂದ ಜೆಡಿಎಸ್ ಉಳಿದಿದೆ. ಜಿಲ್ಲೆಯ ಎಲ್ಲಕಡೆ ಜೆಡಿಎಸ್ ಕಾರ್ಯಕರ್ತರು ಶ್ರಮವಹಿಸಿ ದುಡಿದಿದ್ದಾರೆ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.

ಜಿಟಿಡಿ ಹಾಗೂ ಸಂದೇಶ್ ನಾಗರಾಜ್‌ಗೆ ಟಾಂಗ್
ಕೆಲವರು ನಮ್ಮ ಪಕ್ಷದಲ್ಲೇ ಉಳಿದು ನಮ್ಮನ್ನೇ ತೆಗಳಿದ್ದಾರೆ. ನಾನು ಮೈಸೂರು ಮಹಾರಾಜ ಅಂತ ವ್ಯಂಗ್ಯವಾಡಿದ್ದಾರೆ. ಆದರೆ, ನಾನು ನನ್ನ ಕ್ಷೇತ್ರದ ಸೇವಕ. ಹಿಂದಿನ ಚುನಾವಣೆಯಲ್ಲಿ ಅವರಿಗೂ ಕೆಲಸ ಮಾಡಿದ್ದೇನೆ ಎಂದು ಟಾಂಗ್‌ ನೀಡಿದರು. ಹಿತಶತ್ರುಗಳಿದ್ರೂ ಪ್ರಾಮಾಣಿಕವಾಗಿ ಎಲ್ಲರೂ ಕೆಲಸ ಮಾಡಿದ್ದೇವೆ. ಈ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಜನರು ಕೈ ಬಿಡುವುದಿಲ್ಲ ಎಂದು ಹೇಳಿದರು.

ಮೈಸೂರಲ್ಲಿ ಕಾಂಗ್ರೆಸ್‌ಗೆ ಜಯ! ಜಿಟಿ ದೇವೇಗೌಡ ಸಹಾಯ ನೆನೆದ ‘ಕೈ’ ಅಭ್ಯರ್ಥಿ ತಿಮ್ಮಯ್ಯ
ಸಿದ್ದರಾಮಯ್ಯಗೆ ಸ್ವಂತ ಶಕ್ತಿ ಇಲ್ವಾ..?
ನಮ್ಮ ಪಕ್ಷದ ಚಿಹ್ನೆಯಲ್ಲಿ ಗೆದ್ದಿರೋರ ಬಳಿ ಯಾಕೆ ಕೈ ಜೋಡಿಸಿದ್ರು? ಅವ್ರಿಗೆ ಬುದ್ದಿ ಹೇಳಬಹುದಿತ್ತಲ್ವಾ? ಜಿಟಿ ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ವರ್ತನೆಯಿಂದ ಬೇಸರವಾಗಿದೆ. ನಾನು ಶಕ್ತಿಯುತವಾಗಿ ಇರೋದಕ್ಕೆ ನನ್ನ ವಿರುದ್ಧ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದರು. ಇನ್ನು, ಅಚ್ಚರಿ ರೀತಿ ಗೆದ್ದ ಜೆಡಿಎಸ್ ಅಭ್ಯರ್ಥಿ ಮಂಜೇಗೌಡರಿಗೆ ಅಭಿನಂದಿಸಲು ಎಣಿಕೆ ಕೇಂದ್ರಕ್ಕೆ ಬಂದ ಸಾರಾ ಮಹೇಶ್ ಭಾವುಕರಾದರು. ಮಂಜೇಗೌಡರನ್ನು ಆಲಂಗಿಸಿ ಅಭಿನಂದನೆ ತಿಳಿಸಿದರು.

ಚುನಾವಣೆ ಮೂಲಕ ನನ್ನ ತಾಯಿ ನನಗೆ ರಾಜಕೀಯ ಜನ್ಮ ನೀಡಿದ್ದಾರೆ: ಸೂರಜ್‌ ರೇವಣ್ಣ
ಸಾರಾ ಮಹೇಶ್ ಗೆ ಋಣಿ..!
ಇನ್ನು, ವಿಜೇತ ಅಭ್ಯರ್ಥಿ ಮಂಜೇಗೌಡ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಸದಾ ಋಣಿ. ಕಾರ್ಯಕರ್ತರ ಶ್ರಮ ಹಾಗೂ ಕುಮಾರಸ್ವಾಮಿ ಆಶೀರ್ವಾದ ದಿಂದ ಗೆಲುವು ಲಭಿಸಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದು ಹೇಳಿದರು. ತಮ್ಮ ವಿರುದ್ಧ ಮಾತಾಡಿದ್ದ ಸಂದೇಶ್ ನಾಗರಾಜ್ ಹಾಗೂ ಜಿಟಿಡಿಗೆ ಒಳ್ಳೆದಾಗಲಿ ಎಂದು ಆಶಿಸುತ್ತೇನೆ. ತಮ್ಮ ವಿರುದ್ಧ ಮಾಡಿದ್ದ ಆರೋಪಗಳಿಗೆ ಫಲಿತಾಂಶವೇ ಉತ್ತರವಾಗಿದೆ. ಗೆಲುವಿಗೆ ಶ್ರಮಿಸಿದ ಸಾರಾ ಮಹೇಶ್ ಅವರಿಗೆ ವಿಶೇಷ ಅಭಿನಂದನೆ ಎಂದು ಮಂಜೇಗೌಡ ಹೇಳಿದರು.

ಜೆಡಿಎಸ್ ತೊರೆಯೋದು ಪಕ್ಕಾ : ದಳಪತಿಗಳ ವಿರುದ್ಧ ಎಂಎಲ್‌ಸಿ ಸಂದೇಶ್ ನಾಗರಾಜ್ ಆಕ್ರೋಶ



Read more