Karnataka news paper

ನಮ್ಮದು ಹಿಂದುತ್ವದ ಆಧಾರದಲ್ಲಿ ನಡೆಯುವ ಹಿಂದೂಪರ ಸರ್ಕಾರ; ಸುನೀಲ್ ಕುಮಾರ್


| Lipi | Updated: Jan 29, 2022, 11:44 AM

ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಜಿಲ್ಲೆ, ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಭದ್ರಕೋಟೆಯಾಗಿದೆ. ನಾವೇ ಕಟ್ಟಿ ಬೆಳೆಸಿದ ಸಂಘಟನೆ, ನಮ್ಮ ವಿಚಾರವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕಿದೆ. ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವ ಅನ್ನೋದಕ್ಕಿಂತಲೂ ಕಾರ್ಯಕರ್ತರ ಸಚಿವ. ನಾನು ಕಾರ್ಯಕರ್ತರಿಗೆ ಬೇಕಾದ ಎಲ್ಲಾ ನ್ಯಾಯವನ್ನ ಕೊಡ್ತೇನೆ. ಯಾವ್ಯಾವ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆಯಾಗ್ತಿದೆ. ನೋಡ್ತೇನೆ. ಕಾರ್ಯಕರ್ತರ ಧ್ಬನಿಯಾಗಿ ನಾನು ಇಲ್ಲಿ ಕೆಲಸ ಮಾಡ್ತೇನೆ ಎಂದು ಸುನೀಲ್ ಕುಮಾರ್ ಹೇಳಿದರು.

 

V Sunil Kumar

ಹೈಲೈಟ್ಸ್‌:

  • ನಮ್ಮ ಸರ್ಕಾರ ಹಿಂದುತ್ವದ ಆಧಾರದಲ್ಲಿ ನಡೆಯೋ ಸರ್ಕಾರ
  • ಕರ್ನಾಟಕದಲ್ಲಿ ಇರೋದು ಹಿಂದೂ ಪರ ಸರ್ಕಾರ
  • ಆ ಕಾರಣದಿಂದಲೇ ನಾವು ರಾಜ್ಯದಲ್ಲಿ ಕೆಲ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಿದ್ದೇವೆ
  • ಮಂಗಳೂರಿನಲ್ಲಿ ದ.ಕ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ ಹೇಳಿಕೆ
ಮಂಗಳೂರು: ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ದ.ಕ ಜಿಲ್ಲಾ ಬಿಜೆಪಿ‌ ಕಚೇರಿಗೆ ಭೇಟಿ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಜಿಲ್ಲೆ, ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಭದ್ರಕೋಟೆಯಾಗಿದೆ. ನಾವೇ ಕಟ್ಟಿ ಬೆಳೆಸಿದ ಸಂಘಟನೆ, ನಮ್ಮ ವಿಚಾರವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕಿದೆ. ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವ ಅನ್ನೋದಕ್ಕಿಂತಲೂ ಕಾರ್ಯಕರ್ತರ ಸಚಿವ. ನಾನು ಕಾರ್ಯಕರ್ತರಿಗೆ ಬೇಕಾದ ಎಲ್ಲಾ ನ್ಯಾಯವನ್ನ ಕೊಡ್ತೇನೆ. ಯಾವ್ಯಾವ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆಯಾಗ್ತಿದೆ. ನೋಡ್ತೇನೆ. ಕಾರ್ಯಕರ್ತರ ಧ್ಬನಿಯಾಗಿ ನಾನು ಇಲ್ಲಿ ಕೆಲಸ ಮಾಡ್ತೇನೆ ಎಂದು ಹೇಳಿದರು.
ಲೇಡಿ ಹಿಲ್‌ ವೃತ್ತಕ್ಕೆ ಬ್ರಹ್ಮಶ್ರೀ ಹೆಸರಿಗೆ ಕಾಂಗ್ರೆಸ್‌ ಅಡ್ಡಿ : ಸಿದ್ದರಾಮಯ್ಯ ವಿರುದ್ಧ ಸುನೀಲ್‌ ಕುಮಾರ್‌ ಕಿಡಿ
ಉಡುಪಿ ಜಿಲ್ಲೆಯ ಕೆಲ ವಿಷಯ ಗಮನಿಸಬೇಕಿದೆ ಎಂದು ಹೇಳಿದ ಸುನೀಲ್ ಕುಮಾರ್, ಕಾರ್ಕಳದ ಜನರ ಋಣವನ್ನೂ ತೀರಿಸಬೇಕಿದೆ. ನಮ್ಮ ಸರ್ಕಾರ ಹಿಂದುತ್ವದ ಆಧಾರದಲ್ಲಿ ನಡೆಯೋ ಸರ್ಕಾರ, ಕರ್ನಾಟಕದಲ್ಲಿ ಇರೋದು ಹಿಂದೂ ಪರ ಸರ್ಕಾರ. ಆ ಕಾರಣದಿಂದಲೇ ನಾವು ರಾಜ್ಯದಲ್ಲಿ ಕೆಲ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಿದ್ದೇವೆ. ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು, ದೇವಸ್ಥಾನ ಸ್ವತಂತ್ರದ ಚಿಂತನೆಗಳಿವೆ. ಈ ಎಲ್ಲಾ ವಿಚಾರಗಳಿಗೆ ಧಕ್ಕೆ ಬಾರದಂತೆ ನಾನು ಕೆಲಸ ‌ಮಾಡಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವ ರಾಜ್ಯದ ಉಳಿದ ಜಿಲ್ಲೆಗಳಿಗೂ ಆಗಬೇಕು. ಕಾಂಗ್ರೆಸ್ ವಿವಾದ, ಅಪಪ್ರಚಾರದ ಮೂಲಕ ಭ್ರಮೆಯಲ್ಲಿ ಸಾಗುತ್ತಿದೆ. ಮೇಕೆದಾಟು ಮತ್ತು ನಾರಾಯಣ ಗುರು ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡಿದೆ ಎಂದು ಹೇಳಿದರು.

ಸಮೀಪದ ನಗರಗಳ ಸುದ್ದಿ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ

Web Title : our government running based on hindutva says minister v sunil kumar
Kannada News from Vijaya Karnataka, TIL Network



Read more

[wpas_products keywords=”deal of the day sale today offer all”]