Karnataka news paper

ಕೃಷಿ ಸಾಧನಗಳ ಆಧುನೀಕರಣಕ್ಕೆ ಕೇಂದ್ರ ಸರ್ಕಾರದ ನೆರವು: ಡ್ರೋನ್‌ ಬಳಕೆಗೆ ಉತ್ತೇಜನ..!


ಹೈಲೈಟ್ಸ್‌:

  • ಕೃಷಿ ಉತ್ಪಾದಕ ಸಂಘಟನೆ (ಎಫ್‌ಪಿಒ) ಗಳಿಗೆ ಡ್ರೋನ್‌ ಬೆಲೆಯ ಶೇ. 75ರವರೆಗೆ ಕೇಂದ್ರ ಸರಕಾರ ನೀಡಲಿದೆ
  • ಡ್ರೋನ್‌ ಖರೀದಿಸದೆ ಬಾಡಿಗೆ ನೀಡಿ ತರಬೇತಿ ನೀಡುವ ಸಂಘ ಸಂಸ್ಥೆಗಳಿಗೆ ಖರ್ಚಿನ ಬಾಬ್ತು ನೀಡಲಿದೆ
  • ಪ್ರತಿ ಹೆಕ್ಟೇರಿಗೆ 6,000 ರೂ.ವರೆಗೆ ಕೇಂದ್ರ ಸರ್ಕಾರದಿಂದ ಹಣ ಲಭಿಸಲಿದೆ

ಅಜಿತ್‌ ಸ್ವರ್ಗ
ಪೆರ್ಲ (ಕಾಸರಗೋಡು):
ಕೇಂದ್ರ ಸರಕಾರ ಕೃಷಿಕರ ಕೃಷಿ ವೆಚ್ಚವನ್ನು ಕಡಿಮೆ ಮಾಡಿ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದೊಂದಿಗೆ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತಿದೆ. ಆಧುನಿಕ ಕೃಷಿ ಸಾಧನಗಳಲ್ಲಿ ಡ್ರೋನ್‌ ಕೂಡ ಒಂದಾಗಿದ್ದು, ಕೃಷಿ ವಲಯದ ಯಾಂತ್ರೀಕೃತ ಅನುಷ್ಠಾನದ ಭಾಗವಾಗಿ ಕೀಟನಾಶಕ ಸಿಂಪರಣೆ, ಗೊಬ್ಬರ ಪೂರೈಕೆಗೆ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರಕಾರ ತೀರ್ಮಾನಿಸಿದೆ.

ಕೃಷಿ ಅಗತ್ಯದ ಡ್ರೋನ್‌ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಲೆಯ ಶೇ. 40ರಿಂದ 100 ರ ತನಕ ಸಬ್ಸಿಡಿ ನೀಡಲು ಕೇಂದ್ರ ಕೃಷಿ ಸಚಿವಾಲಯ ಮುಂದಾಗಿದೆ. ಡ್ರೋನ್‌ ಬಳಕೆ ಕುರಿತಾದ ಸವಿವರ ಮಾರ್ಗಸೂಚಿಯನ್ನು ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆಗೊಳಿಸಿದೆ.

ಕೃಷಿ ವಲಯದ ಯಾಂತ್ರೀಕೃತ ಅನುಷ್ಠಾನ ಭಾಗವಾಗಿ ಕೃಷಿ ಯಂತ್ರೋಪಕರಣಗಳ ತರಬೇತಿ ಹಾಗೂ ಪ್ರಯೋಗಗಳನ್ನು ನಡೆಸುವ ಸಂಸ್ಥೆಗಳು, ಕೃಷಿಕರಿಗೆ ಯಾಂತ್ರೀಕೃತ ಕೃಷಿ ವಿಧಾನಗಳನ್ನು ಪರಿಚಯಿಸುವ ಐಸಿಎಂಆರ್‌ ಶಿಕ್ಷಣ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ರಾಜ್ಯ ಕೃಷಿ ವಿವಿ ಮೊದಲಾದ ಸಂಸ್ಥೆಗಳಿಗೆ ಡ್ರೋನ್‌ ಬೆಲೆಯ ಪೂರ್ಣ ಪ್ರಮಾಣ (ಗರಿಷ್ಠ ಹತ್ತು ಲಕ್ಷ ರೂ.) ಅನುದಾನ ನೀಡಲಾಗುವುದು.

ಕೃಷಿಗೂ ಕಾಲಿಟ್ಟ ಡ್ರೋನ್..! ಕಳೆನಾಶಕ, ಔಷಧ ಸಿಂಪಡಣೆಗೆ ಸಮರ್ಥ ಬಳಕೆ..!
ಕೃಷಿಕರಿಗೆ ಡ್ರೋನ್‌ ಚಟುವಟಿಕೆಯನ್ನು ವಿವರಿಸುವ ಸಲುವಾಗಿ ಕೃಷಿ ಉತ್ಪಾದಕ ಸಂಘಟನೆ (ಎಫ್‌ಪಿಒ) ಗಳಿಗೆ ಡ್ರೋನ್‌ ಬೆಲೆಯ ಶೇ. 75ರವರೆಗೆ ಕೇಂದ್ರ ಸರಕಾರ ನೀಡಲಿದೆ. ಡ್ರೋನ್‌ ಖರೀದಿಸದೆ ಬಾಡಿಗೆ ನೀಡಿ ತರಬೇತಿ ನೀಡುವ ಸಂಘ ಸಂಸ್ಥೆಗಳಿಗೆ ಖರ್ಚಿನ ಬಾಬ್ತು ಪ್ರತಿ ಹೆಕ್ಟೇರಿಗೆ 6,000 ರೂ.ವರೆಗೆ ಲಭಿಸುವುದು. ಡ್ರೋನ್‌ ಖರೀದಿಸುವ ಸಂಘ ಸಂಸ್ಥೆಗಳಿಗೆ ಖರ್ಚಿನ ಬಾಬ್ತು ಪ್ರತಿ ಹೆಕ್ಟೇರ್‌ಗೆ 2023ರ ಮಾರ್ಚ್ 31ರವರೆಗೆ ಸಬ್ಸಿಡಿ 3,000 ರೂ. ಲಭಿಸುವುದು.

ಕೃಷಿ ಅಗತ್ಯಕ್ಕೆ ಡ್ರೋನ್‌ ಬಾಡಿಗೆ ನೀಡುವ ಸಂಘ ಸಂಸ್ಥೆಗಳು, ಸಹಕಾರಿ ಸಂಘಗಳು, ಸ್ಥಳೀಯ ಸಂಘಟನೆಗಳಿಗೆ ಆರಂಭಿಕರಿಗಾಗಿ ಡ್ರೋನ್‌ ಖರೀದಿಸಲು ಬೆಲೆಯ ಶೇ. 40 (ಗರಿಷ್ಠ 4 ಲಕ್ಷ), ಬಾಡಿಗೆ ನೀಡುವ ಉದ್ದೇಶದಿಂದ ಡ್ರೋನ್‌ ಖರೀದಿಸುವ ಕೃಷಿ ಪದವೀಧರರಿಗೆ ಬೆಲೆಯ ಶೇ. 50 (ಗರಿಷ್ಠ 5 ಲಕ್ಷ ರೂ.) ಅನುದಾನ ಲಭಿಸುವುದು.

ಅರ್ಹತಾ ಮಾನದಂಡ

ಸಹಾಯ ಧನ ಪಡೆಯಲು ಉದ್ದೇಶಿಸುವ ಸ್ಥಳೀಯ ಉದ್ಯಮಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ಸರಕಾರಿ ಅಂಗೀಕೃತ ಸಂಸ್ಥೆಯ ರಿಮೋಟ್‌ ಪೈಲಟ್‌ ಪರವಾನಗಿ ಹೊಂದಿರಬೇಕು. ಸಹಕಾರಿ ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಡ್ರೋನ್‌ ಒದಗಿಸುವ ಮೂಲಕ ಸಾಮಾನ್ಯ ಕೃಷಿಕರಿಗೆ ಕಡಿಮೆ ಖರ್ಚಿನಲ್ಲಿ ಸೇವೆ ಒದಗಿಸುವುದು ಕೃಷಿ ಸಚಿವಾಲಯದ ಗುರಿಯಾಗಿದೆ. ನಾನಾ ಇಲಾಖೆಗಳ ಮಾನದಂಡಗಳನ್ನು ಪಾಲಿಸಿ ಇಲಾಖೆಗಳ ಅನುಮತಿಯೊಂದಿಗೆ ಮಾತ್ರ ಡ್ರೋನ್‌ ಬಳಸಬಹುದು.

ರೆಕ್ಕೆ ಬಿಚ್ಚಿ ರೈತರ ನೆರವಿಗೆ ಬಂದ ಡ್ರೋನ್‌..! ನಿಖರ ಲೆಕ್ಕ ಹೇಳುತ್ತೆ, ಸಮಯ ಉಳಿಸುತ್ತೆ..!
ಪ್ರಧಾನ ಮಾರ್ಗಸೂಚಿಗಳು

* ಅಂಗೀಕೃತ ಕೀಟನಾಶಕಗಳ ಬಳಕೆ

* ಜಲ ಮೂಲಗಳ 100 ಮೀ ವ್ಯಾಪ್ತಿಯಲ್ಲಿ ಕೀಟನಾಶಕ ಸಿಂಪಡಣೆ ಸಲ್ಲದು

* ಅವಘಡ ಸಂಭವಿಸಿದರೆ ಎದುರಿಸಲು ಪ್ರಾಥಮಿಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಬೇಕು

* ಕೀಟನಾಶಕ ಸಿಂಪರಣೆಯ 24 ಗಂಟೆಗಳ ಮೊದಲು ಸ್ಥಳೀಯಾಡಳಿತ ಸಂಸ್ಥೆ (ಪಂಚಾಯಿತಿ) ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.

* ಕೀಟನಾಶಕ ಸಿಂಪರಣೆಯ ಬಳಿಕ ನಿಗದಿತ ಅವಧಿಗೆ ಆ ಪ್ರದೇಶಕ್ಕೆ ಜನರು, ಯಾವುದೇ ಪ್ರಾಣಿಗಳು ಪ್ರವೇಶಿಸುವಂತಿಲ್ಲ.

ವಿಸ್ತಾರವಾದ ಕೃಷಿ ಭೂಮಿಯಲ್ಲಿ ಡ್ರೋನ್‌ ಮೂಲಕ ಕೆಲವೇ ಗಂಟೆಗಳಲ್ಲಿ ಕೀಟನಾಶಕ ಸಿಂಪಡಣೆ, ಔಷಧ, ಗೊಬ್ಬರಗಳನ್ನು ಪೂರೈಸಬಹುದು. ಇದರಿಂದ ಕೃಷಿಕರ ಖರ್ಚು ಕಡಿಮೆಯಾಗುವುದು, ಸಮಯ ಉಳಿತಾಯವಾಗುವುದು. ಸರಿಯಾದ ಸಮಯದಲ್ಲಿ ಕೀಟ ನಿಯಂತ್ರಣ, ಗೊಬ್ಬರ ಪೂರೈಕೆಯಿಂದ ಉತ್ತಮ ಫಸಲು ಲಭಿಸುವುದರೊಂದಿಗೆ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ರೈತರ ಜೊತೆಗಿನ ಸಂವಾದಕ್ಕಿಂತಾ ಫೋಟೋ ಶೂಟ್‌ಗೇ ಆದ್ಯತೆ ಕೊಟ್ರಾ ಸಚಿವ ಬಿ. ಸಿ. ಪಾಟೀಲ್..?!



Read more…

[wpas_products keywords=”deal of the day”]