Karnataka news paper

‘ಸಮಂತಾ-ನಾಗ ಚೈತನ್ಯ ವಿಚ್ಛೇದನದ ಬಗ್ಗೆ ನಾನು ಹಾಗೆ ಹೇಳಿಯೇ ಇಲ್ಲ’ ಎಂದ ನಾಗಾರ್ಜುನ!


ಹೈಲೈಟ್ಸ್‌:

  • ಸಮಂತಾ – ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು
  • ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಕೇಳಿಬರುತ್ತಿರುವ ವದಂತಿಗಳು ಒಂದೆರಡಲ್ಲ
  • ಸುದ್ದಿಯಾಗಿದ್ದ ಸಂದರ್ಶನವೊಂದರಲ್ಲಿ ನಾಗಾರ್ಜುನ ನೀಡಿದ್ದ ಹೇಳಿಕೆ
  • ‘ನಾನು ಹಾಗೇ ಹೇಳಿಯೇ ಇಲ್ಲ’ ಎಂದ ನಾಗಾರ್ಜುನ

ಟಾಲಿವುಡ್ ನಟಿ ಸಮಂತಾ ಹಾಗೂ ನಾಗ ಚೈತನ್ಯ ಬಗ್ಗೆ ಹಬ್ಬುತ್ತಿರುವ ಗಾಸಿಪ್‌ ಒಂದೆರಡಲ್ಲ. ಹಾಗ್ನೋಡಿದ್ರೆ, ತಾವು ದೂರಾಗುತ್ತಿರುವ ಸಂಗತಿಯನ್ನ ಸಮಂತಾ ಹಾಗೂ ನಾಗ ಚೈತನ್ಯ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸುವ ಮುನ್ನವೇ ‘ಅವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ’ ಎಂಬ ಗಾಳಿಸುದ್ದಿ ಹರಿದಾಡಿತ್ತು. ಸಮಂತಾ – ನಾಗ ಚೈತನ್ಯ ಈಗ ಬೇರೆ ಬೇರೆಯಾಗಿದ್ದರೂ, ಅವರಿಬ್ಬರ ಬಗ್ಗೆ ವದಂತಿಗಳು ಕೇಳಿಬರುತ್ತಲೇ ಇವೆ. ಇದಕ್ಕೆ ಸಾಕ್ಷಿ ‘ನಾಗಾರ್ಜುನ ಅವರ ಹೇಳಿಕೆ’..!

ಎಲ್ಲೆಡೆ ಸುದ್ದಿಯಾದ ‘ನಾಗಾರ್ಜುನ ಅವರ ಹೇಳಿಕೆ’!
ಸಮಂತಾ ಮತ್ತು ನಾಗಾ ಚೈತನ್ಯ ಅವರ ವಿಚ್ಛೇದನದ ಬಗ್ಗೆ ನಾಗಾರ್ಜುನ ಸಂದರ್ಶನದಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಇತ್ತೀಚೆಗಷ್ಟೇ ಎಲ್ಲೆಡೆ ಸುದ್ದಿಯಾಯ್ತು.

ವಿಚ್ಛೇದನ ಕೇಳಿದ್ದು ಸಮಂತಾ: ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ನಾಗಾರ್ಜುನ!
ನಾಗಾರ್ಜುನ ನೀಡಿದ್ದ ಹೇಳಿಕೆ ಏನು?
‘’ವಿಚ್ಛೇದನವನ್ನು ಮೊದಲು ಬಯಸಿದ್ದು ಸಮಂತಾ. ಹೀಗಾಗಿ ಅವರೇ ಮೊದಲು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಸಮಂತಾ ತೆಗೆದುಕೊಂಡ ನಿರ್ಧಾರವನ್ನು ನಾಗ ಚೈತನ್ಯ ಒಪ್ಪಿಕೊಂಡ. ಆದರೆ, ನಾಗ ಚೈತನ್ಯಗೆ ನನ್ನ ಬಗ್ಗೆ ತುಂಬಾ ಚಿಂತೆಯಾಗಿತ್ತು. ನಾನು ಏನೆಂದು ತಿಳಿದುಕೊಳ್ಳುತ್ತೇನೋ.. ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತಾ ಎಂಬಿತ್ಯಾದಿ ವಿಚಾರಗಳು ನಾಗ ಚೈತನ್ಯ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಹೀಗಾಗಿ, ನಾನು ಬೇಸರ ಮಾಡಿಕೊಳ್ಳುತ್ತೇನೆ ಎಂದು ನಾಗ ಚೈತನ್ಯ ನನಗೆ ತುಂಬಾ ಸಾಂತ್ವನ ಹೇಳಿದ್ದ’’

‘’ನಾಲ್ಕು ವರ್ಷಗಳಿಂದ ನಾಗ ಚೈತನ್ಯ ಹಾಗೂ ಸಮಂತಾ ಅನ್ಯೋನ್ಯವಾಗಿದ್ದರು. ಅವರಿಬ್ಬರ ಮಧ್ಯೆ ಯಾವುದೇ ಸಮಸ್ಯೆಗಳು ಇರಲಿಲ್ಲ. ಇಬ್ಬರೂ ತುಂಬಾ ಚೆನ್ನಾಗಿದ್ದರು. ಆದರೆ, ಈ ನಿರ್ಧಾರ ತೆಗೆದುಕೊಳ್ಳೋಕೆ ಏನು ಕಾರಣವಾಯಿತು ಅನ್ನೋದು ನನಗೂ ಗೊತ್ತಿಲ್ಲ. ಹಾಗ್ನೋಡಿದ್ರೆ, 2021ರ ಹೊಸ ವರ್ಷವನ್ನು ಗ್ರ್ಯಾಂಡ್‌ ಆಗಿ ಸೆಲೆಬ್ರೇಟ್ ಮಾಡುವ ಮೂಲಕ ಇಬ್ಬರೂ ಒಟ್ಟಿಗೆ ಬರಮಾಡಿಕೊಂಡರು. ಬಹುಶಃ ಅದಾದ ನಂತರ ಸಮಸ್ಯೆಯಾಗಿರಬೇಕು’’ ಎಂದು ಸಂದರ್ಶನವೊಂದರಲ್ಲಿ ನಾಗಾರ್ಜುನ ಹೇಳಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು.

ಮಗಳಿಗೆ ವಿಚ್ಛೇದನದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಬುದ್ಧಿ ಹೇಳಿದ್ದ ನಟಿ ಸಮಂತಾ ತಂದೆ
ನಾನು ಆ ರೀತಿ ಹೇಳಿಯೇ ಇಲ್ಲ ಎಂದ ನಾಗಾರ್ಜುನ!
ಸಂದರ್ಶನವೊಂದರಲ್ಲಿ ನಾಗಾರ್ಜುನ ಹೇಳಿದ್ದಾರೆ ಎನ್ನಲಾದ ವಿಚಾರ ಎಲ್ಲೆಡೆ ವೈರಲ್ ಆಯ್ತು. ವೈರಲ್ ಆದ ಬಳಿಕ ‘’ನಾನು ಆ ರೀತಿ ಹೇಳಿಯೇ ಇಲ್ಲ’’ ಎಂದು ನಾಗಾರ್ಜುನ ಸ್ಪಷ್ಟನೆ ಕೊಟ್ಟಿದ್ದಾರೆ.

‘ಅಫೇರ್ ಇದೆ, ಅಬಾರ್ಷನ್ ಆಗಿದೆ’ ಎನ್ನುವ ಗಾಸಿಪ್‌ಗಳಿಗೆ ನಟಿ ಸಮಂತಾ ಕೊಟ್ಟ ಸ್ಪಷ್ಟನೆ ಏನು?
ಟ್ವೀಟ್ ಮಾಡಿರುವ ನಾಗಾರ್ಜುನ
‘’ಸಮಂತಾ ಮತ್ತು ನಾಗ ಚೈತನ್ಯ ಅವರ ಬಗ್ಗೆ ನನ್ನ ಹೇಳಿಕೆಯನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಅಸಂಬದ್ಧ. ಮಾಧ್ಯಮ ಮಿತ್ರರು ದಯವಿಟ್ಟು ವದಂತಿಗಳನ್ನು ಸುದ್ದಿಯಾಗಿ ಪೋಸ್ಟ್ ಮಾಡುವುದನ್ನು ನಿಲ್ಲಿಸಬೇಕು ಎಂದು ನಾನು ವಿನಂತಿಸಿಕೊಳ್ಳುತ್ತೇನೆ’’ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ.

ಸಮಂತಾ-ನಾಗ ಚೈತನ್ಯ ದೂರಾಗಿದ್ದು ದುರಾದೃಷ್ಟಕರ: ಮನಸ್ಸಿನ ಮಾತು ಹೊರಹಾಕಿದ ನಾಗಾರ್ಜುನ
ಮತ್ತೆ ಒಂದಾಗುತ್ತಾರಾ ಸಮಂತಾ – ನಾಗ ಚೈತನ್ಯ?
ಅಕ್ಟೋಬರ್ 2ರಂದು ಸಮಂತಾ ತಾವು ನಾಗ ಚೈತನ್ಯರಿಂದ ದೂರಾಗುತ್ತಿರುವ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ಆ ವಿಚ್ಛೇದನ ಪೋಸ್ಟ್‌ಅನ್ನು ನಟಿ ಸಮಂತಾ ಡಿಲೀಟ್ ಮಾಡಿದ್ದಾರೆ. ಹೀಗಾಗಿ, ಸಮಂತಾ ಮತ್ತು ನಾಗ ಚೈತನ್ಯ ಮತ್ತೆ ಒಂದಾಗಬಹುದಾ.? ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.



Read more

[wpas_products keywords=”deal of the day party wear dress for women stylish indian”]