Karnataka news paper

ಓಮಿಕ್ರಾನ್ ಆತಂಕ: ಈ ಬಾರಿ ಬಜೆಟ್‌ಗೂ ಮುನ್ನ ‘ಹಲ್ವಾ ಸಮಾರಂಭ’ ಇಲ್ಲ!


ಹೈಲೈಟ್ಸ್‌:

  • ಈ ಬಾರಿ ಸಾಂಪ್ರದಾಯಿಕ ಹಲ್ವಾ ಸಮಾರಂಭ ನಡೆಯುವುದಿಲ್ಲ
  • ಬಜೆಟ್ ಮಂಡನೆಗೂ ಮುನ್ನ ಸಿಬ್ಬಂದಿಗೆ ಸಿಹಿ ವಿತರಣೆ ಸಮಾರಂಭ
  • ದಿಲ್ಲಿಯಲ್ಲಿ ಓಮಿಕ್ರಾನ್ ಹೆಚ್ಚುತ್ತಿರುವ ಕಾರಣ ಸಿಹಿ ಹಂಚಿಕೆ ಇಲ್ಲ
  • ಹಣಕಾಸು ಸಚಿವಾಲಯದಲ್ಲಿ ಶುಕ್ರವಾರ ಲಾಕ್-ಇನ್ ಅವಧಿ ಆರಂಭ

ಹೊಸದಿಲ್ಲಿ: ಕೇಂದ್ರ ಬಜೆಟ್‌ಗೂ ಮುನ್ನ ವಾಡಿಕೆಯಂತೆ ನಡೆಸುವ ‘ಹಲ್ವಾ ಸಮಾರಂಭ’ವನ್ನು ಈ ಬಾರಿ ಕೈಬಿಡಲಾಗಿದೆ. ದಿಲ್ಲಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ತೀವ್ರವಾಗಿರುವುದರಿಂದ ಇದೇ ಮೊದಲ ಸಲ ಹಲ್ವಾ ಸಮಾರಂಭ ನಡೆಸದೆ ಇರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ವರ್ಷದಂತೆಯೇ ಈ ವರ್ಷ ಕೂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಕಾಗದರಹಿತವಾಗಿ ಬಜೆಟ್ ಮಂಡನೆ ಮಾಡಲಿದ್ದಾರೆ.

“ತಮ್ಮ ಕಾರ್ಯಸ್ಥಾನಗಳಲ್ಲಿ ‘ಬಂಧಿಯಾಗಿ’ ಕೆಲಸ ಮಾಡುವ ಹಣಕಾಸು ವಿಭಾಗದ ಸಿಬ್ಬಂದಿಗೆ, ಕೇಂದ್ರ ಬಜೆಟ್ ಕಾರ್ಯ ಅಂತಿಮ ಹಂತಕ್ಕೆ ತಲುಪಿದ ಖುಷಿಗಾಗಿ ಸಿಹಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ನಡೆಸುವ ಹಲ್ವಾ ಸಮಾರಂಭದ ಬದಲಾಗಿ, ಹೆಚ್ಚುತ್ತಿರುವ ಸಾಂಕ್ರಾಮಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಮತ್ತು ಆರೋಗ್ಯ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವ ಅಗತ್ಯವಿದೆ” ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಇವರೇ ನೋಡಿ 2022ರ ಕೇಂದ್ರದ ಬಜೆಟ್‌ ಹಿಂದಿನ ‘ಮೇಧಾವಿ ತಲೆಗಳು’
ಪ್ರತಿ ವರ್ಷ ಹಣಕಾಸು ಸಚಿವಾಲಯವು ತನ್ನ ಕೇಂದ್ರ ಕಚೇರಿಯ ನಾರ್ತ್ ಬ್ಲಾಕ್ ನೆಲಮಾಳಿಗೆಯಲ್ಲಿ ‘ಹಲ್ವಾ ಸಮಾರಂಭ’ ಆಯೋಜನೆ ಮಾಡುತ್ತಿತ್ತು. ಬಜೆಟ್ ಅಂತಿಮ ಕಾರ್ಯ ಸಿದ್ಧಪಡಿಸಲು ಅಧಿಕಾರಿಗಳು ಈ ಸಂದರ್ಭದಲ್ಲಿ ಹೊರ ಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಕೆಲಸ ಮಾಡುತ್ತಾರೆ. ಅವರ ಕೆಲಸಕ್ಕಾಗಿ ಸಿಹಿಯ ಗೌರವ ನೀಡಲು ಈ ಹಿಂದಿನಿಂದಲೂ ಹಲ್ವಾ ಸಮಾರಂಭ ನಡೆಸುತ್ತಾ ಬರಲಾಗುತ್ತಿದೆ. ಕಡಾಯಿ ಒಳಗಿನ ಸಿಹಿಯನ್ನು ತೆಗೆದು ತಮ್ಮ ಸಹೋದ್ಯೋಗಿಗಳಿಗೆ ನೀಡುವ ಮೂಲಕ ಹಣಕಾಸು ಸಚಿವರು ಹಲ್ವಾ ಸಮಾರಂಭಕ್ಕೆ ಚಾಲನೆ ನೀಡುತ್ತಾರೆ. ಬಳಿಕ ಬಜೆಟ್ ಸಿದ್ಧಪಡಿಸುವ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಸಿಹಿ ನೀಡಲಾಗುತ್ತದೆ.

ಬಜೆಟ್‌ನ ಒಂದೇ ಒಂದು ವಿವರ ಸೋರಿಕೆಯಾಗದಂತೆ ಈ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ. ಈ ಅವಧಿಯಲ್ಲಿ ಅವರು ಹೊರ ಜಗತ್ತಿನ ಸಂಪರ್ಕ ಇಲ್ಲದೆ ಕೆಲಸ ಮಾಡುತ್ತಾರೆ. ಇದನ್ನು ‘ಲಾಕ್-ಇನ್’ ಅವಧಿ ಎಂದು ಕರೆಯಲಾಗುತ್ತದೆ. ಈ ಬಾರಿಯ ಲಾಕ್‌-ಇನ್ (Lock-in) ಅವಧಿ ಶುಕ್ರವಾರ ಆರಂಭವಾಗುತ್ತಿದೆ.

‘ಕೇಂದ್ರ ಬಜೆಟ್ ಮಂಡನೆಯವರೆಗೂ ನಾರ್ತ್ ಬ್ಲಾಕ್‌ನ ಒಳಗೆ ಇರುವ ಬಜೆಟ್ ಪ್ರೆಸ್, ಎಲ್ಲ ಅಧಿಕಾರಿಗಳ ವಾಸಸ್ಥಾನವಾಗಿರುತ್ತದೆ. ಈ ಅಧಿಕಾರಿಗಳು ಮತ್ತು ಸಿಬ್ಬಂದಿಯು, ಕೇಂದ್ರ ಹಣಕಾಸು ಸಚಿವರು ಸಂಸತ್‌ನಲ್ಲಿ ಬಜೆಟ್ ಮಂಡನೆ ಮಾಡಿದ ಬಳಿಕವಷ್ಟೇ ತಮ್ಮ ಕುಟುಂಬದವರು ಹಾಗೂ ಆತ್ಮೀಯರ ಜತೆ ಸಂಪರ್ಕ ಹೊಂದಲು ಅವಕಾಶ ನೀಡಲಾಗುತ್ತದೆ’ ಎಂದು ಕೇಂದ್ರದ ಹೇಳಿಕೆ ತಿಳಿಸಿದೆ.
ಬಜೆಟ್‌ 2022; ಸೆಕ್ಷನ್‌ 80 ಸಿ ಅಡಿ ತೆರಿಗೆ ವಿನಾಯಿತಿಗೆ ಹೂಡಿಕೆ ಮಿತಿ ವಿಸ್ತರಣೆ ಸಂಭವ
ದಿಲ್ಲಿಯಲ್ಲಿ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಆದರೆ ರಾಜ್ಯದಲ್ಲಿ ಓಮಿಕ್ರಾನ್ ತಳಿ ವೈರಸ್ ಹೆಚ್ಚು ಶಕ್ತಿಶಾಲಿಯಾಗಿ ಹರಡುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಬಜೆಟ್ ಅನ್ನು (Union Budget 2022) ಮೊಬೈಲ್ ಆಪ್‌ನಲ್ಲಿ ಕೂಡ ವೀಕ್ಷಿಸಬಹುದಾಗಿದೆ. ಇದರಲ್ಲಿ 14 ಕೇಂದ್ರ ಬಜೆಟ್ ದಾಖಲೆಗಳು ಸಂಪೂರ್ಣವಾಗಿ ಲಭ್ಯವಾಗುತ್ತವೆ. ಇದು ಬಜೆಟ್ ಭಾಷಣ, ವಾರ್ಷಿಕ ಹಣಕಾಸು ಹೇಳಿಕೆ (ಬಜೆಟ್), ಅನುದಾನದ ಬೇಡಿಕೆಗಳು, ಹಣಕಾಸು ಮಸೂದೆ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇರುವ ಮೊಬೈಲ್ ಆಪ್ , ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳೆರಡರಲ್ಲೂ ಲಭ್ಯ ಎಂದು ಸರ್ಕಾರ ಹೇಳಿದೆ.



Read more

[wpas_products keywords=”deal of the day sale today offer all”]