Karnataka news paper

ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೂ ಗೊತ್ತಾಗೇ ಆಗುತ್ತೆ: ವಿರೋಧಿಗಳಿಗೆ ಶಾಸಕಿ ರೂಪಾಲಿ ನಾಯ್ಕ್ ಟಾಂಗ್


ಹೈಲೈಟ್ಸ್‌:

  • ಬಿಜೆಪಿ ಬಳಿ 1600ಕ್ಕೂ ಹೆಚ್ಚು ಮತಗಳು ಇದ್ದವು
  • ಆದ್ರೆ, ಬಿದ್ದಿರುವ ಮತಗಳು ಮಾತ್ರ 1,514
  • ಇನ್ನುಳಿದ ಮತದಾರರ ಕುರಿತು ಮುಂದಿನ ದಿನದಲ್ಲಿ ಬಣ್ಣ ಬಯಲಾಗುವ ಸಾಧ್ಯತೆ ಇದೆ: ರೂಪಾಲಿ ನಾಯ್ಕ

ಕಾರವಾರ (ಉತ್ತರ ಕನ್ನಡ):ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ ಅವರು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆಯಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯ ಮತದಾರರು ತಮ್ಮ ಪಕ್ಷ ನಿಷ್ಠೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂದು ತಿಳಿದರೆ ಅದು ಅವರ ಮೂರ್ಖತನ. ಒಂದಲ್ಲ ಒಂದು ರೀತಿಯಿಂದ ಅದು ಗೊತ್ತಾಗೇ ಆಗುತ್ತದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರಗೆ ಅಂಕೋಲಾ ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಪಕ್ಷದಲ್ಲಿರುವ ಕೆಲವು ವಿರೋಧಿಗಳಿಗೆ ತಮ್ಮ ಮಾತಿನುದ್ದಕ್ಕೂ ಟಾಂಗ್ ನೀಡಿದರು.

ಗಣಪತಿ ಉಳ್ವೇಕರರಿಗೆ ನಿರೀಕ್ಷಿತ ಮಟ್ಟದ ಅಂತರದ ಗೆಲುವು ಬರಲಿಲ್ಲ. ಬಿಜೆಪಿ ಪಕ್ಷದಲ್ಲಿ ಎಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಗಣಪತಿ ಉಳ್ವೇಕರ ಗೆಲುವಿಗೆ ನಾವು ಹಗಲಿರುಳೂ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಉಸ್ತುವಾರಿ ಸಚಿವರು, ಜಿಲ್ಲೆಯ ಬಿಜೆಪಿ ಶಾಸಕರು, ನಾಮ ನಿರ್ದೇಶಿತ ವಿಧಾನ ಪರಿಷತ್ ಸದಸ್ಯರು ಹೀಗೆ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಸಾಂಘಿಕ ಪ್ರಯತ್ನದಿಂದ ಪಕ್ಷದ ಅಭ್ಯ ರ್ಥಿ ಗೆಲುವು ಸಾಧ್ಯವಾಗಿದೆ. ಆದರೆ ಬಿಜೆಪಿ ಬಳಿ 1600ಕ್ಕೂ ಹೆಚ್ಚು ಮತಗಳು ಇದ್ದವು. ಆದ್ರೆ, ಬಿದ್ದಿರುವ ಮತಗಳು ಮಾತ್ರ 1,514. ಇನ್ನುಳಿದ ಮತದಾರರ ಕುರಿತು ಮುಂದಿನ ದಿನದಲ್ಲಿ ಬಣ್ಣ ಬಯಲಾಗುವ ಸಾಧ್ಯತೆ ಇದೆ ಎಂದು ರೂಪಾಲಿ ನಾಯ್ಕ ಹೇಳಿದರು.

ಉತ್ತರ ಕನ್ನಡದಲ್ಲಿ ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ..? ಡಿಸೆಂಬರ್ 14ರತ್ತ ಎಲ್ಲರ ಚಿತ್ತ..!
ನನ್ನ ಶ್ರಮಕ್ಕೆ ಹಿನ್ನಡೆಯುಂಟು ಮಾಡಲು ಯಾರೇ ಪ್ರಯತ್ನಿಸಿದರೂ ಕೊನೆಗೆ ನಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ಜಯ ಸಿಕ್ಕಿದೆ. ನನ್ನನ್ನು ಮುಂದೆ ಚುನಾವಣೆಯಲ್ಲಿ ಸೋಲಿಸಬಹುದು. ಆದರೆ ನನ್ನ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ಶಾಸಕಿ ಖಡಕ್ ಆಗಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಉತ್ತರ ಕನ್ನಡದಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್; 183 ಮತಗಳ ಅಂತರದಿಂದ ಜಯ!



Read more