Karnataka news paper

73ನೇ ಗಣರಾಜ್ಯೋತ್ಸವ ಸಂಭ್ರಮ: ಹೊಸ ರಾಜಪಥದಲ್ಲಿ ಪರೇಡ್’ಗೆ ಕ್ಷಣಗಣನೆ ಆರಂಭ, ದೆಹಲಿಯಲ್ಲಿ ಹೆಚ್ಚಿದ ಭದ್ರತೆ


Online Desk

ನವದೆಹಲಿ: ದೇಶದಾದ್ಯಂತ 79ನೇ ಗಣರಾಜ್ಯೋತ್ಸವ ದಿನದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ದೆಹಲಿ ಪೊಲೀಸರು ಎಲ್ಲೆಡೆ ತಪಾಸಣೆ ನಡೆಸುತ್ತಿದ್ದು, ಬ್ಯಾರಿಕೇಡ್‌ ಅಳವಡಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ. ದೆಹಲಿ-ನೋಯ್ಡಾ ಗಡಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಹನಗಳನ್ನು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದ ಐವರು ಸೇರಿ 107 ಸಾಧಕರಿಗೆ ಪದ್ಮ ಶ್ರೀ, ಜನರಲ್ ಬಿಪಿನ್ ರಾವತ್ ಗೆ ಪದ್ಮವಿಭೂಷಣ

ಅಲ್ಲದೆ, ಭಯೋತ್ಪಾದನಾ ವಿರೋಧಿ ಕ್ರಮಗಳತ್ತ ಗಮನ ಹರಿಸುತ್ತಿದ್ದೇವೆ. ನಗರದಲ್ಲಿನ ಬಾಡಿಗೆದಾರು ಮತ್ತು ಸೇವಕರ ಪರಿಶೀಲನೆ ಕಾರ್ಯವು ನಿರಂತರವಾಗಿ ಸಾಗಿದೆ. ಪರೇಡ್ ಸಾಗುವ ಮಾರ್ಗದಲ್ಲಿ ಸಿಸಿಟಿವಿಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಡಿಸಿಪಿ ಶ್ವೇತಾ ಚೌಹಾಣ್ ಮಾಹಿತಿ ನೀಡಿದ್ದಾರೆ.

ದೇಶದ ಕಲೆ, ಸಂಸ್ಕೃತಿ, ಸೇನಾ ಸಾಮರ್ಥ್ಯವನ್ನು ದೇಶ ಮತ್ತು ಜಗತ್ತಿನ ಮುಂದೆ ತೆರೆದಿಡುವ 73ನೇ ಗಣರಾಜ್ಯೋತ್ಸವಕ್ಕೆ ದೆಹಲಿಯ ರಾಜಪಥ ಸಜ್ಜಾಗಿದೆ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವಾದ ಹಿನ್ನೆಲೆಯಲ್ಲಿ ಈ ಬಾರಿ ಗಣರಾಜ್ಯ ದಿನವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ರಾಜಪಥದಲ್ಲಿನ ಗಣರಾಜ್ಯೋತ್ಸವ  ಪಥಸಂಚಲನಕ್ಕೆ ಇಂಡಿಯಾ 75 ಥೀಮ್ ನೀಡಲಾಗಿದೆ. 

ಕೊರೋನಾ ಕಾರಣ ತಪಾಸಣೆ ಮತ್ತು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವ ಹಿನ್ನೆಲೆಯಲ್ಲಿರಾಜಪಥದ ಪಥ ಸಂಚನಕ್ಕೆ 30 ನಿಮಿಷ ವಿಳಂಬವಾಗಿ ಅಂತರೆ 10.30ಕ್ಕೆ ಆರಂಭವಾಗಲಿದೆ. ಅಲ್ಲದೆ, ಉಗ್ರರ ಬೆದರಿಕೆ ಇರುವ ಕಾರಣಕ್ಕೆ ಸಿಸಿಟಿವಿ ಪೊಲೀಸ್ ಸರ್ಪಗಾವಲು ಸೇರಿದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. 

ಇದನ್ನೂ ಓದಿ: ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ

ರಾಜಪಥದಲ್ಲಿ ಮುಖ್ಯ ಸಮಾರಂಭ ನಡೆಯಲಿದ್ದು, ಈ ಸಮಾರಂಬಕ್ಕೆ ಶಂಕಿತರು ನುಸುಳಕೂಡದು ಎಂದು ನಿಗಾವಹಿಸಲಾಗಿದೆ. 50 ಸಾವಿರ ಶಂಕಿತ ಕ್ರಿಮಿನಲ್ ಗಳ ಚಹರೆ ಹಾಗೂ ದತ್ತಾಂಶಗಳು ಇರುವ 30 ಫೇಸ್ ರೆಕಗ್ನಿಷನ್ ಸಿಸ್ಟಂ ಗಳನ್ನು ಅಳವಡಿಸಲಾಗಿದೆ. ಇಂತಹ ವ್ಯಕ್ತಿಗಳು ಇಲ್ಲಿಗೆ ಬಂದಿದ್ದೇ ಆದರೆ, ಕೂಡಲೇ ಅವರನ್ನು ಭದ್ರತಾ ಪಡೆಗಳು ಪತ್ತೆ ಮಾಡುತ್ತವೆ. 

6 ಪ್ರವೇಶ ದ್ವಾರ ಹಾಗೂ 16 ಸೇತುವೆಗಳ ಬಳಿ ಇವುಗಳನ್ನು ಅಳವಡಿಸಲಾಗಿದೆ. ಸಮಾರಂಭದ ಮೇಲೆ ಹದ್ದಿನ ಕಣ್ಣಿಡಲು ರಾಜಪಥದ ಸುತ್ತ 500 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ. ದೆಹಲಿ ಪೊಲೀಸರ 30 ಸಾವಿರ ಸಿಬ್ಬಂದಿ, 65 ಪ್ಯಾರಾ ಮಿಲಿಟರಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. 71 ಡಿಸಿಪಿಗಳು, 213 ಎಸಿಪಿಗಳು, 753 ಇನ್ಸ್ ಪೆಕ್ಟರ್ ಗಳು ಭದ್ರತೆ ಉಸ್ತುವಾರಿ ವಹಿಸಿದ್ದಾರೆ. ಸಂಭಾವ್ಯ ಉಗ್ರ ದಾಳಿ ತಡೆಗೆ ಉಗ್ರ ನಿಗ್ರಹಕ್ಕೆ 26 ಮಾನದಂಡ ಅನುಸರಿಸಲಾಗಿದೆ. ದೆಹಲಿಗೆ ಬಂದು ಹೋಗುವವರ ಮೇಲೆ ನಿಗಾ ಇರಿಸಲಾಗಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವ ಅಂಗವಾಗಿ 939 ಪೊಲೀಸ್ ಪದಕ ಘೋಷಣೆ; ಜಮ್ಮು-ಕಾಶ್ಮೀರಕ್ಕೆ ಅತಿ ಹೆಚ್ಚು ಪದಕ!



Read more

[wpas_products keywords=”deal of the day”]