Karnataka news paper

ಕಾಂಗ್ರೆಸ್ ಮತ್ತು ನನ್ನ ಸಂಬಂಧ ಮುಗಿದ ಅಧ್ಯಾಯ! ಸಿ.ಎಂ ಇಬ್ರಾಹಿಂ


ಹೈಲೈಟ್ಸ್‌:

  • ಕಾಂಗ್ರೆಸ್ ಮತ್ತು ನನ್ನ ಸಂಬಂಧ ಮುಗಿದ ಅಧ್ಯಾಯ!
  • ಬೆಂಗಳೂರಿನಲ್ಲಿ ಸಿಎಂ ಇಬ್ರಾಹಿಂ ಹೇಳಿಕೆ
  • ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರವಾಗಿದ್ದೇವೆ

ಬೆಂಗಳೂರು:ಕಾಂಗ್ರೆಸ್ ಮತ್ತು ನನ್ನ ಸಂಬಂಧ ಇನ್ನು ಮುಗಿದ ಅಧ್ಯಾಯ ಎಂದು ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಮಕರ ಸಂಕ್ರಾಂತಿಯ ಶುಭಾಶಯವಮ್ನ ಎಐಸಿಸಿ ಕೊಟ್ಟಿರೋದನ್ನು ನೋಡಿ ಮನಸ್ಸಿಗೆ ತುಂಬಾ ಸಂತೋಷ ಆಯ್ತು ಎಂದರು

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಮ್ ಒಟ್ಟಿಗೆ ಕೆಲಸ ಮಾಡಲು ಇದು ಸಹಾಯ ಆಗಿತ್ತೆ. ನಮ್ಮ ಮೇಲೆ‌ ಇದ್ದ ಭಾರವನ್ನ ಸೋನಿಯಾ ಗಾಂಧಿ ಕಡಿಮೆ ಮಾಡಿದ್ದಾರೆ. ಈಗ ನಿರ್ಧಾರ ತೆಗೆದುಕೊಳ್ಳಲು ನಾವು ಸ್ವತಂತ್ರವಾಗಿದ್ದೇವೆ. ಕಾಂಗ್ರೆಸ್ ಹಾಗೂ ನಮ್ಮ ಸಂಬಂಧ ಮುಗಿದ ಅಧ್ಯಾಯ ಎಂದರು.

ಹಿತೈಶಿಗಳನ್ನು ಕರೆದು ಮಾತನಾಡಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುತ್ತೇನೆ. ಸಿದ್ದರಾಮಯ್ಯ ಅವರಿಂದಲೇ ನಾನು ಕಾಂಗ್ರೆಸ್ ಗೆ ಬಂದೆ ಆದರೆ ಸಿದ್ದರಾಮಯ್ಯ ಸಲುವಾಗಿ ದೇವೇಗೌಡರಂತ ನಾಯಕರನ್ನ ಬಿಟ್ಟು ಬಂದೆ. ಜೈಲಲಿದ್ದು ಕಟ್ಟಿದ ಜನತಾದಳ ಪಕ್ಷವನ್ನು ಬಿಟ್ಟೆ, ಈ ಮನುಷ್ಯನ ಸಲುವಾಗಿ ಆದರೆ ಅವರು ಕೊಟ್ಟ ಕೈಮಾರು ಎಂದರು.

ಸಚಿವ ಸಂಪುಟ ಸಭೆ: ಚರ್ಚೆಯಾಗಲಿರುವ ಪ್ರಮುಖ ವಿಚಾರಗಳೇನು?

1996 ರಲ್ಲಿ ಇದೇ ರೀತಿ ರಾಜ್ಯಸಭಾ ಟಿಕೆಟ್ ಅನೌನ್ಸ್ ಮಾಡಿ ಕ್ಯಾನ್ಸಲ್ ಮಾಡಿದರು. ಆಗ ಕಾಂಗ್ರೆಸ್ ಬಿಟ್ಟೆ, ಆಗ ಕಾಂಗ್ರೆಸ್ ಎಲ್ಲಿ ಹೋಯ್ತು? 20 ವರ್ಷದ ಬಳಿಕ ಕಾಂಗ್ರೆಸ್ ಇದೇ ರೀತಿ ಮಾಡಿದೆ. ಕಾಂಗ್ರೆಸ್ ಗೆ ಉತ್ತರವನ್ನ ನನ್ನ ಆಶೀರ್ವಾದ ಮಾಡುವ ಜನ ಕೊಡ್ತಾರೆ ಎಂದರು.

ಕಂತು ಕಂತಾಗಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಭಾರಿ ಬೇಗ ಮುಂದಿನ ನಿರ್ಧಾರ ತಿಳಿಸ್ತೇನೆ. ತಾವು ಸಿದ್ದರಾಗಿ .. ಮುಂದೆ ಕಾಂಗ್ರೆಸ್ ಗೆ ಉತ್ತರ ಕೊಡಬಹುದು ಎಂದರು. ಇನ್ನು ಜೆಡಿಎಸ್ ಗೆ ಹೋಗಬೇಕೋ? ಮಮತಾ ಬ್ಯಾನರ್ಜಿಗೆ ಹೋಗಬೇಕೋ? ಲಾಲು ಯಾದವ್ ಗೆ ಹೋಗಬೇಕೋ ನೋಡ್ತಿನಿ. ಕುಮಾರಸ್ವಾಮಿ ನಮ್ಮ ಸ್ನೇಹಿತರು ಅವರ ಜೊತೆಯೂ ಮಾತನಾಡುತ್ತೇನೆ ಎಂದರು.

ಸ್ಥಾನ ತಪ್ಪಿಸಿದ್ದು ಸಿದ್ದರಾಮಯ್ಯ ಅವರೇ ಎಂಬ ಪ್ರಶ್ನೆಗೆ, ಅದಕ್ಕೆ‌ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು. ಶಿವಕುಮಾರ್ ಹಾಗೂ ನಮಗೆ ಹೊಂದಾಣಿಕೆ ಬೇರೆ. ಅವರು ಬೆಳೆದ ಪರಿಸರ ಬೇರೆ, ವಿಚಾರ ಬೇರೆ. ಇದರ ಪರಿಣಾಮ ಯುಪಿಲಿ ಗೊತ್ತಾಗುತ್ತೆ. ಯುಪಿಗೆ ಬನ್ನಿ ಅಂತಾ ಕರಿತಾ ಇದಾರೆ. ನಾನೇನು ದೊಡ್ಡ ನಾಯಕ ಅಲ್ಲ. ಟಿಕಾಯಿತ್ ಜೊತೆ ಕೆಲಸ ಮಾಡಿದ್ದೇನೆ. ಮುಲಾಯಂ ಸಿಂಗ್ ಯಾದವ್ ಜೊತೆ ಕೆಲಸ ಮಾಡಿದ್ದಿನಿ, ನೋಡೋಣ ಎಂದರು.

ಘಟನೆ ಬಳಿಕ ಕುಮಾರಸ್ವಾಮಿ ಕರೆ ಮಾಡಿದ್ದಾರೆ. ಕಾಂಗ್ರೆಸ್ ನವರು ಕರೆ ಮಾಡಿದ್ದಾರೆ. ಅವರು ಹೆಸರು ಹೇಳೋದಿಲ್ಲ. ಪಾಪಾ ಅವರಿಗೆ ಅಲ್ಲಿ ಕಷ್ಟ ಆಗುತ್ತೆ. ಇವತ್ತು ನಾನು ಉಪವಾಸ ಇದ್ದು ನೊಂದ ಮನಸ್ಸಿನಿಂದ ಹೇಳ್ತಾ ಇದ್ದೀನಿ. ಭಗವಂತ ಅನ್ನೋದು ಇದೆ. ಭರತ ಭೂಮಿ ಪುಣ್ಯ ಭೂಮಿ ಅನ್ನೋದು ಇದೆ. ಈಗ 80 ಕ್ಕೆ ಬಂದವರು ಮುಂದೆ ಏನಾಗುತ್ತೆ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.

ಬಾದಾಮಿಯಲ್ಲಿ ಸಿದ್ದರಾಮಯ್ಯ ನಾಮಿನೇಷನ್ ಮಾಡಿದಾಗ ಜೊತೆಗಿದ್ದ ಫೋಟೋ ತೋರಿಸಿದ ಇಬ್ರಾಹಿಂ, ಚಾಮುಂಡೇಶ್ವರಿಯಲ್ಲಿ ಸೋಲ್ತಿರಿ ಅಂತಾ ನಾನೇ ಹೇಳಿ ಬಾದಾಮಿಯಲ್ಲಿ ನಾಮಿನೇಷನ್ ಮಾಡಿಸಿದೆ. ಈಗ ಸಿದ್ದರಾಮಯ್ಯ ನನಗೆ ಬಹುಮಾನ ಕೊಟ್ಟಿದ್ದಾರೆ ಸಂತೋಷ. ಮತ್ತೆ ಜೋಳಿಗೆ ಹಾಕಿಕೊಂಡು ರಾಜ್ಯದ ಜನರ ಮುಂದೆ ಹೋಗ್ತೇನೆ. ಯುಪಿ ಚುನಾವಣೆ ಬಳಿಕ ರಾಜ್ಯದಲ್ಲಿ ಚುನಾವಣೆ ಆಗಬಹುದು ಅಥವಾ ರಾಷ್ಟ್ರಪತಿ ಆಡಳಿತ ಬರಬಹುದು . ನನ್ನ ಆರೋಗ್ಯ ಚೆನ್ನಾಗಿದೆ. ಕೋವಿಡ್ ಕಡಿಮೆ ಆಗ್ತಾ ಇದೆ. ರಾಜಕೀಯ ಸೋಂಕು ಬಂದಿದೆ ಎಂದರು.

ನನ್ನ ಬಳಿ ಹಣ ಇಲ್ಲ, ಆದರೆ ಜನ ಇದಾರೆ. ಜನ ತೀರ್ಮಾನ‌ ಮಾಡ್ತಾರೆ. ಅಲ್ಪಸಂಖ್ಯಾತ ಸಮಾಜ ಜನಸಂಖ್ಯೆ ಅಲ್ಲಿ ನಂಬರ್ ಇದೆ. ಆದರೆ ಸಾಮಾಜಿಕ ನ್ಯಾಯ ಕೊಡಿ ಅಂದರೆ ಕೊಟ್ಟಿಲ್ಲ. ಬೆಳೆ ಬೆಳದವರು ನಾವು, ಆದರೆ ಪಹಣಿ ನಮ್ಮ‌ಹೆಸರಲ್ಲಿ ಇಲ್ಲ. ನಮ್ಮ ಬೆಳೆ ಕೊಯ್ದುಕೊಂಡು ನಮ್ಮನ್ನ ಹೊರಹಾಕಿದ್ದಾರೆ ಎಂದ ಅವರು, ಬೇಗ ಎಂ ಎಲ್ ಸಿ ಪದವಿಗೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.

ನನ್ನ ನಾಮ ಕ್ಷೇಮ ನಿಮ್ಮದಯ್ಯ, ನನ್ನ ಮಾನಾಪಮಾನ ನಿನ್ನದಯ್ಯಾ ನನ್ನ ಯೋಗಕ್ಷೇಮ‌ ನಿನ್ನದಯ್ಯ , ಕೂಡಲ ಸಂಗಮ‌ ದೇವ ಎಂದು ಜನರ ನಮ್ಮನ್ನ ಕೈ ಹಿಡಿಯ ಬೇಕು. ಅನೇಕ ಕೆಲಸ ಗಳನ್ನ ಮಾಡಿದ್ದೀನಿ. ಏರ್ ಇಂಡಿಯಾ ಲಾಭಕ್ಕೆ ತಂದೆ . ಆದರೂ ಕೂಡ ನನ್ನ ಕೈ ಬಿಟ್ರು ಇರಲಿ. ನನ್ನಲ್ಲಿ ಹಣ ಇಲ್ಲ. ನಾನು ವಿಧಾನ ಪರಿಷತ್ ನಾಯಕನ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಇದ್ದಿರಲಿಲ್ಲ. ಸಿದ್ದರಾಮಯ್ಯ ಅವರಿಗಾಗಿ ಇದ್ದೆ. ಆರ್ಥಿಕವಾಗಿ ನಾನು ಸಿಕ್ಕಿಹಾಕಿಕೊಂಡಿದ್ದಾಗ ನನ್ನ ಆಸ್ತಿ ಮಾರಾಟ ಮಾಡಬೇಕಿದೆ. ಕೋವಿಡ್ ನಿಂದ ಕಷ್ಟ ಆಗಿದೆ . ಈಗ ಮಾರ್ತಿನಿ. ಎಲ್ಲಾ ನಿರ್ಧಾರಗಳನ್ನ ಒಟ್ಟಿಗೆ ಮಾಡಲು ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ಅವರು ಬಿಟ್ರು ಅಂತಾ ಹೇಳೋಲ್ಲ. ಆದರೆ ಈಗ ನಾವು ಅವರು ಎದುರು ಬದರು ಆಗ್ತಾ ಇದಿವಲ್ಲ ಅಂತಾ ಅಷ್ಟೇ. ಚುನಾವಣೆಯಲ್ಲಿ ಎದುರಾಗ ಬೇಕಾಗುತ್ತಲ್ಲ. ಅದು ಆಗಲಿ ನೋಡೇ ಬಿಡೋಣ ಎಂದರು.

ಬಿಜೆಪಿಗೆ ಹೋಗ್ತಿರಾ ಎಂಬ ಪ್ರಶ್ನೆಗೆ, ಅವರದ್ದು ಕೇಶವ ಕೃಪಾ.ನಮ್ಮದು ಬಸವ ಕೃಪಾ. ಹೇಗೆ ಸಾಧ್ಯ ಆದರೆ ಬಿಜೆಪಿಯಲ್ಲೂ ಒಳ್ಳೆ ಜನ ಇದಾರೆ. ಆರ್ ಎಸ್ ಎಸ್ ನಲ್ಲೂ ಒಳ್ಳೆ ಜನ ಇದಾರೆ ಇಬ್ರಾಹಿಂ ಏನೋ ಸಿದ್ದ ಅಂದರೆ ಹೌದು ಬುದ್ದಿ ಅನ್ನ ಬೇಕು. ಅನೇಕರು ಕಾಂಗ್ರೆಸ್ ನಲ್ಲಿ ಗೇಣಿದಾರರು ಪಾಪಾ.ಖಂಡಿತವಾಗಿಯೂ ಅಲ್ಲಿ ಮಾತನಾಡಲು ಆಗುತ್ತಾ. ಅಲ್ಲಿ‌ನೋಡಿ ಅಧ್ಯಕ್ಷರು. ಎಲ್ಲರಿಗೂ ಏಯ್.. ಹೋಯ್.. ಬೋಯ್ಯ ಅಂತಾರೆ . ನೀವೇ ತೋರಿಸ್ತಿರಾ ಎಂದರು.



Read more

[wpas_products keywords=”deal of the day sale today offer all”]