ಹೈಲೈಟ್ಸ್:
- ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಯ್ಕೆ ಮಾಡಿದರೆ ಡಿ. ಕೆ. ಶಿವಕುಮಾರ್ ಹೊರಗೆ ಬರ್ತಾರೆ
- ಡಿಕೆಶಿ ಅವರನ್ನೇ ಆಯ್ಕೆ ಮಾಡಿದರೆ ಸಿದ್ದರಾಮಯ್ಯ ಪಾರ್ಟಿ ಬಿಡ್ತಾರೆ
- ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿದರೂ ಪರಮೇಶ್ವರ್ ಸೇಡು ತೀರಿಸಿಕೊಳ್ಳಲು ಕಾಯ್ತಾ ಇದ್ದಾರೆ: ಸಿ. ಟಿ. ರವಿ
ಒಂದು ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಯ್ಕೆ ಮಾಡಿದರೆ, ಆಗ ಡಿ. ಕೆ. ಶಿವಕುಮಾರ್ ಹೊರಗೆ ಬರ್ತಾರೆ.. ಅದರ ಬದಲು ಡಿ. ಕೆ. ಶಿವಕುಮಾರ್ ಅವರನ್ನೇ ಆಯ್ಕೆ ಮಾಡಿದರೆ ಸಿದ್ದರಾಮಯ್ಯ ಪಾರ್ಟಿ ಬಿಡ್ತಾರೆ. ಇವರಿಬ್ಬರಲ್ಲಿ ಯಾರೊಬ್ಬರನ್ನಾದ್ರೂ ಆಯ್ಕೆ ಮಾಡಿದರೂ ಕೂಡಾ ಪರಮೇಶ್ವರ್ ಸೇಡು ತೀರಿಸಿಕೊಳ್ಳಲು ಕಾಯ್ತಾ ಇದ್ದಾರೆ ಎಂದು ಸಿ. ಟಿ. ರವಿ ವಿಶ್ಲೇಷಿಸಿದರು.
ಇನ್ನು ಬಿಜೆಪಿ ಶಾಸಕರು ಈಗಾಗಲೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿ. ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಿ. ಟಿ. ರವಿ, ಕಾಂಗ್ರೆಸ್ ಪಕ್ಷದಲ್ಲಿಯೇ ಯಾರು ಇರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೊತ್ತಾಗ್ತಿಲ್ಲ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರ ಎಡ ಬಲದಲ್ಲಿ ಇದ್ದವರೇ ಈ ಹಿಂದೆ ಪಕ್ಷ ಬಿಟ್ಟು ಹೋದ್ರು. ಅವರನ್ನೆಲ್ಲಾ ಪಕ್ಷ ಬಿಟ್ಟು ಹೋಗುವಂತೆ ಕಳಿಸಿದ್ದು ನಾನೇ ಎಂದು ತಾಕತ್ತಿದ್ದರೆ ಹೇಳಲಿ ಎಂದು ಸಿ. ಟಿ. ರವಿ ಸವಾಲೆಸೆದರು.
ನಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ ಎಂದರೆ ಆತಂಕ ಪಡುವ ಅಗತ್ಯ ಇಲ್ಲ. ನಮ್ಮದು ಕಾರ್ಯಕರ್ತರ ಆಧಾರದ ಪಾರ್ಟಿ. ನಮ್ಮ ಪಕ್ಷ ಕಾಂಗ್ರೆಸ್ನಷ್ಟು ದುರ್ಬಲ ಅಲ್ಲ ಎಂದು ಸಿ. ಟಿ. ರವಿ ಹೇಳಿದರು. 2019ರ ವಿಧಾನಸಭೆ ಚುನಾವಣೆಗೆ ಮೊದಲು 26 ಶಾಸಕರು ಕಾಂಗ್ರೆಸ್ ಸೇರ್ತಾರೆ ಎಂದು ಆ ಪಕ್ಷದ ನಾಯಕರು ಹೇಳಿದ್ದರು. ಆದರೆ ಕಾಂಗ್ರೆಸ್ ಶಾಸಕರೇ ಪಕ್ಷ ಬಿಟ್ಟರು. ಹೀಗಾಗಿ, ಕಾಂಗ್ರೆಸ್ ನಾಯಕರ ಬಳಿ ತಮ್ಮ ಪಕ್ಷಕ್ಕೆ ಸೇರಲು ಬಯಸಿರುವ ಬಿಜೆಪಿ ಶಾಸಕರ ಪಟ್ಟಿ ಇದ್ದರೆ ಮೊದಲು ಬಹಿರಂಗ ಪಡಿಸಲಿ ಎಂದು ಸವಾಲೆಸೆದ ಸಿ. ಟಿ. ರವಿ, ಕಾಂಗ್ರೆಸ್ ಪಕ್ಷದವರು ತಮ್ಮ ಶಾಸಕರನ್ನೇ ಏಕೆ ಉಳಿಸಿಕೊಳ್ಳಲು ಆಗಲಿಲ್ಲ ಎಂಬ ಬಗ್ಗೆ ಸಂಶೋಧನೆ ಮಾಡಲಿ ಎಂದು ಕುಟುಕಿದರು.
ಪಂಚ ರಾಜ್ಯ ಚುನಾವಣೆಯಲ್ಲಿ ವಿವಿಧ ಸಂಸ್ಥೆಗಳ ಸರ್ವೇಗಳು ನಾಲ್ಕು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದೆ. ಗೋವಾದಲ್ಲಿಯೂ ಸಹ ಮತ್ತೆ ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ವಾತಾವರಣ ಇದೆ. ಜೊತೆಗೆ ಉತ್ತರ ಪ್ರದೇಶ, ಉತ್ತರ ಖಾಂಡ್, ಮಣಿಪುರದಲ್ಲಿಯೂ ಸಹ ಅಧಿಕಾರಕ್ಕೆ ಬರುತ್ತೇವೆ. ಅದೇ ರೀತಿ ಪಂಜಾಬ್ನಲ್ಲಿಯೂ ಸಹ ವೋಟ್ ಶೇರಿಂಗ್ ಹಾಗೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತವೆ. ಇಡೀ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್ನಲ್ಲಿ ತನ್ನ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಿ. ಟಿ. ರವಿ ಭವಿಷ್ಯ ನುಡಿದರು.
Read more
[wpas_products keywords=”deal of the day sale today offer all”]