Karnataka news paper

ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ದೇಶದ ಮೊದಲ ರಾಜಕೀಯ ಪಕ್ಷ ಶಿವಸೇನಾ: ಸಂಜಯ್ ರಾವುತ್


The New Indian Express

ಮುಂಬೈ: ದೇಶದಲ್ಲೇ ಹಿಂದುತ್ವದ ಹೆಸರಲ್ಲಿ ಚುನಾವಣೆ ಎದುರಿಸಿದ ಮೊದಲ ಪಕ್ಷ ಶಿವಸೇನಾ ಎಂದು ಶಿವಸೇನಾ ಪಕ್ಷದ ಸಂಸದ, ಹಿರಿಯ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಇದನ್ನೂ ಓದಿ: ಯೋಗಿ ಅಯೋಧ್ಯೆಯಿಂದ ಸ್ಪರ್ಧಿಸಿದಿದ್ದರೆ ವಿರೋಧ ವ್ಯಕ್ತವಾಗುತ್ತಿತ್ತು: ರಾಮ ಮಂದಿರ ಪ್ರಧಾನ ಅರ್ಚಕ

ಶಿವಸೇನೆ ಹಿಂದುತ್ವದ ಉದ್ದೇಶಕ್ಕೆ ಕೇವಲ ಬಾಯಿಮಾತಿನ ಸೇವೆ ಸಲ್ಲಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಸಂಜಯ್ ರಾವುತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ 25 ವರ್ಷ ವ್ಯರ್ಥ; ಶಿವಸೇನೆ ಬಿಜೆಪಿ ತೊರೆದಿದೆಯೇ ಹೊರತು ಹಿಂದುತ್ವವನ್ನಲ್ಲ: ಉದ್ಧವ್ ಠಾಕ್ರೆ

1987- 88ರ ಸಮಯದಲ್ಲಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಮತ ಕೇಳಿತ್ತು. ಆ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಿತ್ತು. ನಂತರವೇ ಬಿಜೆಪಿ ಶಿವಸೇನೆ ಜೊತೆ ಮೈತ್ರಿಗೆ ಮುಂದಾಗಿತ್ತು. ಹಿಂದೂಗಳ ಮತ ಒಡೆದು ಹಂಚಿಹೋಗುವುದನ್ನು ತಡೆಗಟ್ತಲು ಭಾಳಾ ಸಾಬ್ ಠಾಕ್ರೆ ಅಂದು ಮೈತ್ರಿಗೆ ಮನಸ್ಸು ಮಾಡಿದ್ದರು. ಈ ಇತಿಹಾಸ ಬಿಜೆಪಿಯವರಿಗೆ ಮರೆತುಹೋಗಿದೆ ಎಂದು ರಾವುತ್ ಅಣಕವಾಡಿದ್ದಾರೆ.

ಇದನ್ನೂ ಓದಿ:  ತ್ರಿವರ್ಣ ಧ್ವಜಕ್ಕೆ ಅಪಮಾನ; ಅಮೇಜಾನ್ ವಿರುದ್ಧ ಭುಗಿಲೆದ್ದ ಆಕ್ರೋಶ



Read more

[wpas_products keywords=”deal of the day”]