ಹೈಲೈಟ್ಸ್:
- ದಾವಣಗೆರೆ ತಾಲೂಕು ಎಲೆಬೇತೂರಿನಲ್ಲಿ ಘಟನೆ
- ಹಣ, ಆಸ್ತಿಗಾಗಿ ಕೊಲೆ ನಡೆದಿರುವ ಶಂಕೆ
- ದಂಪತಿಗೆ ಮೂವರು ಹೆಣ್ಣು ಮಕ್ಕಳು
ಗ್ರಾಮದ ಶ್ರೀಸಿದ್ದೇಶ್ವರ ದೇವಸ್ಥಾನ ರಸ್ತೆಯ ನಿವಾಸಿಗಳಾದ ಗುರುಸಿದ್ದಯ್ಯ (80), ಸರೋಜಮ್ಮ (75) ಮೃತರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೂವರಿಗೂ ವಿವಾಹವಾಗಿದೆ. ದಂಪತಿಗಳು ಇಬ್ಬರೇ ವಾಸವಿದ್ದರು.
ಎದುರು ಮನೆಯ ಮಹಿಳೆಯೊಬ್ಬರು ಮಂಗಳವಾರ ಬೆಳಗ್ಗೆ ಸರೋಜಮ್ಮ ಅವರನ್ನು ಮಾತನಾಡಿಸಲು ಮನೆಗೆ ಹೋದಾಗ ಮುಂಬಾಗಿಲು ತೆರೆದಿತ್ತು. ಅನುಮಾನಗೊಂಡು ಒಳಗೆ ಹೋಗಿ ನೋಡಿದಾಗ ದಂಪತಿ ರಕ್ತದ ಮಡುವಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಗುರುಸಿದ್ದಯ್ಯ, ಸರೋಜಮ್ಮ ದಂಪತಿ ಮನೆಯಲ್ಲಿ ಸಂಗ್ರಹವಾಗುವ ಮುಸುರೆ, ಉಳಿದ ಆಹಾರವನ್ನು ದನಗಳಿಗೆ ತಿನ್ನಿಸಲು ತಮ್ಮ ಮನೆ ಎದುರು ವಾಸವಿದ್ದ ಮಹಿಳೆಗೆ ಕೊಡುತ್ತಿದ್ದರು. ಮಂಗಳವಾರ ಕೂಡ ಎಂದಿನಂತೆ ದನಗಳಿಗಾಗಿ ಮುಸುರೆ ಕೇಳಲು ನೆರೆ ಮನೆಯ ಮಹಿಳೆ ಹೋಗಿದ್ದಾರೆ. ಪ್ರತಿ ದಿನ ಬೇಗ ಎದ್ದು ಕಸ ಗುಡಿಸಿ ಸ್ವಚ್ಛಗೊಳಿಸುತ್ತಿದ್ದ ಅಜ್ಜಿ, ಮನೆಯಿಂದ ಹೊರಗೆ ಬಾರದಿರುವುದನ್ನು ಕಂಡು, ಬಾಗಿಲ ಬಳಿ ಹೋಗಿ ಕದ ತಳ್ಳಿದಾಗ ಕದ ತೆರೆದುಕೊಂಡಿದೆ. ಮಹಿಳೆ ಒಳ ಹೋಗಿ ನೋಡಿದಾಗ ದಂಪತಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ದಂಪತಿಯ ಮೊದಲ ಪುತ್ರಿಯನ್ನು ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿದೆ. ಎರಡನೇ ಹಾಗೂ ಮೂರನೇ ಮಕ್ಕಳು ದಾವಣಗೆರೆಯಲ್ಲಿ ವಾಸವಿದ್ದಾರೆ. ಪತಿ ಜತೆ ಹೊಂದಾಣಿಕೆಯಾಗದ ಕಾರಣ ವಿವಾಹವಾದ ಕೆಲವೇ ದಿನಗಳಲ್ಲಿ ಮೊದಲ ಪುತ್ರಿ ಗಂಡನ ಮನೆಯಿಂದ ಬಂದು, ತಂದೆ ತಾಯಿ ಜತೆ ಪುತ್ರನೊಂದಿಗೆ ವಾಸವಿದ್ದರು. ನಂತರ ದಂಪತಿಯ ಹಿರಿಯ ಮಗಳು ಮೊಮ್ಮಗ ಎರಡು ವರ್ಷದಿಂದ ಬಸಾಪುರ ಗ್ರಾಮದಲ್ಲಿ ವಾಸವಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯ ಹಿರಿಯ ಮಗಳ ಪುತ್ರನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಆಸ್ತಿಗಾಗಿ ನಡೆಯಿತಾ ಹತ್ಯೆ?
ಗುರುಸಿದ್ದಯ್ಯ ಮತ್ತು ಸರೋಜಮ್ಮ ದಂಪತಿ ಸ್ಥಿತಿವಂತರಾಗಿದ್ದು, ಎಲೆಬೇತೂರು ಗ್ರಾಮದಲ್ಲೇ 3 ಎಕರೆ ಅಡಿಕೆ ತೋಟ ಹೊಂದಿದ್ದಾರೆ. ತೋಟದ ಸುತ್ತ ಸುಮಾರು 80 ಲಕ್ಷ ರೂ. ಮೌಲ್ಯದ ತೇಗದ ಮರಗಳಿವೆ. ಇವರ ಆಸ್ತಿ ಮೇಲೆ ಕಣ್ಣು ಇರಿಸಿದ್ದ ಯಾರೋ ಹತ್ಯೆ ಮಾಡಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಣಕ್ಕಾಗಿ ದಂಪತಿಯ ಹತ್ಯೆ ನಡೆದಿರಬಹುದು ಎಂದು ಈಗಾಗಲೇ ಪೊಲೀಸರು ಅನುಮಾನ ವ್ಯಕ್ತಪಡಿಸಿರುವುದು ಗ್ರಾಮಸ್ಥರ ವಾದಕ್ಕೆ ಪುಷ್ಟಿ ನೀಡಿದೆ.
Read more
[wpas_products keywords=”deal of the day sale today offer all”]