ಹೈಲೈಟ್ಸ್:
- ಬೀಟಿಂಗ್ ರಿಟ್ರೀಟ್ನಿಂದ ಕೈಬಿಟ್ಟʼಅಬೈಡ್ ವಿತ್ ಮಿʼ ಗೀತೆ!
- ಕೇಂದ್ರದ ನಡೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ
- ಭಾರತದ ಬಹುತ್ವ ಸಂಸ್ಕೃತಿಗೆ ಚ್ಯುತಿ ತರುವ ಯತ್ನವೂ ಹೌದು
ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ನಡೆದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮನೆಯಲ್ಲೂ ಮೀಟಿಂಗ್; ಯತ್ನಾಳ್ ಭಾಗಿ
ಜನವರಿ 29ರಂದು ನಡೆಯುವ ಬೀಟಿಂಗ್ ರಿಟ್ರೀಟ್ನಿಂದ ಗಾಂಧೀಜಿ ಅವರ ನೆಚ್ಚಿನ ʼಅಬೈಡ್ ವಿತ್ ಮಿʼ ಗೀತೆಯನ್ನು ತೆಗೆದುಹಾಕಿರುವುದು ನ್ಯಾಯಯುತ ನಿರ್ಧಾರವಲ್ಲ. 2020ರಲ್ಲೂ ಇದೇ ರೀತಿ ಮಾಡಿ ಜನರ ಒತ್ತಾಯದ ನಂತರ 2021ರಲ್ಲಿ ಮತ್ತೆ ಗೀತೆಯನ್ನು ಸೇರಿಸಿದ್ದ ಕೇಂದ್ರ ಸರ್ಕಾರಕ್ಕೆ ಇನ್ನೂ ತನ್ನ ತಪ್ಪಿನ ಅರಿವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬೈಡ್ ವಿತ್ ಮಿ ಗೀತೆಯನ್ನು ತೆಗೆದುಹಾಕಿರುವುದು ಭಾರತದ ಬಹುತ್ವ ಸಂಸ್ಕೃತಿಗೆ ಚ್ಯುತಿ ತರುವ ಯತ್ನವೂ ಹೌದು. ಗಾಂಧೀಜಿ ಅವರು ಸಬರಮತಿ ಆಶ್ರಮದಲ್ಲಿ ಮೈಸೂರು ಬ್ಯಾಂಡ್ ನುಡಿಸಿದ ಈ ಗೀತೆಯನ್ನು ಮೊದಲ ಬಾರಿಗೆ ಕೇಳಿ ಇಷ್ಟಪಟ್ಟಿದ್ದರು. ಅಲ್ಲಿಂದ ಈ ಗೀತೆಯು ಸಬರಮತಿಯ ಭಜನಾವಳಿಯಲ್ಲಿ ಸೇರ್ಪಡೆಯಾಗಿದೆ.
ಗಾಂಧೀಜಿ ಅವರ ಆದರ್ಶಗಳನ್ನು ಪ್ರಚಾರಕ್ಕಷ್ಟೇ ಬಳಸುವ ಕೇಂದ್ರ ಸರ್ಕಾರ ತನ್ನ ಆಚಾರ- ವಿಚಾರಗಳಿಂದ ಅಂತಹ ಆದರ್ಶಗಳನ್ನು ದೂರ ಇಟ್ಟಿದೆ ಎಂಬುದು ಇನ್ನೊಮ್ಮೆ ದೃಢಪಟ್ಟಿದೆ. 1950ರಿಂದಲೂ ನಡೆದುಬಂದಿರುವ ಸಂಪ್ರದಾಯವನ್ನು ಮುರಿಯುವ ಇಂಥ ʼಮನೆ ಮುರುಕʼ ನಿರ್ಧಾರವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.
Read more
[wpas_products keywords=”deal of the day sale today offer all”]