The New Indian Express
ಮಡಿಕೇರಿ: ಕೊಡಗಿನ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಸಾಟ್ ಚಾರಿಟಬಲ್ ಟ್ರಸ್ಟ್ ವತಿಯಿಂದ 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಲಾಗಿದೆ. ಸುಧಾರಿತ ಈ ತರಗತಿ ಕೊಠಡಿಗಳು ಗ್ರಾಮದ ಅನೇಕ ಬುಡಕಟ್ಟು ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.
ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ, ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆ ಅಪಾರ ಹಾನಿಯನ್ನು ಅನುಭವಿಸಿದೆ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದುರ್ಬಲ ಶಾಲಾ ಕಟ್ಟಡದ ಒಳಗೆ ಸೋರುವ ಛಾವಣಿಯ ಅಡಿಯಲ್ಲಿ ಓದುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಾಲೆಯ ಈ ಪರಿಸ್ಥಿತಿಯಿಂದ ಎಚ್ಚೆತ್ತ ಒನ್ ಸ್ಕೂಲ್ ಎ ಟೈಮ್(ಒಸಾಟ್) ಚಾರಿಟಬಲ್ ಟ್ರಸ್ಟ್ ಸದಸ್ಯರು 40 ಲಕ್ಷ ರೂ.ಗೆ ಸುಧಾರಿತ ಸೌಲಭ್ಯಗಳೊಂದಿಗೆ ನಾಲ್ಕು ಹೊಸ ಕೊಠಡಿಗಳನ್ನು ಶಾಲೆಯ ಆವರಣದಲ್ಲಿ ನಿರ್ಮಿಸಲು ಮುಂದೆ ಬಂದರು. ಇದಲ್ಲದೆ, ಸರಿಯಾದ ಶೌಚಾಲಯದ ಕೊರತೆ ಎದುರಿಸುತ್ತಿದ್ದ ಶಾಲೆಯಲ್ಲಿ ಒಸಾಟ್ ವಿದ್ಯಾರ್ಥಿನಿಯರಿಗಾಗಿ 6 ಲಕ್ಷ ರೂಪಾಯಿಗಳಲ್ಲಿ ಶೌಚಾಲಯ ನಿರ್ಮಿಸಿದೆ.
2020 ರಲ್ಲಿ, ಒಸಾಟ್ ನ ಸದಸ್ಯರಾದ ಪಿವಿ ಸುಬ್ರಹ್ಮಣ್ಯ, ರಮೇಶ್ ಬಾಬು ಮತ್ತು ಎನ್ ವಿ ಗೋಪಾಲಕೃಷ್ಣ ಭಟ್ ಸೇರಿದಂತೆ ಹಲವರು ಶಾಲೆ ಭೇಟಿ ನೀಡಿದ್ದರು ಮತ್ತು ಒಂದು ವರ್ಷದ ಅವಧಿಯಲ್ಲಿ ಸುಧಾರಿತ ತರಗತಿಗಳನ್ನು ನಿರ್ಮಿಸುವ ಭರವಸೆ ನೀಡಿದ್ದರು. ಇದೀಗ ನಾಲ್ಕು ಹೊಸ ಕೊಠಡಿ ಹಾಗೂ ಶೌಚಾಲಯ ಕಾಮಗಾರಿ ಪೂರ್ಣಗೊಂಡಿದ್ದು, ಸೋಮವಾರ ಶಾಸಕ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಿದರು.
ಇದನ್ನು ಓದಿ: ಕುಟುಂಬದಿಂದ ದೂರ ಆದವರನ್ನು ಮನೆಗೆ ಮರಳಿಸುವ, ತಪ್ಪಿಸಿಕೊಂಡವರಿಗೆ ಆಶ್ರಯ ನೀಡುವ ಮಡಿಕೇರಿಯ ಥನಾಲ್ ಆಶ್ರಮ
ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಬೋಪಯ್ಯ, ಸಮೃದ್ಧ ದೇಶ ನಿರ್ಮಾಣಕ್ಕೆ ಶಿಕ್ಷಣ ಬೆನ್ನೆಲುಬು. ಗ್ರಾಮೀಣ ಭಾರತದಲ್ಲಿ ಶಿಕ್ಷಣವನ್ನು ಉತ್ತೇಜಿಸುವುದು ಬಡ ಕುಟುಂಬದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ. ಒಸಾಟ್ ಚಾರಿಟೇಬಲ್ ಟ್ರಸ್ಟ್ ಗ್ರಾಮೀಣ ಮಕ್ಕಳ ಶಿಕ್ಷಣವನ್ನು ಸಕ್ರಿಯಗೊಳಿಸಿದೆ ಮತ್ತು ಬೆಂಬಲಿಸಿದೆ ಎಂದು ಹೇಳಿದರು.
ದೇಶಾದ್ಯಂತ ಈ ಚಾರಿಟೇಬಲ್ ಟ್ರಸ್ಟ್ನಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಕರು ಕೆಲಸ ಮಾಡುತ್ತಿದ್ದು, ಮಾಯಮುಡಿ ಶಾಲೆಯು ಟ್ರಸ್ಟ್ನಿಂದ ಪೂರ್ಣಗೊಂಡ 51ನೇ ಶಾಲಾ ಯೋಜನೆಯಾಗಿದೆ.
Read more
[wpas_products keywords=”deal of the day”]