Karnataka news paper

‘ಓಡಿಐ ಸರಣಿಗೆ ಕೊಹ್ಲಿ ಅಲಭ್ಯತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ’ : ಬಟ್‌!


ಹೈಲೈಟ್ಸ್‌:

  • ರೋಹಿತ್‌-ಕೊಹ್ಲಿ ಅಲಭ್ಯತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಲಾಭದಾಯಕ: ಸಲ್ಮಾನ್‌ ಬಟ್‌
  • ಓಡಿಐ ಸರಣಿಗೆ ವಿರಾಮ ಪಡೆಯಲು ವಿರಾಟ್‌ ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.
  • ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಟೆಸ್ಟ್ ಸರಣಿಯಿಂದ ಈಗಾಗಲೇ ಹೊರ ಬಿದ್ದಿರುವ ರೋಹಿತ್‌.

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್‌ ಸರಣಿಯಿಂದ ರೋಹಿತ್ ಶರ್ಮಾ ಹೊರ ನಡೆದಿರುವುದು ಹಾಗೂ ಓಡಿಐ ಸರಣಿಗೆ ವಿರಾಟ್‌ ಕೊಹ್ಲಿ ಅಲಭ್ಯರಾಗುತ್ತಿರುವುದು ಖಂಡಿತವಾಗಿಯೂ ಎದುರಾಳಿ ತಂಡಕ್ಕೆ ಲಾಭದಾಯಕವಾಗಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್‌ ಎಚ್ಚರಿಕೆ ನೀಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಮುಗಿದ ಬಳಿಕ ವಿರಾಟ್‌ ಕೊಹ್ಲಿ ಭಾರತ ಚುಟುಕು ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಆ ಮೂಲಕ ಓಡಿಐ ಹಾಗೂ ಟೆಸ್ಟ್‌ ತಂಡದ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ, ಕಳೆದ ವಾರ ಬಿಸಿಸಿಐ ರೋಹಿತ್‌ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನು ನೀಡಿತ್ತು. ಆ ಮೂಲಕ ಕೊಹ್ಲಿಗೆ ಶಾಕ್‌ ನೀಡಿತ್ತು

ಇದರಿಂದ ಆಘಾತಕ್ಕೊಳಗಾಗಿದ್ದ ವಿರಾಟ್‌ ಕೊಹ್ಲಿ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರು ವೈಯಕ್ತಿಕ ಕಾರಣಗಳಿಂದ ಅಲ್ಪ ವಿರಾಮ ತೆಗೆದುಕೊಳ್ಳಲು ಬಯಸುತ್ತಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದ ಓಡಿಐ ಸರಣಿಗೆ ಅಲಭ್ಯರಾಗುತ್ತಿದ್ದಾರೆ. ಒಂದು ಕಡೆ ಗಾಯದಿಂದ ಟೆಸ್ಟ್‌ ಸರಣಿಯಿಂದ ರೋಹಿತ್‌ ಹೊರ ನಡೆದಿದ್ದರೆ, ಇದೀಗ ಕೊಹ್ಲಿ ಓಡಿಐ ಸರಣಿಗೆ ವಿರಾಮ ಪಡೆಯುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಭಾರತಕ್ಕೆ ಶಾಕ್‌, ದ. ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಿಂದ ರೋಹಿತ್‌ ಔಟ್!

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿದ ಸಲ್ಮಾನ್‌ ಬಟ್‌, “ಭಾರತೀಯ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಸಂಗತಿಗಳು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಅಲ್ಪ ವಿರಾಮ ಪಡೆಯಲು ವಿರಾಟ್‌ ಕೊಹ್ಲಿ ನೀಡಿರುವ ಕಾರಣವನ್ನು ಯಾರೂ ಪರಿಗಣಿಸುವುದಿಲ್ಲ. ನಾನು ಕೂಡ ಅಷ್ಟೇ ಇದಕ್ಕೆ ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ,” ಎಂದಿದ್ದಾರೆ.

“ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಗೆ ವಿರಾಟ್‌ ಕೊಹ್ಲಿ ಅಲಭ್ಯರಾಗುತ್ತಿರುವುದು ಹಾಗೂ ಓಡಿಐ ಸರಣಿಗೆ ವಿರಾಟ್‌ ಕೊಹ್ಲಿ ವಿರಾಮ ಪಡೆಯುತ್ತಿರುವುದು ಕೇವಲ ಕಾಕತಾಳೀಯವಾಗಿರಬಹುದು. ಈ ಬಗ್ಗೆ ನಾನು ಚರ್ಚೆಯನ್ನು ಮುಂದುವರಿಸಿದರೆ, ಇದಕ್ಕೆ ನಿಜವಾದ ಕಾರಣ ತಿಳಿದುಕೊಳ್ಳಬಹುದು,” ಎಂದು ಹೇಳಿದ್ದಾರೆ.

ರೋಹಿತ್‌ ಸ್ಥಾನದಲ್ಲಿ ಭಾರತ ತಂಡ ಸೇರಿದ ಪ್ರಿಯಾಂಕ್ ಪಾಂಚಾಲ್‌ ಯಾರು?!

ವಿರಾಟ್‌ ಕೊಹ್ಲಿ ಓಡಿಐ ಸರಣಿಗೆ ಹಾಗೂ ರೋಹಿತ್ ಶರ್ಮಾ ಟೆಸ್ಟ್‌ ಸರಣಿಗೆ ಅಲಭ್ಯರಾಗುತ್ತಿರುವುದು ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಲಾಭದಾಯಕವಾಗಲಿದೆ ಎಂದು ಇದೇ ವೇಳೆ ಸಲ್ಮಾನ್‌ ಬಟ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯನ್ನು ಭಾರತ ತಂಡ ಟೆಸ್ಟ್‌ ಹಾಗೂ ಓಡಿಐ ಸರಣಿಗಳಿಗೆ ಕ್ರಮವಾಗಿ ಕಳೆದುಕೊಳ್ಳಲಿದೆ. ಈ ಎರಡೂ ಸರಣಿಗಳಲ್ಲಿ ಈ ಇಬ್ಬರ ಸ್ಥಾನವನ್ನು ತುಂಬುವುದು ಪ್ರಶ್ನೆಯಾಗಿದೆ. ಕೀ ಆಟಗಾರರ ಸೇವೆಯನ್ನು ಟೀಮ್‌ ಇಂಡಿಯಾ ಕಳೆದುಕೊಳ್ಳುತ್ತಿರುವುದರಿಂದ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ನಿಟ್ಟುಸಿರು ಬಿಟ್ಟಂತಾಗಿದೆ. ರೋಹಿತ್‌ ಉಪಸ್ಥಿತಿ ಫಲಿತಾಂಶದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಟೆಸ್ಟ್‌ ಸರಣಿಯಲ್ಲಿ ಅವರು ಅಲಭ್ಯರಾಗಿರುವುದು ತಂಡಕ್ಕೆ ದೊಡ್ಡ ನಷ್ಟವಾಗಿದೆ,” ಎಂದು ಪಾಕ್‌ ಮಾಜಿ ವಿಕೆಟ್‌ ಕೀಪರ್‌ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿಯಿಂದ ವಿರಾಟ್‌ ಕೊಹ್ಲಿ ಔಟ್‌?

ರೋಹಿತ್‌ ಶರ್ಮಾ ಸ್ಥಾನ ತುಂಬಲು ಸಾಧ್ಯವಿಲ್ಲ: ಬಟ್

ಟೆಸ್ಟ್ ತಂಡದಲ್ಲಿ ರೋಹಿತ್‌ ಶರ್ಮಾ ಸ್ಥಾನಕ್ಕೆ ಗುಜರಾತ್‌ ಮೂಲದ ಪ್ರಿಯಾಂಕ್‌ ಪಾಂಚಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ‘ಎ’ ತಂಡವನ್ನು ಪಾಂಚಲ್‌ ಮುನ್ನಡೆಸಿದ್ದರು. ರೋಹಿತ್‌ ಶರ್ಮಾ ಸ್ಥಾನವನ್ನು ಯುವ ಆಟಗಾರರು ತುಂಬಲು ಸಾಧ್ಯವಿಲ್ಲ ಎಂಬುದು ಪಾಕ್‌ ಮಾಜಿ ನಾಯಕನ ಅಭಿಪ್ರಾಯ.

ರೋಹಿತ್‌ ಸ್ಥಾನಕ್ಕೆ ಪ್ರಿಯಾಂಕ್‌ ಆಯ್ಕೆ ಮಾಡಿರುವುದಕ್ಕೆ ಚೋಪ್ರಾ ಬೇಸರ!

“ಭಾರತ ತಂಡ ಕೆಲ ಪ್ರತಿಭಾವಂತ ಯುವ ಆಟಗಾರರನ್ನು ಒಳಗೊಂಡಿದೆ. ಶ್ರೇಯಸ್‌ ಅಯ್ಯರ್‌, ಮಯಾಂಕ್‌ ಅಗರ್ವಾಲ್‌ ಹಾಗೂ ಪ್ರಿಯಾಂಕ್‌ ಪಾಂಚಲ್‌ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಪಾಂಚಲ್‌ ಉತ್ತಮ ಅರ್ಹತೆಯನ್ನು ಹೊಂದಿದ್ದಾರೆ. ಆದರೆ ರೋಹಿತ್‌ ಶರ್ಮಾ ಅವರ ಅನುಭವ ಹಾಗೂ ಮ್ಯಾಚ್‌ ವಿನ್ನಿಂಗ್‌ ಸಾಮರ್ಥ್ಯಕ್ಕೆ ಯುವ ಆಟಗಾರರು ಸೂಕ್ತವಾಗುವುದಿಲ್ಲ. ಇತ್ತೀಚೆಗೆ ಭಾರತ ‘ಎ’ ತಂಡದ ಪರ ಪಾಂಚಲ್‌ ಆಡಿದ್ದಾರೆ. ಹಾಗಾಗಿ ಅವರು ಎಷ್ಟರ ಮಟ್ಟಿಗೆ ಈ ಪ್ರವಾಸದಲ್ಲಿ ಪ್ರಭಾವ ಬೀರಲಿದ್ದಾರೆಂದು ತಿಳಿಯಲಿದೆ,” ಎಂದು ಸಲ್ಮಾನ್‌ ಬಟ್‌ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ರವೀಂದ್ರ ಜಡೇಜಾ ವಿದಾಯ ಹೇಳುವ ಸಾಧ್ಯತೆ!



Read more