ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ಗೆ ಪೂರ್ವಭಾವಿಯಾಗಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಕೇಂದ್ರ ಸರಕಾರ ನಡೆದುಕೊಂಡಿದ್ದು, ಒಬ್ಬ ಶ್ರೇಷ್ಠ ದಾರ್ಶನಿಕ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಉದ್ದೇಶಪೂರ್ವಕ ಅವಕಾಶ ಕೊಡದಿರುವುದು ಖಂಡನೀಯ ಎಂದು ಹೇಳಿದರು.
ಮಾಜಿ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಬ್ಲಾಕ್ ಹಿಂದುಳಿದ ವರ್ಗಗಗಳ ವಿಭಾಗ ಅಧ್ಯಕ್ಷ ದೀಪಕ್ ಪಿಲಾರ್, ಡಿಸಿಸಿ ಸದಸ್ಯ ಸುರೇಶ್ ಭಟ್ನಗರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸದಸ್ಯ ರಾಜಾ ಬಂಡಸಾಲೆ ಹಾಗೂ ಸೇವಾ ದಳದ ಅಧ್ಯಕ್ಷ ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.
26ರಂದು ಮೆರವಣಿಗೆ
ಮಂಗಳೂರು ಕ್ಷೇತ್ರದಾದ್ಯಂತ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಕಾಂಗ್ರೆಸ್ ಮುಖಂಡರ ಸಹಕಾರದಿಂದ ಜ. 26ರಂದು ನಾರಾಯಣ ಗುರುಗಳ ಸ್ತಬ್ಧಚಿತ್ರದ ಪ್ರದರ್ಶನ ಮೆರವಣಿಗೆ ಮೂಲಕ ಸಾಗಲಿದೆ. ಕೊಲ್ಯ ಬ್ರಹ್ಮಶ್ರೀ ನಾರಾಯಣಗುರುಗಳ ಭಜನಾ ಮಂದಿರದಿಂದ ಬೆಳಗ್ಗೆ ಮೆರವಣಿಗೆ ಹೊರಡಲಿದ್ದು ಕೊಲ್ಯ-ಬಂಡಿಕೊಟ್ಯ, ಸೋಮೇಶ್ವರ, ಬೀರಿ, ಕಿನ್ಯ, ಮಂಜನಾಡಿ, ಗ್ರಾಮಚಾವಡಿ, ಬೋಳಿಯಾರು, ಇರಾ, ಕುರ್ನಾಡು ಮೂಲಕ ಸಂಚರಿಸಿ ಸಂಜೆ ನಾಲ್ಕು ಗಂಟೆಗೆ ತೊಕ್ಕೊಟ್ಟಿನಲ್ಲಿ ಸಮಾರೋಪಗೊಳ್ಳಲಿದೆ ಎಂದು ಡಿಸಿಸಿ ಸದಸ್ಯ ಸುರೇಶ್ ಭಟ್ನಗರ ತಿಳಿಸಿದರು.
Read more
[wpas_products keywords=”deal of the day sale today offer all”]