ಹೈಲೈಟ್ಸ್:
- ಅನೇಕ ಮಹಾನ್ ವ್ಯಕ್ತಿತ್ವಗಳ ಕೊಡುಗೆ ಅಳಿಸುವ ಪ್ರಯತ್ನ ಮಾಡಲಾಗಿದೆ
- ಹಲವು ದಶಕಗಳ ಬಳಿಕ ಈಗ ಆ ತಪ್ಪುಗಳನ್ನು ಸರಿಪಡಿಸಲಾಗುತ್ತಿದೆ
- 28 ಅಡಿ ಎತ್ತರದ 3ಡಿ ನೇತಾಜಿಯ ಹೊಲೊಗ್ರಾಮ್ ಪ್ರತಿಮೆ ಅನಾವರಣ
- ಕೃತಕ 3ಡಿ ಪ್ರತಿಮೆ ಜಾಗದಲ್ಲಿ ಗ್ರಾನೈಟ್ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಸ್ವಾತಂತ್ರ್ಯಾನಂತರ ನಮ್ಮ ಹೀರೋಗಳ ಪಾತ್ರಗಳು ಮತ್ತು ನೆನಪುಗಳನ್ನು ಅಳಿಸಿ ಹಾಕಲಾಗಿತ್ತು. ಅವುಗಳನ್ನು ಈಗ ಪುನರುಜ್ಜೀವನಗೊಳಿಸಲಾಗುತ್ತಿದೆ’ ಎಂದು ಹೇಳಿದರು.
ನೇತಾಜಿ ಸಾವಿನ ರಹಸ್ಯ ಬಹಿರಂಗಪಡಿಸಿ: ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ
ಸ್ವಾತಂತ್ರ್ಯ ಬಂದ ಬಳಿಕ ಸತತವಾಗಿ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ‘ಸ್ವಾತಂತ್ರ ಬಂದ ಬಳಿಕ ದುರದೃಷ್ಟವಶಾತ್, ನಮ್ಮ ದೇಶದ ಸಂಸ್ಕೃತಿ ಮತ್ತು ಆಚರಣೆಗಳ ಜತೆಗೆ, ಅನೇಕ ಮಹಾನ್ ವ್ಯಕ್ತಿತ್ವಗಳ ಕೊಡುಗೆಯನ್ನು ಅಳಿಸಿ ಹಾಕಲು ಕೆಲಸಗಳು ನಡೆದಿದ್ದವು’ ಎಂದು ಟೀಕಿಸಿದರು.
‘ಸ್ವಾತಂತ್ರ್ಯ ಹೋರಾಟವು ಲಕ್ಷಾಂತರ ಜನರ ತ್ಯಾಗ ಬಲಿದಾನಗಳನ್ನು ಒಳಗೊಂಡಿದೆ. ಆದರೆ ಅವರ ಇತಿಹಾಸವನ್ನು ಕೂಡ ಸೀಮಿತಗೊಳಿಸಲು ಪ್ರಯತ್ನಗಳು ನಡೆದಿವೆ. ಆದರೆ ಇಂದು, ಸ್ವಾತಂತ್ರ್ಯ ಬಂದ ದಶಕಗಳ ಬಳಿಕ ದೇಶವು ತನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಿದೆ’ ಎಂದು ಹೇಳಿದರು.
‘ಕಳೆದ ವರ್ಷ ಇದೇ ದಿನ, ಕೋಲ್ಕತಾದಲ್ಲಿರುವ ನೇತಾಜಿ ಅವರ ಪೂರ್ವಜರ ಮನೆಗೆ ಭೇಟಿ ನೀಡುವ ಅವಕಾಶ ದೊರಕಿತ್ತು. ಅವರು ಕೋಲ್ಕತಾ ತೊರೆದ ಕಾರು, ಅವರು ಅಧ್ಯಯನ ಮಾಡಲು ಬಳಸುತ್ತಿದ್ದ ಕೊಠಡಿ, ಅವರ ಮನೆಯ ಗೋಡೆಗಳು, ಮನೆಯ ಮೆಟ್ಟಿಲುಗಳನ್ನು, ಅವರನ್ನು ನೋಡುವುದು ಪದಗಳನ್ನು ಮೀರಿದ ಅನುಭವ’ ಎಂದು ಹೇಳಿದರು.
ಇಂಡಿಯಾ ಗೇಟ್ನಲ್ಲಿ ತಲೆ ಎತ್ತಲಿದೆ ನೇತಾಜಿ ಸುಭಾಷ್ ಚಂದ್ರರ ಭವ್ಯ ಪ್ರತಿಮೆ : ಮೋದಿ ಘೋಷಣೆ
‘ಸ್ವಾತಂತ್ರ್ಯದ ಅಮೃತ ಮಹೋತ್ಸವವು ಭಾರತವು ತನ್ನ ಗುರುತು ಹಾಗೂ ಸ್ಫೂರ್ತಿಗಳನ್ನು ಪುನಶ್ಚೇತನಗೊಳಿಸಲು ನೆರವಾಗಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.
28 ಅಡಿ ಎತ್ತರ ಮತ್ತು ಆರು ಅಡಿ ಅಗಲದ ಹೊಲೊಗ್ರಾಮ್ ಪ್ರತಿಮೆಯು 30,000 ದೀಪಗಳು ಮತ್ತು 4 ಸಾವಿರ ಪ್ರೊಜೆಕ್ಟರ್ಗಳನ್ನು ಒಳಗೊಂಡಿದೆ. ಅಧಿಕ ಸಾಂದ್ರತೆಯಲ್ಲಿ ಬೆಳಕು ಹರಿಸಲಾಗುತ್ತದೆ. ಶೇ 90ರಷ್ಟು ಪಾರದರ್ಶಕವಾಗಿರುವ ಹೊಲೊಗ್ರಾಫಿಕ್ ಪರದೆಯು ಜನರಿಗೆ ಕಾಣಿಸುವುದಿಲ್ಲ. ಈ ಹೊಲೊಗ್ರಾಮ್ ಜಾಗದಲ್ಲಿ ಗ್ರಾನೈಟ್ ಪ್ರತಿಮೆ ಸ್ಥಾಪಿಸಲಾಗುತ್ತದೆ. ಈಗಿರುವ ವರ್ಚ್ಯುವಲ್ ರಿಯಾಲಿಟಿ ಅಥವಾ 3ಡಿ ವಿಡಿಯೋ ಅನ್ನು ಪ್ರತಿಯೊಬ್ಬರೂ 3ಡಿ ಗ್ಲಾಸ್ ಇಲ್ಲದೆಯೂ ನೋಡಬಹುದಾಗಿದೆ.
Read more
[wpas_products keywords=”deal of the day sale today offer all”]