Karnataka news paper

ದ್ವೇಷ ಭಾಷಣಗಳಿಗೆ ಮುಸ್ಲಿಂ ಮುಖಂಡರನ್ನೂ ಬಂಧಿಸಿ: ಸುಪ್ರೀಂಕೋರ್ಟ್‌ಗೆ ಬಲಪಂಥೀಯ ಸಂಘಟನೆಗಳ ಅರ್ಜಿ


ಹೈಲೈಟ್ಸ್‌:

  • ಸುಪ್ರೀಂಕೋರ್ಟ್‌ಗೆ ಎರಡು ಬಲಪಂಥೀಯ ಸಂಘಟನೆಗಳಿಂದ ಅರ್ಜಿ
  • ಹಿಂದೂ ಧಾರ್ಮಿಕ ಮುಖಂಡರ ಮೇಲೆ ಅಪವಾದ ಹೊರಿಸಲು ಪ್ರಯತ್ನ
  • ಮುಸ್ಲಿಂ ಮುಖಂಡರು ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ
  • ಓವೈಸಿ, ವಾರಿಸ್ ಪಠಾಣ್‌ರಂತಹ ಮುಖಂಡರನ್ನು ಬಂಧಿಸಬೇಕು
  • ಹಿಂದೂ ಸೇನಾ ಮತ್ತು ಹಿಂದೂ ಫ್ರಂಟ್ ಫಾರ್ ಜಸ್ಟೀಸ್‌ನಿಂದ ಅರ್ಜಿ

ಹೊಸದಿಲ್ಲಿ: ಹರಿದ್ವಾರ ಮತ್ತು ದಿಲ್ಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಪ್ರಕರಣಗಳ ವಿರುದ್ಧ ಎರಡು ಬಲಪಂಥೀಯ ಗುಂಪುಗಳು ಸುಪ್ರೀಂಕೋರ್ಟ್‌ನಲ್ಲಿ ಪ್ರತಿ ದೂರುಗಳನ್ನು ದಾಖಲಿಸಿವೆ. ಎರಡೂ ಸಂಘಟನೆಗಳು ತಮ್ಮನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿವೆ.

ಮುಸ್ಲಿಂ ಮುಖಂಡರನ್ನು ತಮ್ಮ ದ್ವೇಷ ಭಾಷಣ ಚಟುವಟಿಕೆಗಳಿಗಾಗಿ ಬಂಧಿಸಬೇಕು ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಒತ್ತಾಯಿಸಿದ್ದಾರೆ. ಧರ್ಮ ಸಂಸದ್‌ನಲ್ಲಿ ಧಾರ್ಮಿಕ ಮುಖಂಡರು ನೀಡಿದ ಹೇಳಿಕೆಗಳು, ಹಿಂದೂಯೇತರರು ಹಿಂದೂ ಸಂಸ್ಕೃತಿ ಮೇಲೆ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿದೆ. ಇದನ್ನು ‘ದ್ವೇಷ ಭಾಷಣ’ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಿದ್ದಾರೆ.
ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಉತ್ತರಾಖಂಡ, ದಿಲ್ಲಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್‌
‘ಹಿಂದೂ ಆಧ್ಯಾತ್ಮಿಕ ನಾಯಕರ ಮೇಲೆ ಅಪವಾದ ಹೊರಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅರ್ಜಿದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಮತ್ತು ಹಿಂದೂ ಧರ್ಮ ಸಂಸದ್ ಚಟುವಟಿಕೆಗಳು ಅಥವಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಎತ್ತಲು ಅವರಿಗೆ ಅಧಿಕಾರವಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಧಾರ್ಮಿಕ ವೇದಿಕೆಗಳಲ್ಲಿನ ಭಾಷಣಗಳು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದರ ವಿರುದ್ಧ ಪತ್ರಕರ್ತ ಕುರ್ಬಾನ್ ಅಲಿ ಸಲ್ಲಿಸಿದ್ದ ಅರ್ಜಿಗೆ ವಿರುದ್ಧವಾಗಿ ಹಿಂದೂಪರ ಸಂಘಟನೆಗಳು ಅರ್ಜಿ ಸಲ್ಲಿಸಿವೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ವಾರಿಸ್ ಪಠಾಣ್ ಅವರಂತಹ ಇತರೆ ವಿವಿಧ ಮುಸ್ಲಿಂ ಮುಖಂಡರು ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿರುವ ಹಿಂದೂ ಸೇನಾ ಅಧ್ಯಕ್ಷರು ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಮುಸ್ಲಿಮರ ವಿರುದ್ಧದ ದ್ವೇಷ ಭಾಷಣಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಹೀಗಾಗಿ ಅದು ಹಿಂದೂಗಳ ವಿರುದ್ಧದ ದ್ವೇಷ ಭಾಷಣಗಳನ್ನು ಕೂಡ ಪರಿಶೀಲಿಸಬೇಕು ಎಂದು ಮತ್ತೊಂದು ಸಂಘಟನೆ ಹಿಂದೂ ಫ್ರಂಟ್ ಫಾರ್ ಜಸ್ಟೀಸಸ್ ಒತ್ತಾಯಿಸಿದೆ. ಹಿಂದೂಗಳ ವಿರುದ್ಧದ ದ್ವೇಷ ಭಾಷಣಗಳ ಆರೋಪದ 25 ನಿದರ್ಶನಗಳನ್ನು ಅದು ಉಲ್ಲೇಖಿಸಿದೆ.
ದ್ವೇಷದ ಧ್ವನಿಗಳಿಗೆ ನಿಮ್ಮ ಮೌನವೇ ಪ್ರಚೋದನೆ!: ಪ್ರಧಾನಿ ಮೋದಿಗೆ ಐಐಎಂ ವಿದ್ಯಾರ್ಥಿ, ಸಿಬ್ಬಂದಿ ಪತ್ರ
ಹರಿದ್ವಾರ ಮತ್ತು ದಿಲ್ಲಿಯಲ್ಲಿ ನಡೆದ ದ್ವೇಷ ಭಾಷಣಗಳ ವಿರುದ್ಧ ಪತ್ರಕರ್ತ ಕುರ್ಬಾನ್ ಅಲಿ ಮತ್ತು ಪಟ್ನಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಅವರು ಅರ್ಜಿ ಸಲ್ಲಿಸಿದ್ದರು. ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವಂತೆ ಮತ್ತು ಹತ್ಯಾಕಾಂಡಗಳನ್ನು ನಡೆಸುವಂತೆ ಕರೆ ನೀಡಿದ್ದು ವಿವಾದ ಸೃಷ್ಟಿಸಿತ್ತು. ಈ ವಿಚಾರವಾಗಿ ಸಶಸ್ತ್ರ ಪಡೆಗಳ ಐವರು ನಿವೃತ್ತ ಸಿಬ್ಬಂದಿ ಮುಖ್ಯಸ್ಥರು, ನೂರಾರು ಅಧಿಕಾರಿಗಳು ಮತ್ತು ಹೆಸರಾಂತ ವ್ಯಕ್ತಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ವಿವರ ನೀಡುವಂತೆ ಕೇಂದ್ರ ಸರ್ಕಾರ, ಉತ್ತರಾಖಂಡ ಸರ್ಕಾರ ಮತ್ತು ದಿಲ್ಲಿ ಪೊಲೀಸರಿಗೆ ಜನವರಿ 12ರಂದು ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಅದರ ಬಳಿಕ ಉತ್ತರಾಖಂಡ ಪೊಲೀಸರು ಯತಿ ನರಸಿಂಗಾನಂದ ಮತ್ತು ಜಿತೇಂದ್ರ ನಾರಾಯಣ್ ತ್ಯಾಗಿ ಅವರನ್ನು ಬಂಧಿಸಿದ್ದರು.



Read more

[wpas_products keywords=”deal of the day sale today offer all”]