Karnataka news paper

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಕೆ: 42 ಸಾವಿರ ಜನರಿಗೆ ಸೋಂಕು


ಹೈಲೈಟ್ಸ್‌:

  • ಕರ್ನಾಟಕದಲ್ಲಿ 42470 ಮಂದಿ ಕೊರೊನಾ ಸೋಂಕಿತರು ಪತ್ತೆ
  • ಕಳೆದ 24 ಗಂಟೆಗಳಲ್ಲಿ 26 ಮಂದಿ ರೋಗಿಗಳು ಸೋಂಕಿಗೆ ಬಲಿ
  • ಶೇ 19.23ರಿಂದ ಶೇ 19.33ಕ್ಕೆ ಏರಿಕೆ ಕಂಡ ಪಾಸಿಟಿವಿಟಿ ದರ

ಬೆಂಗಳೂರು: ಕರ್ನಾಟಕದಲ್ಲಿ ಶನಿವಾರ ಕೂಡ 40 ಸಾವಿರಕ್ಕೂ ಅಧಿಕ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 42,470 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಶುಕ್ರವಾರ 48,049 ಮಂದಿಗೆ ಸೋಂಕು ಖಾತರಿಯಾಗಿತ್ತು. ಆದರೆ ಪಾಸಿಟಿವಿಟಿ ದರವು ಶೇ 19.23 ರಿಂದ ಶೇ 19.33ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 17,266 ಮಂದಿಗೆ ಸೋಂಕು ತಗುಲಿದೆ.
ಕೋವಿಡ್ ತಪಾಸಣೆ: ರಾಜ್ಯದಲ್ಲಿ ಈವರೆಗೆ ನಡೆಸಲಾದ ಟೆಸ್ಟಿಂಗ್ ಸಂಖ್ಯೆ ಆರು ಕೋಟಿ
ಹಾಗೆಯೇ ಕಳೆದ 24 ಗಂಟೆಗಳಲ್ಲಿ 35,140 ಮಂದಿ ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. 26 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,30,447ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಒಂದರಲ್ಲಿಯೇ 2.18 ಲಕ್ಷ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಶನಿವಾರ 2,19,699 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇದುವರೆಗೂ 34,67,472 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಅವರಲ್ಲಿ 30,98,432 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 38,563 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ 0.6ರಷ್ಟಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ?
ಬೆಂಗಳೂರು ನಗರ ಜಿಲ್ಲೆಯಲ್ಲಿ 17266 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಮೈಸೂರು ಜಿಲ್ಲೆಯಲ್ಲಿ 4601, ತುಮಕೂರಿನಲ್ಲಿ 3417, ಹಾಸನದಲ್ಲಿ 2679, ಮಂಡ್ಯದಲ್ಲಿ 1822, ಕೋಲಾರದಲ್ಲಿ 1417 ಮಂದಿಗೆ ಸೋಂಕು ತಗುಲಿದೆ.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಜೀವ ಹಾಗೂ ಜೀವನ ಎರಡೂ ಮುಖ್ಯ; ಡಾ.ಕೆ.ಸುಧಾಕರ್
ಬಳ್ಳಾರಿ 845, ಬೆಳಗಾವಿ 405, ಬೆಂಗಳೂರು ಗ್ರಾಮಾಂತರ 958, ಬೀದರ್ 138, ಚಾಮರಾಜನಗರ 397, ಚಿಕ್ಕಬಳ್ಳಾಪುರ 892, ಚಿಕ್ಕಮಗಳೂರು 166, ಚಿತ್ರದುರ್ಗ 622, ದಕ್ಷಿಣ ಕನ್ನಡ 795, ದಾವಣಗೆರೆ 645, ಧಾರವಾಡ 790, ಗದಗ 306, ಹಾವೇರಿ 124, ಕಲಬುರಗಿ 665, ಕೊಡಗು 653, ಕೊಪ್ಪಳ 138, ರಾಯಚೂರು 236, ರಾಮನಗರ 506, ಶಿವಮೊಗ್ಗ 474, ಉಡುಪಿ 877, ಉತ್ತರ ಕನ್ನಡ 390, ವಿಜಯಪುರ 125 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಯಾದಗಿರಿ 79, ಬಾಗಲಕೋಟೆ 42 ಜಿಲ್ಲೆಗಳಲ್ಲಿ ಮಾತ್ರ ಎರಡಂಕಿ ಪ್ರಕರಣಗಳು ವರದಿಯಾಗಿವೆ.

ಕೋವಿಡ್ ಮಹಾಮಾರಿ ಆರಂಭವಾದಾಗಿನಿಂದ ಈವರೆಗೆ ರಾಜ್ಯದಲ್ಲಿ ಒಟ್ಟು ಆರು ಕೋಟಿಯಷ್ಟು ಟೆಸ್ಟಿಂಗ್ ನಡೆಸಲಾಗಿದೆ. ಕೋವಿಡ್ ವಿರುದ್ಧ ಹೋರಾಡುವಲ್ಲಿ ಕರ್ನಾಟಕದ ಯಶಸ್ಸಿನ ಮೂಲಾಧಾರಗಳಲ್ಲಿ ಪರೀಕ್ಷೆಯು ಒಂದು. ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ನಾವು 6 ಕೋಟಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದೇವೆ, ಇದು ದೇಶದಲ್ಲಿ ಮೂರನೇ ಅತಿ ಹೆಚ್ಚು ಎಂದು ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅವರಲ್ಲಿ ಸದ್ಯಕ್ಕೆ ರೋಗ ಲಕ್ಷಣಗಳು ಇಲ್ಲ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.



Read more

[wpas_products keywords=”deal of the day sale today offer all”]