Karnataka news paper

ಅರಣ್ಯದಲ್ಲಿ ಅಕ್ರಮ ಮಣ್ಣುಗಾರಿಕೆ; ಬ್ಯಾಡಗಿ ತಾಲೂಕಿನಲ್ಲಿ ಜೆಸಿಬಿ, ಟಿಪ್ಪರ್‌ ಅಬ್ಬರಕ್ಕಿಲ್ಲ ಅಂಕುಶ!


ಹೈಲೈಟ್ಸ್‌:

  • ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮಣ್ಣುಗಾರಿಕೆ; ಅಸಹಾಯಕರಾಗಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು
  • ಅವ್ಯಾಹತವಾಗಿ ಸಾಗಿರುವ ಮಣ್ಣು ಲೂಟಿಗೆ ದಿನಕ್ಕೆ ನೂರಾರು ಟ್ರಿಪ್‌ ಮಣ್ಣು ಮಾಯವಾಗುತ್ತಿದೆ
  • ಅಕ್ರಮ ಮಣ್ಣುಗಾರಿಕೆ ನಡೆಯುತ್ತಿರುವುದು ರಾತ್ರಿ ಸಮಯದಲ್ಲಿ ಅಲ್ಲ, ಬದಲಾಗಿ ಹಾಡಹಗಲೇ

ಗಣೇಶ ಅರ್ಕಾಚಾರಿ ಬ್ಯಾಡಗಿ
ಹಾವೇರಿ: ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮಣ್ಣುಗಾರಿಕೆ ಅವ್ಯಾಹತವಾಗಿ ಸಾಗಿದ್ದು, ತಾಲೂಕಾಡಳಿತ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಅಸಹಾಯಕರಾಗಿ ಕಣ್ಮುಚ್ಚಿ ಕುಳಿತಿದ್ದಾರೆ.

ಯಾವುದೇ ಪ್ರಮುಖ ನದಿ ಹರಿಯದಿದ್ದರೂ ಬ್ಯಾಡಗಿ ತಾಲೂಕು ಭೌಗೋಳಿಕವಾಗಿ ಪ್ರಾಕೃತಿಕವಾಗಿ ಸಮೃದ್ಧವಾಗಿದೆ. ಇಂತಹ ಪ್ರಾಕೃತಿಕ ಸಂಪತ್ತಿನ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಅವ್ಯಾಹತವಾಗಿ ಮಣ್ಣು ಲೂಟಿ ಮಾಡುವ ಕಾರ‍್ಯ ಎಗ್ಗಿಲ್ಲದೇ ಸಾಗಿದೆ.

ದಿನಕ್ಕೆ ನೂರಾರು ಟ್ರಿಪ್‌ ಮಣ್ಣು ಮಾಯ
ತಾಲೂಕಿನ ವಿವಿಧ ಅರಣ್ಯ ಪ್ರದೇಶಗಳಲ್ಲಿ ಅವ್ಯಾಹತವಾಗಿ ಸಾಗಿರುವ ಮಣ್ಣು ಲೂಟಿಗೆ ದಿನಕ್ಕೆ ನೂರಾರು ಟ್ರಿಪ್‌ ಮಣ್ಣು ಮಾಯವಾಗುತ್ತಿದೆ. ಮಣ್ಣು ಮಾಯವಾಗುತ್ತಲೇ ಅಲ್ಲಿ ಬೆಳೆದ ಮರಗಳು ಸಹ ನೆಲಕಚ್ಚುತ್ತಿದ್ದು, ಹಲವು ಜನರ ಮನೆಯಲ್ಲಿ ಸೌದೆಯಾಗಿ ಬಳಕೆಯಾಗುತ್ತಿವೆ.

ಮಣ್ಣುಗಾರಿಕೆ ಬಗ್ಗೆ ತಲೆಕೆಡಿಸಿಕೊಂಡು ಪ್ರಾಕೃತಿಕ ಸಂಪತ್ತು ರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ಅಕ್ರಮ ಮಣ್ಣುಗಾರಿಕೆ, ಕಲ್ಲುಗಾರಿಕೆ ಮಾಡುತ್ತಿರುವರು ಹಾಗೂ ಅವರ ಹಿಂದಿನ ಪ್ರಭಾವಿಗಳ ಒತ್ತಡವೇ ಕಾರಣವಾಗಿದೆ.
ಗಾಳಿ ಗೋಪುರವಾಯ್ತು ಸರ್ಕಾರದ ಪುನರ್ವಸತಿ ಭರವಸೆ: ಮರಳಿ ಕಾಡಿನ ಹಾಡಿಗೆ ಬಂದ ಆದಿವಾಸಿಗಳು..
ಎಲ್ಲೆಲ್ಲಿ ಮಣ್ಣು ಲೂಟಿ?
ತಾಲೂಕಿನ ಬಿಸಲಹಳ್ಳಿ, ಬುಡಪನಹಳ್ಳಿ, ಅಳಲಗೇರಿ, ಬಿದರಕಟ್ಟೆ, ಆಣೂರ ಅರಣ್ಯ ಪ್ರದೇಶ, ಕದರಮಂಡಲಗಿ ಗ್ರಾಮದ ಗುಡ್ಡಗಾಡು ಪ್ರದೇಶ, ಬ್ಯಾಡಗಿ ಪಟ್ಟಣ ಹೊರವಲಯದ ಬೆಟ್ಟದ ಮಲ್ಲೇಶ್ವರ, ನಗರದ ಹಿಂದಿನ ಅರಣ್ಯ ಪ್ರದೇಶದಲ್ಲಿ ಮಣ್ಣುಗಾರಿಕೆ ನಡೆಯುತ್ತಿದ್ದು, ಯಾರೊಬ್ಬರು ಇದರ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ.

ಹಾಡಹಗಲೇ ಅಕ್ರಮ
ಅಕ್ರಮ ಮಣ್ಣುಗಾರಿಕೆ ನಡೆಯುತ್ತಿರುವುದು ರಾತ್ರಿ ಸಮಯದಲ್ಲಿ ಅಲ್ಲ, ಬದಲಾಗಿ ಹಾಡಹಗಲೇ ಎಂಬುದು ಗಮನಿಸಬೇಕಾದ ಅಂಶ. ಕಣ್ಣೆದುರೇ ಅರಣ್ಯ ಬಗೆದು ಬಹಿರಂಗವಾಗಿ ಸಾಗಿಸಲಾಗುತ್ತದೆ ಎಂದರೆ ಈ ಅಕ್ರಮ ಮಣ್ಣುಗಾರಿಕೆ ಹಿಂದಿರುವ ಕಾಣದ ಕೈಗಳ ಪ್ರಭಾವ ಎಷ್ಟಿರಬಹುದು ಎಂಬುದು ತಿಳಿಯುತ್ತದೆ.

ಬಿಸಲಹಳ್ಳಿ ರಸ್ತೆ ಪಕ್ಕದಲ್ಲೇ ಅಗೆತ
ಬ್ಯಾಡಗಿ, ಬುಡಪನಹಳ್ಳಿ ಸೇರಿದಂತೆ ಕೆಲ ಕಡೆಗಳಲ್ಲಿ ಅರಣ್ಯ ಪ್ರದೇಶದ ಒಳಗೆ ತೆರಳಿ ಅಕ್ರಮ ಮಣ್ಣು ಸಾಗಣೆ ಮಾಡಿದರೆ, ಬಿಸಲಹಳ್ಳಿ ಗ್ರಾಮದಲ್ಲಿ ರಟ್ಟಿಹಳ್ಳಿಗೆ ಹೋಗುವ ರಸ್ತೆ ಪಕ್ಕದಲ್ಲಿಯೇ ಜೆಸಿಬಿ ಮೂಲಕ ಮಣ್ಣನ್ನು ಯಾರ ಭಯವಿಲ್ಲದೇ ಸಾಗಿಸಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ 40ರಷ್ಟು ಅರಣ್ಯ ನೌಕರರಿಗೆ ‘ಗೃಹಭಂಗ’; ಬ್ರಿಟಿಷ್‌ ಕಾಲದ ಶಿಥಿಲ ವಸತಿಯಲ್ಲೇ ವಾಸ!
ಅಕ್ರಮ ಕಲ್ಲುಗಣಿಗಾರಿಕೆಯೂ ಹೆಚ್ಚು

ಬ್ಯಾಡಗಿ ತಾಲೂಕಿನ ಅಲ್ಲಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದ್ದು ವಿವಿಧ ರೀತಿಯ ಪ್ರಾಣಿ ಹಾಗೂ ಪಕ್ಷಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಅಂತಹ ಅರಣ್ಯ ಪ್ರದೇಶಗಳನ್ನು ಹಾಳು ಮಾಡಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ತಾಲೂಕಿನ ಛತ್ರ, ಬುಡಪನಹಳ್ಳಿ, ಕಲ್ಲೇದೇವರು, ಅಳಲಗೇರಿ ಸೇರಿದಂತೆ ಹಲವು ಕಡೆಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಿರಾಂತಕವಾಗಿ ಸಾಗಿದೆ, ಜಿಲ್ಲೆ ಹಾಗೂ ತಾಲೂಕಿನ ಪ್ರಭಾವಿಗಳೇ ಇದರ ಮಾಲೀಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಬ್ಯಾಡಗಿಯ ಬೆಟ್ಟದ ಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ಅಕ್ರಮ ಮಣ್ಣುಗಾರಿಕೆ ಮಾಡುತ್ತಿದ್ದ ಕೆಲವರಿಗೆ ನೋಟಿಸ್‌ ನೀಡಲಾಗಿದೆ. ಇಂತಹ ಪ್ರಕರಣ ಕಂಡುಬಂದಲ್ಲಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವೆ.
ರವಿಕುಮಾರ ಕೊರವರ, ತಹಸೀಲ್ದಾರ ಬ್ಯಾಡಗಿ
ಕಲಬುರಗಿಯಲ್ಲಿ ತಲೆ ಎತ್ತಿದ ಮರಳು ಮಾಫಿಯಾ..! ಪೊಲೀಸರಿಂದಲೇ ಡೈರೆಕ್ಟ್ ಡೀಲ್‌..?
ಅಧಿಕಾರಿಗಳು ಶಾಮೀಲಾಗಿದ್ದರಿಂದಲೇ ಹಾಡಹಗಲೇ ಅಕ್ರಮ ಮಣ್ಣುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಪ್ರಶ್ನೆ ಮಾಡಿದಲ್ಲಿ ನಮ್ಮ ಮೇಲೆಯೇ ಬೆದರಿಕೆ ಹಾಕಲಾಗುತ್ತಿದೆ. ಶೀಘ್ರದಲ್ಲೆ ಈ ಕುರಿತಂತೆ ಹೋರಾಟ ನಡೆಸಲಾಗುವುದು.
ಪರಮೇಶಪ್ಪ ಅಂಗಡಿ, ಕರವೇ ತಾಲೂಕಾಧ್ಯಕ್ಷ



Read more

[wpas_products keywords=”deal of the day sale today offer all”]