Online Desk
ಮಂಗಳೂರು: ಮೂಡುಬಿದಿರೆ ಗಂಟಲ್ಕಟ್ಟೆ ಬಳಿ ಗುರುವಾರ ಬೆಳಗ್ಗೆ ಬೈಕ್-ಓಮಿನಿ ಮಧ್ಯೆ ನಡೆದ ಅಪಘಾತದಲ್ಲಿ ಹಿರಿಯಡ್ಕ ಮೇಳದ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ (46) ಮೃತಪಟ್ಟಿದ್ದಾರೆ.
ಹಿರಿಯಡ್ಕ ಮೇಳದಲ್ಲಿ ಸ್ತ್ರಿವೇಷ, ಕಥಾನಾಯಕನ ಪಾತ್ರದಲ್ಲಿ ಪ್ರಸಿದ್ಧ ಕಲಾವಿದರಾಗಿದ್ದರು. ಬುಧವಾರ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನವನ್ನು ಮುಗಿಸಿ ಬೆಳ್ತಂಗಡಿ ಗೋಳಿತ್ತಾರು ಮನೆಗೆ ಹೋಗುವಾಗ ಬೆಳಗ್ಗೆ 6.30ರ ವೇಳೆ ಅಪಘಾತ ಸಂಭವಿಸಿದೆ.
ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿದ್ದು, ಇತ್ತೀಚೆಗೆ ಹಿರಿಯಡ್ಕ ಮೇಳದ ವ್ಯವಸ್ಥಾಪಕರಾಗಿ ಮೇಳವನ್ನು ಮುನ್ನಡೆಸುತ್ತಿದ್ದರು. ಇವರು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.
#Mangaluru #Yakshagana artiste Venuru Vamana Kumar (46) was killed in a road accident near Moodbidre. He was returning after a performance in Kundapur @XpressBengaluru @santwana99 @ramupatil_TNIE @compolmlr @MangaloreCity pic.twitter.com/xDXfh8ZQzp
— vincent dsouza (@vinndz_TNIE) January 20, 2022
ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿರುವ ಅವರು, ಪುಂಡು ವೇಷ, ಸ್ತ್ರೀವೇಷಗಳಲ್ಲಿ ಖ್ಯಾತಿ ಗಳಿಸಿದ್ದರು. ವೇಣೂರು ಗ್ರಾಮದ ಗೋಳಿತ್ಯಾರಿನ ದಿ.ಅಣ್ಣು ದೇವಾಡಿಗ ಮತ್ತು ಮೋನಮ್ಮ ದಂಪತಿಯ ಪುತ್ರನಾಗಿರುವ ಅವರು ಇತ್ತೀಚೆಗಷ್ಟೇ ತಮ್ಮ ಅಕ್ಕನನ್ನು ಕಳೆದಕೊಂಡಿದ್ದರು.
8ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಯಕ್ಷಗಾನ ರಂಗಕ್ಕೆ ಬಂದಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ, ರಂಗಕ್ಕೇರಿದ್ದರು.
Read more
[wpas_products keywords=”deal of the day”]