Karnataka news paper

ಬಿಡಿಎ ನಿಯಮವನ್ನು ಎತ್ತಿಹಿಡಿದ ಹೈಕೋರ್ಟ್‌; ಹಂಚಿಕೆದಾರರ ಮೇಲ್ಮನವಿ ವಜಾ


ಬೆಂಗಳೂರು: ಸಣ್ಣ ನಿವೇಶನದಾರರಿಗೆ ಹಣ ಪಾವತಿಗೆ ಮೂರು ವರ್ಷಗಳವರೆಗೆ ಸಮಯ ನೀಡುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ಅಧಿನಿಯಮ 2008ರ ನಿಯಮ 13(1) ಅನ್ನು ಹೈಕೋರ್ಟ್‌ ಎತ್ತಿಹಿಡಿದಿದೆ.

ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿದ್ದ ಬಿ.ಸಿ ಲತಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾ. ಪಿ.ಎಸ್‌ ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ‘ಬಿಡಿಎ ನಿಯಮದಂತೆ ಸಣ್ಣ ನಿವೇಶನಗಳ ಹಂಚಿಕೆದಾರರಿಗೆ ಮೂರು ವರ್ಷಗಳವರೆಗೆ ಕಂತು ಪಾವತಿಗೆ ಸಮಯ ವಿಸ್ತರಿಸಲು ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರಿಗೆ 50*80 ಬಂಗ್ಲೆ ಅಳತೆಯ ನಿವೇಶನ ಹಂಚಿಕೆ ಮಾಡಲಾಗಿದೆ. ಅಂತಹವರಿಗೆ ಹಣ ಪಾವತಿಗೆ ಸಮಯ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಹಾಗಾಗಿ ಬಿಡಿಎ ಕ್ರಮ ಸರಿ ಇದೆ, ಪ್ರಾಧಿಕಾರ ಯಾವುದೇ ತಾರತಮ್ಯ ಎಸಗಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಕನ್ನಡ ಕಲಿಕೆ ಕಡ್ಡಾಯ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದ ಸಂಸ್ಕೃತ ಭಾರತ ಟ್ರಸ್ಟ್‌ನ ಅರ್ಜಿ ವಿಚಾರಣೆ
ಅರ್ಜಿದಾರರಿಗೆ 2006ರಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೋಟಾದಲ್ಲಿ ನಿವೇಶನ ಸಂಖ್ಯೆ 589 ಹಂಚಿಕೆಯಾಗಿತ್ತು. ಅವರು 7,58,500 ರೂ. ಪಾವತಿಸಬೇಕಿತ್ತು. ಅವರು 2006ರ ಆ.14ರಂದು 3.65 ಲಕ್ಷ ಪಾವತಿಸಿದ್ದರು ಮತ್ತು 2006ರ ಅ.11ರಂದು 1 ಲಕ್ಷ ಪಾವತಿಸಿದ್ದರು. ಉಳಿದ ಹಣ ಪಾವತಿಸಿರಲಿಲ್ಲ. ಹಾಗಾಗಿ ಬಿಡಿಎ 2009ರ ಆ.5ರಂದು ನೋಟಿಸ್‌ ನೀಡಿ, ಉಳಿದ ಹಣ ಪಾವತಿಸದೇ ಇರುವುದಕ್ಕೆ ನಿವೇಶನ ಹಂಚಿಕೆಯನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿತ್ತು. ಆನಂತರ 2009ರ ನ.13 ರಂದು ಅವರು ಪಾವತಿಸಿದ್ದ ಹಣ ವಾಪಸ್‌ ನೀಡಿ ನಿವೇಶನ ಹಂಚಿಕೆ ರದ್ದುಗೊಳಿಸಿತು. ಆದರೆ ಆ ಹಣವನ್ನು ಮತ್ತೆ ಬಿಡಿಎ ಖಾತೆಗೆ ಮರು ಠೇವಣಿ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಆನಂತರ ಅರ್ಜಿದಾರರಾದ ಲತಾ, ಬಿಡಿಎ ನಿವೇಶನ ಹಂಚಿಕೆ ರದ್ದುಗೊಳಿಸಿರುವುದನ್ನು ಪ್ರಶ್ನಿಸಿದ್ದರು. ಜತೆಗೆ ಸಣ್ಣ ನಿವೇಶನದಾರರಿಗೆ ಮೂರು ವರ್ಷಗಳಲ್ಲಿ ಕಂತುಗಳಲ್ಲಿ ಹಣ ಪಾವತಿಗೆ ಅವಕಾಶ ಕಲ್ಪಿಸುವ ಬಿಡಿಎ ನಿಯಮ 13(1)ರ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಆದರೆ ಏಕಸದಸ್ಯ ಪೀಠ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.



Read more

[wpas_products keywords=”deal of the day sale today offer all”]