Karnataka news paper

ಗದಗ ಜಿಲ್ಲೆಯಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲೇ ರಕ್ತದ ಕೊರತೆ..! ರಕ್ತದಾನ ಶಿಬಿರಗಳೂ ವಿರಳ..!


ಹೈಲೈಟ್ಸ್‌:

  • ಕಡಿಮೆಯಾಗುತ್ತಿರುವ ರಕ್ತದಾನ ಶಿಬಿರ
  • ಯುವಕರಲ್ಲಿ ಜಾಗೃತಿ ಕೊರತೆ
  • 200 – 250 ಯುನಿಟ್‌ ರಕ್ತ ಸಂಗ್ರಹವಾದರೆ ಅನುಕೂಲ

ವಿಕ ವಿಶೇಷ
ಗದಗ:
ಜಿಲ್ಲೆಯಲ್ಲಿ ಪ್ರತಿ ನಿತ್ಯ ನೂರಾರು ರೋಗಿಗಳು ರಕ್ತ ಪಡೆಯಲು ಪರದಾಡುತ್ತಿದ್ದು, ಈ ಕೂರತೆ ಪೂರೈಸಲು ರಕ್ತದಾನಿಗಳು ಮುಂದಾಗಿಬೇಕಿದೆ. ಮಾನವನ ಸಂಶೋಧನೆಗೆ ರಕ್ತ ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಅದ್ದರಿಂದಲೇ ರಕ್ತದ ಬೆಲೆಯನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ.

ಕಳೆದ ಮೂರು ವರ್ಷಗಳಿಂದ ಕಾಡುತ್ತಿರುವ ಕೊರೊನಾ ಸೋಂಕಿನಿಂದ ಗದಗ ಜಿಲ್ಲೆಯಲ್ಲಿ ಯಾವುದೇ ರಕ್ತದಾನ ಶಿಬಿರಗಳೂ ನಡೆಯದ ಕಾರಣ ಜಿಮ್ಸ್‌ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ರಕ್ತ ಭಂಡಾರಗಳಲ್ಲೂ ಇದೀಗ ರಕ್ತದ ಅಭಾವ ಕಾಡುತ್ತಿದೆ.

ಗದಗ ಜಿಲ್ಲೆಯಲ್ಲಿ ಜನಸಂಖ್ಯೆಯ ಅನುಗುಣವಾಗಿ ನೋಡಿದರೆ ರಕ್ತದ ಕೊರತೆ ಎದ್ದು ಕಾಣುತ್ತಿದೆ. ಯುವಕ ಹಾಗೂ ಯುವತಿಯರು ರಕ್ತದಾನ ಮಾಡುವ ಮೂಲಕ ಇತರರ ಅಮೂಲ್ಯ ಜೀವ ಉಳಿಸಲು ಮುಂದಾಗಬೇಕಿದೆ. ಜತೆಗೆ ಕೋವಿಡ್‌ ಸೋಂಕು ಇಲ್ಲದ ಸಂದರ್ಭದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಬ್ಲಡ್‌ ಬ್ಯಾಂಕ್‌, ಆರೋಗ್ಯ ಇಲಾಖೆ, ಜಿಮ್ಸ್‌ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದ್ದವು. ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದರು. ಇದರಿಂದ ರಕ್ತ ಭಂಡಾರಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ರಕ್ತದ ಕೊರತೆ ಕಾಡುತ್ತಿರಲಿಲ್ಲ.

ಸ್ವಯಂ ರಕ್ತದಾನ ಕೊರತೆ: ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವವರ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಜಿಮ್ಸ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ರಕ್ತದ ಅಭಾವ ಉಂಟಾಗಿದೆ. ಗರ್ಭಿಣಿಯರು, ಸಿಜೆರಿಯನ್‌ ಆದ ಬಾಣಂತಿಯರು ಸೇರಿದಂತೆ ತುರ್ತು ರಕ್ತದ ಆವಶ್ಯಕತೆ ಇರುವ ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬೇರೆ ಬೇರೆ ರಕ್ತ ಭಂಡಾರ (ಬ್ಲಡ್‌ ಬ್ಯಾಂಕ್‌) ಗಳಿಗೆ ಜಿಮ್ಸ್‌ ಜತೆ ಸಹಕರಿಸಲು ಮನವಿ ಮಾಡಿಕೊಳ್ಳಲಾಗಿದೆ.

ಹೊರರೋಗಿಗಳ ಸಂಖ್ಯೆ ಹೆಚ್ಚಳ: ಕೋವಿಡ್‌ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಜಿಮ್ಸ್‌ ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಯ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಜಿಲ್ಲಾಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಪ್ರತಿ ದಿನ ಜಿಮ್ಸ್‌ಗೆ 800 ಜನ ಹೊರ ರೋಗಿಗಳು ಬರುತ್ತಿದ್ದಾರೆ. ಅದರಂತೆ, ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳೂ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವುದರಿಂದ ರೋಗಿಗಳ ಪ್ರಮಾಣ ಹೆಚ್ಚಳಗೊಂಡಿದೆ.

ನೈಟ್ ಕರ್ಫ್ಯೂ ಜಾರಿಗೆ ವಿರೋಧ; ಗದಗ ಜಿಲ್ಲೆಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರ ಆಕ್ರೋಶ!
ಪ್ರತಿ ತಿಂಗಳು ಒಂದೇ ಶಿಬಿರ: ಕೋವಿಡ್‌ ಅಲೆಯ ಬಳಿಕ ರಕ್ತದಾನ ಶಿಬಿರವನ್ನು ತಿಂಗಳಿಗೆ ಒಂದು ಶಿಬಿರ ಮಾತ್ರ ಆಯೋಜನೆ ಮಾಡಲಾಗುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಟ 4 ರಿಂದ 5 ರಕ್ತದಾನ ಶಿಬಿರಗಳು ಜರುಗಿ ಸುಮಾರು 200 ರಿಂದ 250 ಯುನಿಟ್‌ ರಕ್ತ ಸಂಗ್ರಹವಾದರೆ ರೋಗಿಗಳಿಗೆ ಅನುಕೂಲವಾಗಬಹುದು. ಈಗಾಗಲೇ ಕಾಲೇಜುಗಳು ಆರಂಭಗೊಂಡಿದ್ದು, ಕಾಲೇಜು ವಿದ್ಯಾರ್ಥಿಗಳು, ಸಂಘ – ಸಂಸ್ಥೆ ಪದಾಧಿಕಾರಿಗಳು ಇತರರಿಗೆ ಪ್ರೇರಣೆ ನೀಡಿ ರಕ್ತದಾನ ಮಾಡಲು ಮುಂದೆ ಬರಬೇಕಾಗಿದೆ ಎನ್ನುತ್ತಾರೆ ವೈದ್ಯರು.

ರಕ್ತ ದಾನಿಗಳೂ ಕಡಿಮೆ: ಮೂರು ವರ್ಷಗಳಿಂದ ರಕ್ತದಾನ ಶಿಬಿರಗಳ ಆಯೋಜನೆ ಕಡಿಮೆ ಆಗಿದೆ. ದೊಡ್ಡ ಪ್ರಮಾಣದಲ್ಲಿ ಶಿಬಿರಗಳ ಆಯೋಜನೆ ಆಗಿಲ್ಲ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವವರ ಸಂಖ್ಯೆಯೂ ಕಡಿಮೆ ಆಗಿದ್ದರಿಂದ ಎಲ್ಲ ಬ್ಲಡ್‌ ಬ್ಯಾಂಕ್‌ಗಳಲ್ಲೂ ರಕ್ತದ ಕೊರತೆ ಉಂಟಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಐಎಂಎ ಬ್ಲಡ್‌ ಬ್ಯಾಂಕ್‌ ಸಿಬ್ಬಂದಿ ಹೇಳುತ್ತಾರೆ.

ಕರ್ನಾಟಕ ರಾಜ್ಯಾದ್ಯಂತ ಬುಧವಾರವೂ 40 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್..!
ಸದ್ಯಕ್ಕೆ 87 ಯುನಿಟ್‌ ಸಂಗ್ರಹ: ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ಸದ್ಯಕ್ಕೆ 87 ರಕ್ತ ಯುನಿಟ್‌ ಸಂಗ್ರಹವಾಗಿದೆ. ಈ ಹಿಂದೆ 150ಕ್ಕೂ ಹೆಚ್ಚು ರಕ್ತದ ಯುನಿಟ್‌ ಸಂಗ್ರಹವಾಗುತ್ತಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಸೇರಿದಂತೆ ದಾನಿಗಳು ಸಹ ರಕ್ತ ಕೊಡಲು ಮುಂದಾಗುತ್ತಿಲ್ಲ. ಹೀಗಾಗಿ ರಕ್ತ ಸಂಗ್ರಹ ಕಡಿಮೆಯಾಗುತ್ತಿದೆ.

‘ಜಿಮ್ಸ್‌ ನಲ್ಲಿ ರಕ್ತದ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಬೇರೆ ಬೇರೆ ಕಡೆಗೆ ವ್ಯವಸ್ಥೆ ಮಾಡಿ ರೋಗಿಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಸೋಂಕು ಹೆಚ್ಚಳವಾಗುತ್ತಿರುವ ಕಾರಣದಿಂದ ಇಂತಹ ಕಾಯಿಲೆಗಳಿಂದ ನರಳುತ್ತಿರುವವರನ್ನು ಇತರ ರೋಗಿಗಳಿಂದ ಬೇರ್ಪಡಿಸಿ ಚಿಕಿತ್ಸೆ ನೀಡಲು ಪ್ರತ್ಯೇಕ ಜ್ವರ ತಪಾಸಣಾ ಆಸ್ಪತ್ರೆ (ಫಿವರ್‌ ಕ್ಲಿನಿಕ್‌) ತೆರೆಯಲಾಗುತ್ತಿದೆ’ ಎಂದು ಜಿಮ್ಸ್‌ ಆಡಳಿತ ಅಧೀಕ್ಷಕ ಡಾ. ಮ್ಯಾಗೇರಿ.

ಶಾಲಾ ವಿದ್ಯಾರ್ಥಿಗಳ ಜೀವದ ಜೊತೆಗೆ ಚೆಲ್ಲಾಟವಾಡಬೇಡಿ: ಕಾಂಗ್ರೆಸ್ ನಾಯಕ ಎಚ್. ಕೆ. ಪಾಟೀಲ್ ಗರಂ



Read more

[wpas_products keywords=”deal of the day sale today offer all”]