Karnataka news paper

ಸಿನಿಮಾರಂಗದ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಸ್ಯಾಂಡಲ್‌ವುಡ್‌ ನಿರ್ದೇಶಕರು


ನಟನೊಬ್ಬ ನಟನೆಯನ್ನಷ್ಟೇ ಮಾಡಬೇಕೆಂದಿಲ್ಲ. ನಿರ್ದೇಶಕನಾಗಬಹುದು, ಸಿನಿಮಾ ನಿರ್ಮಾಣವನ್ನೂ ಮಾಡಬಹುದು. ಈ ರೀತಿ ನಟನೆಯೇತರ ವಿಭಾಗಗಳಲ್ಲಿ ನಟರು ತಮ್ಮನ್ನು ತೊಡಗಿಸಿಕೊಂಡಿರುವಂತೆ ಚಿತ್ರವೊಂದರ ತಾಂತ್ರಿಕ ವಿಭಾಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು ಕೂಡ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈಚಿನ ದಿನಗಳಲ್ಲಂತೂ ತಂತ್ರಜ್ಞರ ಈ ಬಹುಮುಖಿ ತೊಡಗಿಸಿಕೊಳ್ಳುವಿಕೆ ಗಮನಾರ್ಹವಾಗಿ ಕಾಣಿಸುತ್ತಿದೆ. ಇದೀಗ ಕೆಲ ನಿರ್ದೇಶಕರು ನಟರಾಗಿದ್ದಾರೆ. ನಟನೆ ಮಾಡಿಕೊಂಡೇ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನು ಕೆಲ ನಿರ್ದೇಶಕರು ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ ಅದರಲ್ಲಿ ಬೇರೆ ಬೇರೆ ನಿರ್ದೇಶಕರಿಗೆ ಅವಕಾಶ ನೀಡುತ್ತಿದ್ದಾರೆ.

ತೆರೆಮೇಲೆ ಪ್ರಸಾದ್‌ದ್ವಯರು
ನಿರ್ದೇಶಕ ಮಠ ಗುರುಪ್ರಸಾದ್‌ ಬಹಳ ಹಿಂದೆಯೇ ನಟನೆಯನ್ನು ಆರಂಭಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ಬಡವ ರಾಸ್ಕಲ್‌’ ಸಿನಿಮಾದಲ್ಲಿ ಅವರು ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಇನ್ನೋರ್ವ ನಿರ್ದೇಶಕ ವಿಜಯ್‌ ಪ್ರಸಾದ್‌ ತಮ್ಮ ಕಾಮಿಡಿ ಟೈಮಿಂಗ್‌ಗೆ ಹೆಸರಾದವರು. ಆಗಾಗ ಸ್ನೇಹಿತರ ಒತ್ತಾಯಕ್ಕೆ ಮಣಿದು ನಟಿಸುತ್ತಿರುತ್ತಾರೆ. ಅವರು ಸಹ ‘ಬಡವ ರಾಸ್ಕಲ್‌’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.
(ಹರೀಶ್‌ ಬಸವರಾಜ್‌)

​ಸಿನಿಮಾ ತಲುಪಿಸುವ ಸತ್ಯ

‘ರಾಮಾ ರಾಮಾ ರೇ’, ‘ಒಂದಲ್ಲಾಎರಡಲ್ಲಾ’ ಸಿನಿಮಾಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಸತ್ಯ ಪ್ರಕಾಶ್‌ ತಮ್ಮಂತೆ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬರುವವರಿಗೆ ಒಂದು ಬೇರೆ ರೀತಿಯ ವಿತರಣಾ ವೇದಿಕೆಯನ್ನು ಆರಂಭಿಸಿದ್ದಾರೆ. ‘ಸಿನಿಮಾ ಎಂಬುದು ಬರೀ ವ್ಯಾಪಾರ ಮಾತ್ರವಲ್ಲ, ಅಲ್ಲೊಂದು ಬೇರೆಯದ್ದೇ ಎಮೋಷನ್‌ ಇದೆ. ವರ್ಷವೊಂದರಲ್ಲಿ ಬಿಡುಗಡೆಯಾಗುವ 300 ಸಿನಿಮಾಗಳಲ್ಲಿ ಎಲ್ಲವೂ ಜನರನ್ನು ರೀಚ್‌ ಆಗುವುದಿಲ್ಲ. ಚೆನ್ನಾಗಿರುವ ಸಿನಿಮಾಗಳು ಜನರನ್ನು ತಲುಪದೇ ಹೋಗುವುದೂ ಇದೆ. ಅಂತಹವನ್ನು ಗುರುತಿಸಿ, ಅವುಗಳನ್ನು ನೋಡಿ ಅದು ಯಾರಿಗೆ ರೀಚ್‌ ಆಗುವಂತಹ ಸಿನಿಮಾ, ಹೇಗೆ ಜನರಿಗೆ ತಲುಪಿಸಬೇಕು ಎಂಬುದನ್ನು ನೋಡಿ ಕಾರ್ಯ ನಿರ್ವಹಿಸುವ ನಿಟ್ಟಿನಿಂದ ಈ ವಿತರಣಾ ವೇದಿಕೆಯನ್ನು ಆರಂಭಿಸಿದ್ದೇವೆ. ನನ್ನ ಜತೆ ಇರುವ ಸಿನಿಮಾಟೋಗ್ರಾಫರ್ಸ್, ಸಹ ನಿರ್ದೇಶಕರು, ಬರಹಗಾರರು ಹೀಗೆ ಎಲ್ಲರೂ ಸಿನಿಮಾವೊಂದನ್ನು ನೋಡಿ ಅದರ ಬಗ್ಗೆ ಚರ್ಚೆ ಮಾಡಿ ನಂತರ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಈ ರೀತಿ ಇದನ್ನು ಜನರಿಗೆ ತಲುಪಿಸಬಹುದು ಎಂದು ಸಲಹೆ ನೀಡುತ್ತೇವೆ. ಒಳ್ಳೆ ಕಂಟೆಂಟ್‌ ಇರುವ ಸಿನಿಮಾಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವುದು ಈ ವೇದಿಕೆಯ ಉದ್ದೇಶ. ಇಲ್ಲಿ ಹೊಸ ಬರಹಗಾರರು, ಹೊಸ ನಿರ್ದೇಶಕರು, ಹೊಸ ನಿರ್ಮಾಪಕರಿಗೆ ಮುಕ್ತವಾದ ಆಹ್ವಾನವಿದೆ’ ಎಂದು ತಮ್ಮ ಹೊಸ ಪ್ರಯತ್ನದ ಬಗ್ಗೆ ಹೇಳುತ್ತಾರೆ ಸತ್ಯಪ್ರಕಾಶ್‌.

‘ರಾಮಾ ರಾಮಾ ರೇ’ ಸತ್ಯ ಪ್ರಕಾಶ್ ಸಾರಥ್ಯದಲ್ಲಿ ಸಿನಿಮಾ ವಿತರಣಾ ಸಂಸ್ಥೆ; ಸಾಥ್ ನೀಡಿದ ಧನಂಜಯ್

​ನಟನೆಯಲ್ಲಿ ಬ್ಯುಸಿಯಾದ ರಾಘು ಶಿವಮೊಗ್ಗ

‘ಚೌಕ ಬಾರ’ ಕಿರುಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದ ನಿರ್ದೇಶಕ ರಾಘು ಶಿವಮೊಗ್ಗ ‘ಚೂರಿ ಕಟ್ಟೆ’ ಸಿನಿಮಾದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸದ್ಯ ‘ಪೆಂಟಗನ್‌’ ಸಿನಿಮಾದಲ್ಲಿ ಒಂದು ಕಥೆ ನಿರ್ದೇಶನ ಮಾಡಿರುವ ಅವರು ‘ರೂಮ್‌ ಬಾಯ್‌’, ‘ಸದ್ದು ವಿಚಾರಣೆ ನಡೆಯುತ್ತಿದೆ’ ಹಾಗೂ ಇನ್ನು ಹೆಸರಿಡದ ಕೆಲವು ಸಿನಿಮಾಗಳು ಸೇರಿದಂತೆ ಎಂಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಆ್ಯಕ್ಟ್ 1978 ಸಿನಿಮಾದ ನಂತರ ಹಲವು ಅವಕಾಶಗಳು ಹುಡುಕಿಕೊಂಡು ಬಂದವು. ಅದೇ ಸಮಯಕ್ಕೆ ಲಾಕ್‌ಡೌನ್‌ ಇತ್ತು. ಸುಮ್ಮನೆ ಕೂರುವ ಬದಲು ನಟನೆ ಮಾಡೋಣ ಎಂದುಕೊಂಡು ಮಾಡುತ್ತಿದ್ದೇನೆ. ಇದರರ್ಥ ನಾನು ನಿರ್ದೇಶನದಿಂದ ದೂರ ಸರಿಯುತ್ತೇನೆ ಎಂದಲ್ಲ. ಈಗಾಗಲೇ ಎರಡು ಸಿನಿಮಾಗಳ ಚರ್ಚೆ ನಡೆಯುತ್ತಿದೆ. ಸದ್ಯದಲ್ಲೇ ಒಂದು ಸಿನಿಮಾ ಅನೌನ್ಸ್‌ ಆಗುತ್ತದೆ. ನಿರ್ಮಾಪಕರು ರೆಡಿ ಇದ್ದಾರೆ. ನಟನೆ ಕೂಡ ಸಿನಿಮಾರಂಗದ ಇನ್ನೊಂದು ಕೆಲಸ ಎಂದುಕೊಂಡು ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ರಾಘು ಶಿವಮೊಗ್ಗ.

‘Act 1978’ ಚಿತ್ರದ ‘ಬೆಂಜಮಿನ್’ ಪಾತ್ರಕ್ಕೆ ಈ ಅಪರೂಪದ ನಟ ಸಿಕ್ಕಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್‌ ವಿಷಯ!

​ವೆಬ್‌ ಸಿರೀಸ್‌ಗಳಲ್ಲಿ ಅರವಿಂದ ಕುಪ್ಳೀಕರ್‌

‘ಪುಕ್ಸಟ್ಟೆ ಲೈಫು’ ಸಿನಿಮಾ ಮೂಲಕ ಭರವಸೆಯ ನಿರ್ದೇಶಕರೆನಿಸಿಕೊಂಡ ಅರವಿಂದ ಕುಪ್ಳೀಕರ್‌ ಮೊದಲಿನಿಂದಲೂ ನಟನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಈಗ ಹಿಂದಿಯ ವೆಬ್‌ ಸಿರೀಸ್‌ಗಳಲ್ಲಿ ನಟಿಸುತ್ತಿದ್ದಾರೆ. ಜತೆಗೆ ಕನ್ನಡದ ಬೇರೆ ಬೇರೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ‘ಕಥೆ ಬರೆಯುವುದು, ನಿರ್ದೇಶನ ಮಾಡುವುದು ನನ್ನ ಮೊದಲ ಕೆಲಸ. ಇದರ ಜತೆಗೆ ನಟನೆಯೂ ಮಾಡುತ್ತೇನೆ. ರಂಗಭೂಮಿ ದಿನಗಳಿಂದಲೂ ನಾನು ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ಚಿತ್ರರಂಗಕ್ಕೆ ಬಂದ ಮೇಲೂ ಅದೇ ಮಾಡುತ್ತಿದ್ದೇನೆ. ಪುಕ್ಸಟ್ಟೆ ಲೈಫು ನಂತರ ಈಗ ಮತ್ತೊಂದು ಸಿನಿಮಾದ ಕಥೆ ಬರೆದುಕೊಂಡಿದ್ದೇನೆ. ಮಧ್ಯದಲ್ಲಿಅವಕಾಶ ಸಿಕ್ಕರೆ ನಟಿಸುತ್ತೇನೆ’ ಎನ್ನುತ್ತಾರೆ ಅರವಿಂದ್‌.

ಪುಕ್ಸಟ್ಟೆ ಲೈಫಿನಲ್ಲಿ ಷಹಜಹಾನ್‌ನ ವಿನೋದ ಮತ್ತು ವಿಷಾದ; ‘ಪುಕ್ಸಟ್ಟೆ ಲೈಫು’ ಸಿನಿಮಾ ವಿಮರ್ಶೆ

​ಕಿರುಚಿತ್ರ ಮಾಡಿದ ಸತ್ಯ ಹೆಗಡೆ

ಸ್ಯಾಂಡಲ್‌ವುಡ್‌ನ ಬೇಡಿಕೆಯ ಸಿನಿಮಾಟೋಗ್ರಾಫರ್‌ ಸತ್ಯ ಹೆಗಡೆ, ತಮ್ಮ ಕ್ಯಾಮೆರಾ ಕೆಲಸದಿಂದ ಅಭಿಮಾನಿಗಳನ್ನು ಗಳಿಸಿಕೊಂಡವರು. ಈಗಲೂ ಹಲವು ಸಿನಿಮಾಗಳಿಗೆ ಸಿನಿಮಾಟೋಗ್ರಫಿ ಮಾಡುತ್ತಿರುವ ಅವರು ಎರಡು ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಒಳ್ಳೆಯ ಕಥೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದ್ದಾರಂತೆ ಸತ್ಯ ಹೆಗಡೆ. ಸತ್ಯ ಹೆಗಡೆಯವರ ಎರಡು ಕಿರುಚಿತ್ರಗಳಲ್ಲಿ ಒಂದನ್ನು ಮತ್ತೊಬ್ಬ ಸಿನಿಮಾಟೋಗ್ರಾಫರ್‌ ಅಭಿಷೇಕ್‌ ಕಾಸರಗೋಡು ಹಾಗೂ ಇನ್ನೊಂದನ್ನು ಮಂಸೋರೆ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆಯವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಂಸೋರೆ ನಿರ್ದೇಶನದ ‘ದಿ ಕ್ರಿಟಿಕ್‌’ ಕಿರುಚಿತ್ರಕ್ಕೆ ಮೆಚ್ಚುಗೆ; ಇದು ಸತ್ಯ ಹೆಗಡೆ ಹೊಸ ಪ್ರಯತ್ನ

​ನಾನು ಮೊದಲಿನಿಂದಲೂ ನಟ

ಒಳ್ಳೊಳ್ಳೆ ಬ್ಯಾನರ್‌ಗಳು, ಒಳ್ಳೆ ನಿರ್ದೇಶಕರು, ದೊಡ್ಡ ದೊಡ್ಡ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೆ ಕರೆಯುತ್ತಿದ್ದಾರೆ. ಹಾಗಾಗಿ ನಟಿಸುತ್ತಿದ್ದೇನೆ. ನಾನು ಮೊದಲಿನಿಂದಲೂ ನಟ. ಆದರೆ ನನ್ನದೇ ರೀತಿಯಲ್ಲಿ ಕಥೆ ಹೇಳಬೇಕು ಎಂದು ನಿರ್ದೇಶಕನಾದೆ. ಈಗ ಮತ್ತೆ ಸಿನಿಮಾಗಳನ್ನು ನಿರ್ದೇಶನ ಮಾಡುತ್ತೇನೆ. ಈ ವರ್ಷ ನನ್ನದೇ ನಿರ್ದೇಶನದಲ್ಲಿ ಒಂದು ಸಿನಿಮಾ ರಿಲೀಸ್‌ ಆಗುತ್ತದೆ.

-ರಾಘು ಶಿವಮೊಗ್ಗ, ನಿರ್ದೇಶಕ

ಪ್ರತಿ ಸಿನಿಮಾಗೂ ಪ್ರೇಕ್ಷಕನಿರುತ್ತಾನೆ

ಸಿನಿಮಾಗಳಿಗೆ ಪ್ರೇಕ್ಷಕರನ್ನು ಸೃಷ್ಟಿ ಮಾಡಬೇಕು ಎಂಬ ಉದ್ದೇಶದಲ್ಲಿ ಈ ವೇದಿಕೆ ಹುಟ್ಟಿಕೊಂಡಿದೆ. ಇದಕ್ಕಾಗಿ ನನ್ನ ಜತೆ ರಿಸರ್ಚ್ ವರ್ಕ್ ಮಾಡಲು ಒಂದು ತಂಡವಿದೆ. ನಿರ್ಮಾಪಕರಿಗೆ ಹಾಕಿದ ದುಡ್ಡನ್ನು ವಾಪಸ್‌ ತಂದುಕೊಡಲು ನಮ್ಮ ಕಡೆಯಿಂದ ಇದೊಂದು ಸಣ್ಣ ಪ್ರಯತ್ನ ಎನ್ನಬಹುದು. ಪ್ರತಿ ಸಿನಿಮಾಗೂ ಪ್ರೇಕ್ಷಕನಿರುತ್ತಾನೆ. ಅವನ್ಯಾರು, ಅವನನ್ನು ಹುಡುಕಿ ಸಿನಿಮಾ ತಲುಪಿಸುವುದು ಹೇಗೆ ಎಂಬ ಬಗ್ಗೆ ನಮ್ಮ ವೇದಿಕೆ ಕೆಲಸ ಮಾಡುತ್ತದೆ.

-ಸತ್ಯ ಪ್ರಕಾಶ್‌, ನಿರ್ದೇಶಕ

‘ನಮ್ ತಂದೆ, ಸಾಲ ಮಾಡಿ ಸಿನಿಮಾ ಮಾಡು ಅಂದಿದ್ರು, ಈಗಲೂ ಅದೇ ಮಾಡ್ತಾ ಇದ್ದೀನಿ’- ನಿರ್ದೇಶಕ ಸತ್ಯ ಪ್ರಕಾಶ್‌



Read more

[wpas_products keywords=”deal of the day party wear dress for women stylish indian”]