Karnataka news paper

ತುಳುನಾಡ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ; ತುಳುವಿಗೆ ದೂರವಾದ ಸಂವಿಧಾನ ಮಾನ್ಯತೆ


ಎಸ್‌. ಜಿ. ಕುರ್ಯ
ಉಡುಪಿ: ಕರಾವಳಿ ಕರ್ನಾಟಕದ ವ್ಯಾವಹಾರಿಕ, ಮಾತೃ/ ಹೃದಯ ಭಾಷೆ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಡಿ ಸೇರಿಸಲು ರಾಜ್ಯ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ತುಳುವ ಮನಸ್ಸುಗಳಿಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ.

ತುಳು ಹೊರತಾದ ಪಂಚ ದ್ರಾವಿಡ ಭಾಷೆಗಳ ಸಹಿತ ಒಟ್ಟು 22 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದದಡಿ ಮಾನ್ಯತೆ ಪಡೆದಿದ್ದು, 38 ಭಾಷೆಗಳು ಸರದಿಯಲ್ಲಿದ್ದು, ಪಹ್ವಾ(1996) ಹಾಗೂ ಸೀತಾಕಾಂತ ಮಹಾಪಾತ್ರ(2003) ನೀಡಿದ ಯಥಾಸ್ಥಿತಿ ಕಾಪಾಡುವ ವರದಿಗೆ 19 ವರ್ಷ ಬಳಿಕವೂ ಕೇಂದ್ರ ಸರಕಾರ ಜೋತು ಬಿದ್ದಿದೆ. ತುಳುವನ್ನು ಪ್ರಾಯೋಗಿಕ, ಆಡಳಿತಾತ್ಮಕವಾಗಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ಆರ್ಥಿಕ ನೆಲೆಯಲ್ಲೂ ಸಾಧ್ಯವಿಲ್ಲವೆಂದಿದೆ.
ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನ ತುಳು ಮತ್ತು ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ ಕೆ ಹರಿಪ್ರಸಾದ್‌
ಕೇರಳದ ಕಾಸರಗೋಡು ಸಂಸದ ರಾಜಮೋಹನ್‌ ಉಣ್ಣಿತ್ತಾನ್‌ ಪ್ರಶ್ನೆಗೆ ಸಂಸತ್‌ನಲ್ಲಿ ಇತ್ತೀಚೆಗೆ ಉತ್ತರ ನೀಡಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌, ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸುವ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದಿದ್ದಾರೆ. ತುಳುವಿನ ಭವಿಷ್ಯದ ಹಾದಿ ಕಲ್ಲು, ಮುಳ್ಳುಗಳಿಂದ ಕೂಡಿವೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌, ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಹೋರಾಟದಿಂದ ರಾಜಕೀಯವಾಗಿ ಬೆಳೆದು ಬಂದವರಾಗಿದ್ದಾರೆ. ತುಳು ಮೂಲದ ಸಂಸದರು, ಸಚಿವರು, ಶಾಸಕರ ಪ್ರಬಲ ಇಚ್ಛಾಶಕ್ತಿಯಿಂದಷ್ಟೇ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದದ ದಡ ಸೇರಲು ಸಾಧ್ಯವಾಗಲಿದೆ.

ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ತುಳು ಭಾಷಾ ಪಠ್ಯ ಬೋಧನೆ ಕಳೆದೊಂದು ದಶಕದಿಂದ ಜಾರಿಯಲ್ಲಿದ್ದರೂ ರಾಜ್ಯದ ಅಧಿಕೃತ ಆಡಳಿತ ಭಾಷೆಯ ಮಾನ್ಯತೆ ದೊರೆತಿಲ್ಲ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಂಘ ಸಂಸ್ಥೆಗಳ ಮೂಲಕ ತುಳು ಲಿಪಿ, ಭಾಷಾ ಕಲಿಕೆಯ ಪ್ರಯೋಗ ಜಾರಿಯಲ್ಲಿದೆ. ಆದರೆ ಕೇರಳ ಸರಕಾರ, ಜನಪ್ರತಿನಿಧಿಗಳು ತುಳು ಪರ ತೋರುತ್ತಿರುವ ಒಲವು, ಆಸಕ್ತಿ, ಇಚ್ಛಾ ಶಕ್ತಿ ಕರಾವಳಿ/ ಕರ್ನಾಟಕದ ಜನಪ್ರತಿನಿಧಿಗಳಲ್ಲಿಲ್ಲ ಎನ್ನುವುದು ಸಾಬೀತಾಗುತ್ತಲೇ ಇದೆ. ಉಡುಪಿಯ ಅಷ್ಟಮಠಗಳ ಯತಿಗಳು ತುಳು ಲಿಪಿಯಲ್ಲೇ ಸಹಿ ಹಾಕುವ ವಿಶಿಷ್ಟ ಭಾಷಾಭಿಮಾನದ ಸಂಪ್ರದಾಯ ಇಂದಿಗೂ ಮುಂದುವರಿದಿದೆ.
ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ! ವ್ಯಾಪಕ ಆಕ್ರೋಶ
2011ರ ಜನಗಣತಿ ಪ್ರಕಾರ 18.46 ಲಕ್ಷ ತುಳು ಭಾಷಿಗರಿದ್ದರೂ ತುಳು ಮಾತೃಭಾಷಿಗರಲ್ಲದವರೂ ವ್ಯಾವಹಾರಿಕವಾಗಿ ತುಳು ಮಾತನಾಡುತ್ತಾರೆ. ಪಂಚ ದ್ರಾವಿಡ ಭಾಷೆಗಳ ಪೈಕಿ ತುಳುವಷ್ಟೇ ಸಂವಿಧಾನದ ಎಂಟನೇ ಪರಿಚ್ಛೇದದಿಂದ ಹೊರಗುಳಿದಿದ್ದು ಇನ್ನೂ ಎಷ್ಟು ಸಮಯ ರಾಮನಿಗಾಗಿ ಕಾದ ಶಬರಿಯಂತೆ ತುಳು ಭಾಷಿಗರು ಕಾಯಬೇಕು ಎನ್ನುವ ಪ್ರಶ್ನೆಗೆ ರಾಜಕೀಯ ಇಚ್ಛಾಶಕ್ತಿ, ಹೋರಾಟವೇ ನಿರ್ಣಾಯಕ ಉತ್ತರವಾಗಲಿದೆ.

  • 2001ರ ಜನಗಣತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ 30 ಭಾಷೆಗಳಿವೆ.
  • 10 ಸಾವಿರಕ್ಕಿಂತ ಹೆಚ್ಚಿನ ಜನರು ಮಾತನಾಡುವ 122 ಭಾಷೆಗಳಿವೆ, 1599 ಭಾಷೆಗಳು ಜನರ ನಡುವೆ ಜೀವಂತ ಇವೆ.
  • ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಸಂಸ್ಕೃತ ಭಾಷಿಗರು ಕೇವಲ 24,821(2011 ಜನಗಣತಿ), ಮಣಿಪುರಿ 17,61,079 ಭಾಷಿಗರು.
  • ಸಂವಿಧಾನದ ಮಾನ್ಯತೆ ಪಡೆಯದ ಭಿಲ್ಲಿ/ಭಿಲೊಡಿ: 1.04 ಕೋಟಿ, ಗೊಂಡಿ: 29.84 ಲಕ್ಷ, ಗರೊ: 11.45 ಲಕ್ಷ, ಖಂಡೇಶಿ: 18.60 ಲಕ್ಷ ಭಾಷಿಗರಿದ್ದಾರೆ.
  • ಬಾರಕೂರಿನ ತುಳು ರಾಜ್ಯದ ಪ್ರಭಾವ ಉಡುಪಿ, ಮಂಗಳೂರು, ಕಾಸರಗೋಡು ಚಿಕ್ಕಮಗಳೂರು, ಶಿವಮೊಗ್ಗದ ತನಕ ಇದೆ.

1,100 ಲಿಪಿ ವರ್ಷ, 2,500 ವರ್ಷದ ಇತಿಹಾಸ, ಜಗದಗಲ 2.50 ಕೋಟಿ ಭಾಷಿಗರುಳ್ಳ ತುಳು ರಾಜ್ಯದ ಅಧಿಕೃತ ಭಾಷೆಯಾಗಬೇಕು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಬೇಕೆನ್ನುವ ಆಗ್ರಹ, ಹೋರಾಟ ನಿರ್ಣಾಯಕವಾಗಬೇಕಿದೆ. ಸಂವಿಧಾನದ ಮಾನ್ಯತೆ ಸಿಕ್ಕರೆ ಉಡುಪಿಯ ಶ್ರೀಸೋದೆ ವಾದಿರಾಜರ ದಿನವನ್ನು ತುಳುದಿನವಾಗಿ ಪರಿಗಣಿಸಿ ಆಚರಿಸುವ ಚಿಂತನೆಯಿದೆ.

ದಯಾನಂದ ಕತ್ತಲ್‌ಸಾರ್‌, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

ಭಾಷೆ ಇರುವುದು ಏಕತೆಗಾಗಿ, ವಿವಾದ ಹುಟ್ಟು ಹಾಕಬಾರದು. ಸ್ಥಾನಮಾನ ಅಪೇಕ್ಷೆ ಮಾಡುತ್ತಾ ಕೂತರೆ ಕೆಲಸವಾಗದು. ತುಳು ಲಿಪಿ, ಭಾಷೆ ಕಲಿಸುವ ಆ್ಯಪ್‌ ಸಹಿತ ಶಿಕ್ಷಣ ಮಾಧ್ಯಮ, ಕಲೆ, ಸಂಸ್ಕೃತಿ, ತಂತ್ರಜ್ಞಾನದ ಮೂಲಕ ತುಳು ಭಾಷಾ ಬೆಳವಣಿಗೆ, ವಿಸ್ತರಣೆಯಾಗಬೇಕು

ಚ.ಮೂ. ಕೃಷ್ಣಶಾಸ್ತ್ರಿ, ರಾಷ್ಟ್ರೀಯ ಮ್ಯಾನುಸ್ಕಿ್ರಪ್ಟ್‌ ಮಿಷನ್‌ ಕಾರ್ಯಕಾರಿ ಸಮಿತಿ ಸದಸ್ಯ, ಹೊಸದಿಲ್ಲಿ.



Read more

[wpas_products keywords=”deal of the day sale today offer all”]