Karnataka news paper

ವಿಜಯಪುರದಲ್ಲಿ ಮತ ಎಣಿಕೆ ಆರಂಭ: ಸಂಜೆ ವೇಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!


ವಿಜಯಪುರ: ವಿಜಯಪುರಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

ವಿಜಯಪುರ ನಗರದ ವಿ. ಭ. ದರಬಾರ ಹೈಸ್ಕೂಲಿ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಬೆಳಿಗ್ಗೆ 7.30 ಕ್ಕೆ ಇಲ್ಲಿನ ಎರಡು ಭದ್ರತಾ ಕೊಠಡಿಗಳನ್ನು ಚುನಾವಣಾ ಅಧಿಕಾರಿ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ್‌, ಚುನಾವಣೆ ವೀಕ್ಷಕ ಅಧಿಕಾರಿ ಎಲ್. ಕೆ. ಅತಿಕ್‌ ಮತ್ತು ಏಜೆಂಟರ ಸಮ್ಮುಖದಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಯಿತು.

ವಿ. ಭ. ದರಬಾರ ಹೈಸ್ಕೂಲ್ ಆವರಣದಲ್ಲಿ ಮತ ಎಣಿಕೆಗಾಗಿ ಎರಡು ಪ್ರತ್ಯೇಕ ಕೊಠಡಿಗಳನ್ನು ಸಜ್ಜು ಗೊಳಿಸಲಾಗಿದೆ. ಎರಡು ಕೊಠಡಿಗಳಲ್ಲಿ ತಲಾ ಏಳರಂತೆ ಟೇಬಲ್ ಗಳನ್ನು ಹಾಕಲಾಗಿದೆ. ಒಟ್ಟು 14 ಟೇಬಲ್ ಗಳ ಮೇಲೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 411 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಎಲ್ಲ 411 ಮತಪೆಟ್ಟಿಗೆಗಳನ್ನು ಮತ ಎಣಿಕೆ ಕೊಠಡಿಗಳಿಗೆ ತಂದು ಮತ ಎಣಿಕೆ ಮಾಡಲಾಗುತ್ತಿದೆ. ಮೊದಲಿಗೆ ಒಂದೊಂದೇ ಮತಪೆಟ್ಟಿಗೆಗಳನ್ನು ತೆರೆದು ಅದರಲ್ಲಿರುವ ಮತಪತ್ರಗಳನ್ನು ಟೇಬಲ್ ಮೇಲೆ ಹಾಕಿ ತಲಾ 25 ರಂತೆ ಬಂಡಲ್ ಗಳನ್ನು ಮಾಡಲಾಗುತ್ತದೆ. ನಂತರ ಈ ಬಂಡಲ್ ಗಳನ್ನು ಡ್ರಮ್ ವೊಂದರಲ್ಲಿ ಹಾಕಿ ಮಿಶ್ರಣ ಮಾಡಿ 14 ಟೇಬಲ್ ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.
Karnataka MLC Election Results Live: ಹಾಸನದಲ್ಲಿ ಸೂರ್‌ ರೇವಣ್ಣಗೆ ಗೆಲುವು; ರಿಸಲ್ಟ್ ಕುರಿತ ಕ್ಷಣಕ್ಷಣದ ಮಾಹಿತಿ ಇಲ್ಲಿದೆ
ಇದಾದ ಬಳಿಕ ಪ್ರತಿಯೊಂದು ಟೇಬಲ್ ಮೇಲೆ ಇಡಲಾಗಿರುವ ಒಟ್ಟು ಒಂಬತ್ತು ಟ್ರೇ ಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹಾಗೂ ಸಂಶಯಾಸ್ಪದ ಮತ್ತು ತಿರಸ್ಕೃತ ಮತಗಳನ್ನು ಆಯಾ ಟ್ರೇ ಗಳಲ್ಲಿ ವಿಂಗಡಿಸಲಾಗುತ್ತದೆ.

ನಂತರ ಸ್ವೀಕೃತವಾದ ಒಟ್ಟು ಮತಗಳನ್ನು ಗಣನೆಗೆ ತೆಗೆದುಕೊಂಡು ಮೂರು ಭಾಗಗಳನ್ನಾಗಿ ವಿಭಾಗಿಸಲಾಗುತ್ತದೆ. ಈ ಮೂರು ಭಾಗಗಳಲ್ಲಿ ಒಂದು ಭಾಗಕ್ಕಿಂತ ಒಂದು ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜಯಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗುತ್ತದೆ.
ಯಾರಿಗೆ ‘ಮಂಗಳ’ವಾರ? ಮೇಲ್ಮನೆಯ 25 ಸ್ಥಾನಗಳ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ
ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ನಗರದ ವಿ. ಭ. ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.



Read more