ಹೈಲೈಟ್ಸ್:
- ಗಣರಾಜ್ಯೋತ್ಸವದ ದಿನ ಮೋದಿ ಸೇರಿ ಹಲವು ಗಣ್ಯರಿಗೆ ಜೀವ ಬೆದರಿಕೆ
- ಬೆದರಿಕೆ ಕುರಿತು ಗುಪ್ತಚರ ಇಲಾಖೆಯು ಒಂಬತ್ತು ಪುಟಗಳ ಮಾಹಿತಿ
- ದಿಲ್ಲಿಯ ಹೂವಿನ ಮಾರುಕಟ್ಟೆಯಲ್ಲಿ 3 ಕೆಜಿ ಸ್ಫೋಟಕ ಸಾಧನ ಸಿಕ್ಕಿದ ಬೆನ್ನಲೆ ಮಾಹಿತಿ
ಬೆದರಿಕೆ ಕುರಿತು ಗುಪ್ತಚರ ಇಲಾಖೆಯು ಒಂಬತ್ತು ಪುಟಗಳ ಮಾಹಿತಿ ನೀಡಿದ್ದು, ”ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ಉಗ್ರರಿಂದ ನರೇಂದ್ರ ಮೋದಿ ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಲವು ಗಣ್ಯರಿಗೆ ಜೀವ ಬೆದರಿಕೆ ಇದೆ,” ಎಂದು ತಿಳಿಸಿದೆ. ಅಲ್ಲದೆ, ”ಭಾಗವಹಿಸುವ ಅತಿಥಿಗಳು, ಸಮಾರಂಭ ನಡೆಯುವ ಸ್ಥಳದಲ್ಲಿ ಎಲ್ಲಿಯೇ ಜನ ಗುಂಪಾಗಿ ನಿಂತರೂ ಅಲ್ಲೆಲ್ಲ ದಾಳಿ ಮಾಡಲು ಸಹ ಸಂಚು ರೂಪಿಸಿದ್ದಾರೆ,” ಎಂದೂ ಎಚ್ಚರಿಸಿದೆ.
ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವಂತೆ ಕೇಂದ್ರ ಸರಕಾರವು ಕಜಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ತುರ್ಕ್ಮೇನಿಸ್ತಾನ ಹಾಗೂ ಉಜ್ಬೇಕಿಸ್ತಾನದ ನಾಯಕರಿಗೆ ಆಹ್ವಾನ ನೀಡುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೇ ಉಗ್ರರ ಬೆದರಿಕೆಯು ಆತಂಕ ಮೂಡಿಸಿದೆ. ಹಾಗಾಗಿ, ರಾಷ್ಟ್ರ ರಾಜಧಾನಿಯಾದ್ಯಂತ ಹೆಚ್ಚಿನ ಭದ್ರತೆ ಒದಗಿಸಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಪಂಜಾಬ್ನಲ್ಲಿ ಪ್ರಧಾನಿ ಮೋದಿಗೆ ಜೀವ ಬೆದರಿಕೆ ಸಾಧ್ಯತೆ: 3 ದಿನ ಮೊದಲೇ ವರದಿ ಕೊಟ್ಟಿದ್ದ ಗುಪ್ತಚರ ಇಲಾಖೆ..!
ನೌಕಾನೆಲೆಯಲ್ಲಿಸ್ಫೋಟ, ಐಎನ್ಎಸ್ ರಣವೀರ್ನಲ್ಲಿದ್ದ 3 ಸಿಬ್ಬಂದಿ ಸಾವು
ಮುಂಬಯಿ: ವಾಣಿಜ್ಯ ನಗರಿಯ ನೌಕಾಪಡೆ ನೆಲೆಯಲ್ಲಿದ್ದ ಯುದ್ಧನೌಕೆ ಐಎನ್ಎಸ್ ರಣವೀರ್ನ ಆಂತರಿಕ ಕೊಠಡಿಯಲ್ಲಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಮೂವರು ನೌಕಾಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಫೋಟದ ಕಾರಣ ಅರಿಯಲು ಆಂತರಿಕ ತನಿಖೆಗೆ ಸಮಿತಿ ರಚಿಸಲಾಗಿದೆ.
ಸ್ಫೋಟ ಸಂಭವಿಸಿದ ಕೂಡಲೇ ಕೊಠಡಿಗೆ ದೌಡಾಯಿಸಿದ ನೌಕಾಪಡೆಯ ಇತರ ಸಿಬ್ಬಂದಿ, ತ್ವರಿತವಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ರಜಪೂತ್ ಶ್ರೇಣಿಯ ಧ್ವಂಸಕ ನೌಕೆಗಳ ಸಾಲಿಗೆ ಸೇರುವ ‘ಐಎನ್ಎಸ್ ರಣವೀರ್’ 1986ರಲ್ಲಿ ನಿರ್ಮಿಸಲಾದ ಪ್ರಮುಖ ಯುದ್ಧನೌಕೆಯಾಗಿದೆ. ಇದೇ ಮಾದರಿಯ ಐಎನ್ಎಸ್ ರಣವಿಜಯ್ ಕೂಡ ನಿರ್ಮಿಸಲಾಗಿದೆ. 2021ರ ನವೆಂಬರ್ನಿಂದ ಪೂರ್ವ ನೌಕಾಪಡೆಯ ಕಾರ್ಯಾಚರಣೆಗೆ ಐಎನ್ಎಸ್ ರಣವೀರ್ ನಿಯೋಜಿಸಲಾಗಿದೆ.
Read more
[wpas_products keywords=”deal of the day sale today offer all”]