Karnataka news paper

ಪ್ರಚೋದನಕಾರಿ ಹೇಳಿಕೆ : ಕಾಳಿ ಮಠದ ಶ್ರೀಋುಷಿಕುಮಾರ ಸ್ವಾಮೀಜಿ ಬಂಧನ


ಹೈಲೈಟ್ಸ್‌:

  • ಕಾಳಿ ಮಠದ ಶ್ರೀಋುಷಿಕುಮಾರ ಸ್ವಾಮೀಜಿ ಬಂಧನ
  • ಕೋಮು ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ಬಂಧಿಸಿದ ಮಂಡ್ಯ ಪೊಲೀಸರು
  • ಸ್ವಾಮೀಜಿಗೆ ಜ. 31ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ

ಶ್ರೀರಂಗಪಟ್ಟಣ : ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಕಾಳಿ ಮಠದ ಶ್ರೀಋುಷಿಕುಮಾರ ಸ್ವಾಮೀಜಿ ಅವರನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಧೀಶರು ಜ. 31ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಎರಡು ದಿನಗಳ ಹಿಂದೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಗೆ ಆಗಮಿಸಿದ್ದ ಋುಷಿ ಕುಮಾರ ಸ್ವಾಮೀಜಿ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಸಂಬಂಧ ಭಾರತೀಯ ಪುರಾತತ್ವ ಮತ್ತು ಸಂಗ್ರಹಾಲಯ(ಎಎಸ್‌ಐ) ಅಧಿಕಾರಿಗಳು ಶ್ರೀರಂಗಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ ಕಾಳಿ ಮಠದ ಶ್ರೀಋುಷಿಕುಮಾರ ಸ್ವಾಮೀಜಿ ವಿರುದ್ಧ ಐಪಿಸಿ ಸೆಕ್ಷನ್‌ 153ಎ, 295ಎ ಪ್ರಕಾರ(ಕೋಮು ಸೌಹಾರ್ದತೆಗೆ ಧಕ್ಕೆ ತರುವುದು) ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಸಂದೇಶ್‌ಕುವರ್‌ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಪೊಲೀಸ್‌ ಇನ್ಸ್‌ಸ್ಪೆಕ್ಟರ್‌ ಪುನೀತ್‌, ಅಪರಾಧ ವಿಭಾಗ ದಳದ ಸುನೀಲ್‌ ನೇತೃತ್ವದ ಪೊಲೀಸರ ತಂಡ ಚಿಕ್ಕಮಗಳೂರಿಗೆ ತೆರಳಿ, ಶ್ರೀಋುಷಿಕುಮಾರ ಸ್ವಾಮೀಜಿ ಅವರನ್ನು ಬಂಧಿಸಿ ಮಂಗಳವಾರ ಶ್ರೀರಂಗಪಟ್ಟಣಕ್ಕೆ ಕರೆತಂದಿತು.

ಮಂದಿರ ಕೆಡವಿ ಮತ್ತೆ ಮಸೀದಿ ಕಟ್ಟುತ್ತೇವೆ: ಮುಸ್ಲಿಂ ನಾಯಕನ ಪ್ರಚೋದನಾಕಾರಿ ಹೇಳಿಕೆ

ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾಮೀಜಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಶ್ರೀರಂಗಪಟ್ಟಣದ ಅಡಿಷನಲ್‌ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಬಿ.ಮಜೀದಾ ಆಯಿಷಾ ಅವರೆದುರು ಹಾಜರುಪಡಿಸಲಾಯಿತು.

ಶ್ರೀಋುಷಿಕುಮಾರ ಸ್ವಾಮೀಜಿ ಪರ ವಕೀಲರಾದ ಬಾಲರಾಜು, ಎಸ್‌.ಆರ್‌.ಸಿದ್ದೇಶ್‌ ಜಾಮೀನಿಗಾಗಿ ಹಾಗೂ ಮಧ್ಯಕಾಲಿನ ಅರ್ಜಿಯನ್ನು ಹಾಕಿದ್ದರು. ಆದರೆ, ನ್ಯಾಯಾಧೀಶರು ಶ್ರೀಋುಷಿಕುಮಾರ ಸ್ವಾಮೀಜಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಅದರಂತೆ ಶ್ರೀಋುಷಿಕುಮಾರ ಸ್ವಾಮೀಜಿ ಅವರನ್ನು ಮಂಗಳವಾರ ಸಂಜೆ ಮಂಡ್ಯದ ಜಿಲ್ಲಾ ಕಾರಾಗೃಹಕ್ಕೆ ಕರೆತಂದು ಬಿಡಲಾಯಿತು.



Read more

[wpas_products keywords=”deal of the day sale today offer all”]