Karnataka news paper

ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ರಂಗೋಲಿ ಮೇಳ ಮತ್ತು ಗಾಳಿಪಟ ಸ್ಪರ್ಧೆ


ಕತಾರ್: ಮಕರ ಸಂಕ್ರಾಂತಿಯು ಭಾರತದಾದ್ಯಂತ ನಡೆಯುವ ಮಹತ್ವದ ಹಬ್ಬ. ಪ್ಯಾನ್ – ಇಂಡಿಯನ್ ಸೌರ ಹಬ್ಬ ಎಂದೇ ಖ್ಯಾತಿ ಪಡೆದಿರುವ ಮಕರ ಸಂಕ್ರಾಂತಿ, ಕನ್ನಡಿಗರ ಪಾಲಿಗೆ ಸುಗ್ಗಿ ಹಬ್ಬ. ಈ ಹಬ್ಬಕ್ಕೆ ಹಲವಾರು ಹೆಸರುಗಳು.. ಪೊಂಗಲ್, ಲೋಹ್ರಿ, ಬಿಹು.. ಮಕರ ಸಂಕ್ರಾಂತಿ.. ಹೀಗೆ ದೇಶದ ಉದ್ದಲಗಕ್ಕೂ ಹಲವು ಹೆಸರುಗಳು.. ಈ ಮಕರ ಸಂಕ್ರಾಂತಿ ಇದೀಗ ದೂರದ ಕತಾರ್‌ನಲ್ಲೂ ಹೆಸರು ಮಾಡಿದೆ..

sankranti

ಕತಾರ್‌ನ ಆಂಧ್ರ ಕಲಾ ವೇದಿಕೆ ಮತ್ತು ಗುಜರಾತ್ ಸಮಾಜದ ಸಹಯೋಗದಿಂದ ಈ ವರ್ಷದ ಮಕರ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಆಚರಣೆಯನ್ನು ಸಾಂಪ್ರದಾಯಿಕ ವಿಧಾನದಲ್ಲೇ ಆಚರಿಸುವ ಸಲುವಾಗಿ ರಂಗೋಲಿ ಮೇಳ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

50ರ ಸಂಭ್ರಮದಲ್ಲಿರುವ ‘ಕಾವೇರಿ’ಗೆ ಈ ವಿಶಿಷ್ಟ ಪತ್ರ ಬರೆದವರು ಯಾರು?
ಕತಾರ್‌ನ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್, ಮೇಡಂ ರಾಯಭಾರಿ ಡಾ. ಅಲ್ಪನಾ ಮಿತ್ತಲ್ ಮತ್ತು ಐಸಿಸಿ ಸಮನ್ವಯ ಅಧಿಕಾರಿ ಕ್ಸೇವಿಯರ್ ಧನರಾಜ್ ಅವರು ಉತ್ಸವದಲ್ಲಿ ಭಾಗವಹಿಸಿದ್ದರು.

ವೆಂಕಪ್ಪ ಭಾಗವತುಲ ನೇತೃತ್ವದ ಆಂಧ್ರ ಕಲಾ ವೇದಿಕೆಯ ನೂತನ ನಿರ್ವಹಣಾ ತಂಡದ ಸಹಯೋಗದಲ್ಲಿ ಮಹಿಳಾ ತಂಡ ಐಸಿಸಿ ಮಹಿಳೆಯರೊಂದಿಗೆ ಸೇರಿ ಅಶೋಕ ಸಭಾಂಗಣದಲ್ಲಿ ವರ್ಣರಂಜಿತ ರಂಗೋಲಿಗಳನ್ನು ರಚಿಸಿದರು.

‘ಅನಂತಾಶ್ವಥ’ ಗಾಯನ ಲೋಕದ ದಿಗ್ಗಜರಿಗೆ ಗೀತ ನಮನ: ಅನಿವಾಸಿ ಕನ್ನಡಿಗರಿಗೆ ‘ಕೆಓಟಿಟಿ’ಯಲ್ಲಿ ಕಾರ್ಯಕ್ರಮ
ಗುಜರಾತ್ ಸಮಾಜದ ಅಧ್ಯಕ್ಷ ದೇವಾಂಗ್ ಪಟೇಲ್ ಅವರು ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಐಸಿಸಿ ಮೈದಾನದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸಿದರು.

ಐಸಿಸಿ ಅಧ್ಯಕ್ಷ ಪಿಎನ್ ಬಾಬು ರಾಜನ್ ನೇತೃತ್ವದಲ್ಲಿ ಗಾಳಿಪಟ ಉತ್ಸವ ಹಾಗೂ ರಂಗೋಲಿ ಮೇಳದಲ್ಲಿ ಭಾಗವಹಿಸಿದ್ದ ಸಮಸ್ತ ಕತಾರ್ ಭಾರತೀಯರು ಸಂಭ್ರಮಪಟ್ಟರು. ತಾಯ್ನಾಡಿನಿಂದ ದೂರದಲ್ಲಿದ್ದರೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಈ ಕಾರ್ಯಕ್ರಮ ಸಹಕಾರಿಯಾಯ್ತು.

ನಮ್ಮ ಸಮಸ್ಯೆಗಳನ್ನೂ ಕೇಳಿ: ಜನವರಿ 2 ರಂದು ಅನಿವಾಸಿ ಕನ್ನಡಿಗರ ಟ್ವಿಟ್ಟರ್‌ ಅಭಿಯಾನ



Read more

[wpas_products keywords=”deal of the day sale today offer all”]