ಹೈಲೈಟ್ಸ್:
- ವಿಕೇಂಡ್ ಕಫ್ರ್ಯೂಗೆ ಮಿಶ್ರ ಪ್ರತಿಕ್ರಿಯೆ
- ನಗರಾದ್ಯಂತ ಅಗತ್ಯ ವಸ್ತುಗಳಿಗೆ ಅವಕಾಶ
- ಮಾಂಸದ ಅಂಗಡಿಗಳಲ್ಲಿ ಗ್ರಾಹಕರಿಗೆ ಕಾದ ಮಾಲೀಕರು
- ಪ್ರಮುಖ ರಸ್ತೆಗಳಲ್ಲಿ ಬೇಕಾಬಿಟ್ಟಿ ಸಾರ್ವಜನಿಕರ ಓಡಾಟ
- ಪ್ರಮುಖ ವೃತ್ತಗಳಲ್ಲಿ ದಂಡ ವಿಧಿಸಿದ ಪೊಲೀಸರು
ನಗರದ ವಾಣಿಜ್ಯ ಕೇಂದ್ರವಾದ ಬೆಂಗಳೂರು ರಸ್ತೆಯಲ್ಲಿ ಜವಳಿ, ಚಿನ್ನಾಭರಣ ಸೇರಿ ಎಲ್ಲ ಬಗೆಯ ವ್ಯಾಪಾರ, ವಹಿವಾಟುಗಳು ಸಂಪೂರ್ಣ ಸ್ಥಗಿತವಾಗಿದ್ದವು. ಬೀದಿ ವ್ಯಾಪಾರಿಗಳು, ತರಕಾರಿ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಯಿತು. ಹಾಗಾಗಿ ಬೆಳಗ್ಗೆ ಬೆಂಗಳೂರು ರಸ್ತೆಯಲ್ಲಿ ಜನ, ವಾಹನ ಸಂಚಾರವಿತ್ತು. ಮಧ್ಯಾಹ್ನದ ಬಳಿಕ ಜನ ಸಂಚಾರ ಕಡಿಮೆಯಾಯಿತು. ಕಾರ್ಖಾನೆ, ಅಗತ್ಯ ಸೇವೆ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವ ಕಾರಣ ಹೆಚ್ಚಿನ ಜನ ಸಂಚಾರವಿತ್ತು.
ರಸ್ತೆಗಳಿಗೆ ಬ್ಯಾರಿಕೇಡ್!
ಕಫ್ರ್ಯೂ ಕಾರಣ ನಗರದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಅಗತ್ಯ ಸೇವೆಗಷ್ಟೇ ಅವಕಾಶ ಇದ್ದ ಕಾರಣ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಆಸ್ಪತ್ರೆ, ಮೆಡಿಕಲ್ ಶಾಪ್ಗಳಿಗೆ ಹೋಗುವವರಿಗೆ ಅನುಮತಿ ನೀಡಿದರು.
ಕೊರೊನಾ ಹೆಚ್ಚಳ ಹಿನ್ನೆಲೆ ಬಳ್ಳಾರಿಯಲ್ಲಿ ಸೆಮಿಲಾಕ್ ಡೌನ್ ಅಸ್ತ್ರ : ಇವುಗಳು ಜ.31ರವರೆಗೆ ಬಂದ್
ವ್ಯಾಪಾರಕ್ಕೆ ಕತ್ತರಿ:
ಮಾಂಸದ ಅಂಗಡಿಗಳಲ್ಲಿ ಕುರಿ, ಕೋಳಿ ಹಾಗೂ ಮೀನು ಮಾಂಸ ಮಾರಾಟ ಕಂಡು ಬಂತು. ಆದರೆ ನಗರದಲ್ಲಿ ಪೊಲೀಸರು ದಂಡ ವಿಧಿಸುತ್ತಿದ್ದ ಕಾರಣ ಸಾರ್ವಜನಿಕರು ಖರೀದಿಗೆ ಹಿಂದೇಟು ಹಾಕಿದರು. ಇದರಿಂದಾಗಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು.
ನಗರದ ಪ್ರಮುಖ ರಸ್ತೆ, ಹೋಟೆಲ್, ಬೇಕರಿಗಳ ಮುಂಭಾಗದಲ್ಲಿಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಭಾರಿ ವಾಹನಗಳ ಸಂಚಾರ ನಿರಾತಂಕವಾಗಿತ್ತು. ಪೊಲೀಸರು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ದಂಡ ವಿಧಿಸಿದರು.
ದಂಡ ಪ್ರಯೋಗ:
ನಗರದ ಗಡಗಿ ಚನ್ನಪ್ಪ ವೃತ್ತ, ಸುಧಾ ಕ್ರಾಸ್, ಸಂಗಮ್ ವೃತ್ತ, ದುರ್ಗಮ್ಮ ಗುಡಿ ಸರ್ಕಲ್, ಎಸ್ಪಿ ಸರ್ಕಲ್, ಗವಿಯಪ್ಪ ವೃತ್ತ ಹಾಗೂ ನಾನಾ ವೃತ್ತಗಳಲ್ಲಿಸಂಚರಿಸಿದ ಸಾರ್ವಜನಿಕರು ಹಾಗೂ ವಾಹನಗಳಿಗೆ ಪೊಲೀಸರು ದಂಡ ವಿಧಿಸಿದರು. ಅಲ್ಲದೇ ವಾಹನಗಳನ್ನು ಜಪ್ತಿ ಮಾಡಿಕೊಂಡರು.
Read more
[wpas_products keywords=”deal of the day sale today offer all”]