Karnataka news paper

ರಾಜಕೀಯ ಹೋರಾಟದಿಂದ ಅಂತರರಾಜ್ಯ ಜಲ ವಿವಾದ ಗೆಲ್ಲಲು ಸಾಧ್ಯವಿಲ್ಲ: ದೇವೇಗೌಡ


The New Indian Express

ಮೈಸೂರು: ಕಾಂಗ್ರೆಸ್‌ನ ಇತ್ತೀಚಿನ ಮೇಕೆದಾಟು ಪಾದಯಾತ್ರೆಗೆ ಅಸಮ್ಮತಿ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಅಂತರರಾಜ್ಯ ಜಲ ವಿವಾದವನ್ನು ರಾಜಕೀಯ ಹೋರಾಟದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸಾಲಿಗರಾಮದಲ್ಲಿ ಜೆಡಿಎಸ್‌ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಜಕೀಯ ಕಾರಣಗಳಿಗಾಗಿ ಪಾದಯಾತ್ರೆ ಕೈಗೊಂಡಿದೆ ಎಂದು ನಾನು ಹೇಳುವುದಿಲ್ಲ, ಆದರೆ ಅಂತರರಾಜ್ಯ ಜಲ ವಿವಾದಗಳಂತಹ ಸಮಸ್ಯೆಗಳನ್ನು ಈ ರೀತಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ಪಾದಯಾತ್ರೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಕಾವೇರಿ ವಿವಾದ ಕುರಿತು ನ್ಯಾಯಾಲಯದ ಹೊರಗೆ ಎಂದಿಗೂ ಹೋರಾಟ ನಡೆಸಿಲ್ಲ ಎಂದು ಹೇಳಿದರು. 

ಇದೇ ವೇಳೆ ಕಾಂಗ್ರೆಸ್ ಆಂದೋಲನ ಮಾಡದಿದ್ದರೆ ನ್ಯಾಯಾಲಯವು ತನ್ನ ತೀರ್ಪು ನೀಡುವುದಿಲ್ಲವೇ?” ಎಂದು ಪ್ರಶ್ನಿಸಿದ ಅವರು, ಅಂತರರಾಜ್ಯ ವಿವಾದಗಳನ್ನು ಗದ್ದಲ ಅಥವಾ ಡೋಲು ಬಾರಿಸುವ ಮೂಲಕ ಗೆಲ್ಲಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.



Read more

[wpas_products keywords=”deal of the day”]