ಹೈಲೈಟ್ಸ್:
- ‘ರತ್ನನ್ ಪ್ರಪಂಚ’ ಸಿನಿಮಾದಿಂದ ಪ್ರಮೋದ್ಗೆ ಜನಪ್ರಿಯತೆ
- ಪ್ರಥ್ವಿ ಅಂಬರ್ಗೆ ಸಾಕಷ್ಟು ಸಿನಿಮಾ ಅವಕಾಶ ತಂದುಕೊಟ್ಟ ‘ದಿಯಾ’ ಯಶಸ್ಸು
- ಸಹಪ್ರಯಾಣಕ್ಕೆ ರೆಡಿಯಾದ ಪ್ರಥ್ವಿ ಅಂಬರ್, ಪ್ರಮೋದ್
ಒಂದು ಸಿನಿಮಾದಲ್ಲಿಇಬ್ಬರು ನಾಯಕರು ನಟಿಸುವಂತಹ ಕಥೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಆ ಸಾಲಿಗೆ ಹೊಸ ಸಿನಿಮಾವೊಂದು ಸೇರ್ಪಡೆಯಾಗುತ್ತಿದೆ. ಟ್ರಾವೆಲ್ ಕುರಿತಾದ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ಪ್ರಮೋದ್ ನಟಿಸುತ್ತಿದ್ದಾರೆ.
ಗಿರೀಶ್ ಮೂಲಿಮನಿ ಯಾರು?
‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಖ್ಯಾತಿಯ ಪ್ರಮೋದ್ ಮತ್ತು ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ಈಗ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ಇದನ್ನು ಗಿರೀಶ್ ಮೂಲಿಮನಿ ನಿರ್ದೇಶನ ಮಾಡುತ್ತಿದ್ದಾರೆ. ಸುದೀಪ್ ನಟನೆಯ ‘ಕೆಂಪೇಗೌಡ’, ‘ವರದ ನಾಯಕ’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ ಗಿರೀಶ್ ಮೂಲಿಮನಿ ‘ರಾಜರು’ ಸಿನಿಮಾ ಮೂಲಕ ನಿರ್ದೇಶಕರಾಗಿದ್ದರು. ಪೃಥ್ವಿ ಮತ್ತು ಪ್ರಮೋದ್ ನಟನೆಯ ಸಿನಿಮಾ ಅವರ ಎರಡನೇ ಸಿನಿಮಾವಾಗಿದೆ.
ನಿರ್ದೇಶಕ ಗಿರೀಶ್ ಮೂಲಿಮನಿ ಹೇಳಿದ್ದೇನು?
‘ಈ ಸಿನಿಮಾ ಕಾಲೇಜು ಬ್ಯಾಕ್ಡ್ರಾಪ್ನಲ್ಲಿ ಯುವಕರ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವಂತಹ ಕಥೆ. ಪ್ರೇಮ ಕಥೆ, ಭಾವನಾತ್ಮಕ ಸನ್ನಿವೇಶಗಳು, ಕೌಟುಂಬಿಕ ಮೌಲ್ಯಗಳು ಇರುವಂತಹ ಸಿನಿಮಾವಿದು. ಇಡೀ ಸಿನಿಮಾ ಟ್ರಾವೆಲ್ ಬ್ಯಾಕ್ಡ್ರಾಪ್ನಲ್ಲಿ ಮೂಡಿಬರುತ್ತದೆ. ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೂ ಕಥೆ ಸಾಗುತ್ತದೆ. ನಾನು ಕಥೆಯನ್ನು ಪ್ರಮೋದ್ ಮತ್ತು ಪೃಥ್ವಿಗೆ ಹೇಳಿದಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಇದರಲ್ಲಿ ಇಬ್ಬರಿಗೂ ಸಮನಾದ ಪಾತ್ರವಿದೆ. ಅವರಿಬ್ಬರ ಮೇಲೆ ಸಂಪೂರ್ಣ ಕಥೆಯೂ ಹೋಗುತ್ತದೆ’ ಎಂದಿದ್ದಾರೆ ಗಿರೀಶ್ ಮೂಲಿಮನಿ.
ಲಾಸ್ಟ್ ಬೆಂಚ್ ಹುಡುಗನಾಗಿ ನಟ ಪ್ರಮೋದ್ ಮಿಂಚಿಂಗ್; ‘ಅಲಂಕಾರ್ ವಿದ್ಯಾರ್ಥಿ’ಗೆ ಧನಂಜಯ್ ಸಾಥ್
ಮಾರ್ಚ್ನಿಂದ ಈ ಸಿನಿಮಾದ ಚಿತ್ರೀಕರಣ ಆರಂಭ
‘ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಬಂಡೆಯ ಬಳಿ ಇದರ ಚಿತ್ರೀಕರಣ ಮಾಡಲು ನಾವು ಅನುಮತಿ ಕೇಳುತ್ತಿದ್ದೇವೆ. ಎಸ್ವಿಎಸ್ ಟ್ರಾನ್ಸ್ಪೋರ್ಟ್ ಉದ್ಯಮದಿಂದ ಬಂದಿರುವ ಮುನೇಗೌಡ ಎಂಬವರು ನನ್ನ ಕನಸಿಗೆ ಬಂಡವಾಳ ಹೂಡುತ್ತಿದ್ದಾರೆ. ಒಳ್ಳೆಯ ಸಿನಿಮಾ ಮಾಡಬೇಕು ಎಂಬ ನಿಟ್ಟಿನಲ್ಲಿಎಲ್ಲಿಯೂ ಕಾಂಪ್ರಮೈಸ್ ಆಗಬೇಡಿ ಎಂದು ಹೇಳಿ ಬೆನ್ನೆಲುಬಾಗಿ ನಿಂತಿದ್ದಾರೆ. ಇದರ ಚಿತ್ರೀಕರಣವನ್ನು ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಾಡುವ ಪ್ಲ್ಯಾನ್ ಇದೆ’ ಎಂದು ಅವರು ಹೇಳಿದ್ದಾರೆ.
ಶೂಟಿಂಗ್ ಸ್ಥಳದಲ್ಲಿ ರಾಕ್ಲೈನ್ ಸುಧಾಕರ್ ನಿಧನ: ನಡೆದ ಘಟನೆ ವಿವರಿಸಿದ ನಟ ಪ್ರಥ್ವಿ ಅಂಬರ್!
ಇಬ್ಬರು ನಾಯಕಿಯರ ಆಯ್ಕೆ ಆಗಬೇಕು
ಈ ಸಿನಿಮಾಗೆ ಇಬ್ಬರು ನಾಯಕಿಯರ ಆಯ್ಕೆ ಶೀಘ್ರದಲ್ಲೇ ಆಗಲಿದೆ. ಗುಮ್ಮಿನೇನಿ ವಿಜಯ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಸುಜಯ್ ಕುಮಾರ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. ಮಾರ್ಚ್ನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾದಲ್ಲಿಎಲ್ಲಾ ವರ್ಗದವರಿಗೂ ಇಷ್ಟವಾಗುವಂಥ ಕಥೆ ಇದೆ. ಟ್ರಾವೆಲ್ ಮತ್ತು ಯೂತ್ಫುಲ್ ಸ್ಟೋರಿ ಇಷ್ಟಪಡುವವರಿಗೆ ಒಂದೊಳ್ಳೆಯ ಸಿನಿಮಾ ಇದಾಗಲಿದೆ.
ಸಿನಿಮಾಕ್ಕೆ ಟೈಟಲ್ ಕೂಡ ಇಡಬೇಕಿದೆ
ಸದ್ಯದಲ್ಲೇ ಇದರ ಟೈಟಲ್ ರಿವೀಲ್ ಮಾಡುತ್ತೇವೆ ಎಂದು ಹೇಳಿದ್ದಾರೆ ನಿರ್ದೇಶಕ ಗಿರೀಶ್ ಮೂಲಿಮನಿ. ‘ರತ್ನನ್ ಪ್ರಪಂಚ‘ ಸಿನಿಮಾದಲ್ಲಿ ನಟ ಪ್ರಮೋದ್ ಅವರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ‘ದಿಯಾ’ ಸಿನಿಮಾ ನಂತರದಲ್ಲಿ ಪ್ರಥ್ವಿ ಅಂಬರ್ ಅವರಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಬರತೊಡಗಿದವು.
Read more
[wpas_products keywords=”deal of the day party wear dress for women stylish indian”]