Karnataka news paper

ಓಮಿಕ್ರಾನ್‌ ಭೀತಿ : ರಾಜ್ಯದ ಹಲವು ದೇವಾಲಯಗಳಲ್ಲಿ ಜಾತ್ರೆಯಿಲ್ಲ, ಇದ್ದರೂ ಭಕ್ತರಿಗೆ ಪ್ರವೇಶವಿಲ್ಲ!


ಹೈಲೈಟ್ಸ್‌:

  • ರಾಜ್ಯದ ಹಲವು ದೇವಾಲಯಗಳಲ್ಲಿ ಜಾತ್ರೆಯಿಲ್ಲ, ಇದ್ದರೂ ಭಕ್ತರಿಗೆ ಪ್ರವೇಶವಿಲ್ಲ!
  • ಓಮಿಕ್ರಾನ್‌ ಆತಂಕದಿಂದಾಗಿ ಸಾಂಕೇತಿಕ, ಸರಳ ಜಾತ್ರೆಗೆ ಒತ್ತು
  • ದೇವಾಸ್ಥಾನ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸಿದ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಹಾಗೂ ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರಕಾರವು ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಜನವರಿ 31ರವರೆಗೆ ವೀಕೆಂಡ್‌ ಕರ್ಫ್ಯೂ ಮತ್ತು ಇತರೆ ನಿಯಮಗಳನ್ನು ವಿಸ್ತರಿಸಲಾಗಿದೆ. ಹಬ್ಬಗಳ ಆಚರಣೆಗೆ ಸಂಬಂಧಪಟ್ಟಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗಳು ಪ್ರತ್ಯೇಕ ಆದೇಶ ಹೊರಡಿಸಲಿವೆ. ಈ ತಿಂಗಳು ವಿವಿಧ ದೇವಾಲಯಗಳಲ್ಲಿ ನಡೆಯಬೇಕಿದ್ದ ಜಾತ್ರೋತ್ಸವ, ರಥೋತ್ಸವದ ಮೇಲೂ ಮಂಕು ಕವಿದಿದೆ.

ಕೆಲವು ದೇಗುಲಗಳಲ್ಲಿ ಓಮಿಕ್ರಾನ್‌ ಆತಂಕದ ನಡುವೆಯೇ ಜಾತ್ರೆಗಳು ನಡೆದಿದ್ದು, ನಡೆಯುತ್ತಿದ್ದು, ಕೆಲವು ದೇಗುಲಗಳು ಸರಳವಾಗಿ, ಸಾಂಕೇತಿಕವಾಗಿ ಜಾತ್ರೆ ನಡೆಸಲು ಮುಂದಾಗಿವೆ. ಕೆಲವು ದೇವಾಲಯಗಳಲ್ಲಿ ಜಾತ್ರೆಗಳನ್ನು ಮುಂದೂಡಲಾಗಿದೆ, ಇನ್ನು ಕೆಲವು ದೇಗುಲಗಳು ಈ ವರ್ಷದ ಜಾತ್ರೋತ್ಸವವನ್ನು ರದ್ದುಪಡಿಸಿವೆ.

ಬನಶಂಕರಿ ಜಾತ್ರೆ ಆರಂಭ: ಶ್ರೀ ಬನಶಂಕರಿ ಅಮ್ಮನವರ ಸಾಂಕೇತಿಕ ಜಾತ್ರಾ ಮಹೋತ್ಸವ ಬೆಂಗಳೂರಿನಲ್ಲಿ ಜ.10 ರಿಂದ ಆರಂಭಗೊಂಡಿದ್ದು, 21ರವರೆಗೆ ನಡೆಯಲಿದೆ. ಕೋವಿಡ್‌ ನಿಯಮಗಳ ಅನುಸಾರ ಸರಳ ಮತ್ತು ಸಾಂಕೇತಿಕವಾಗಿ ಜಾತ್ರೆ ನಡೆಸಲಾಗುತ್ತಿದೆ. ಪ್ರತಿದಿನ ವಿಶೇಷ ಪೂಜೆ, ಹೋಮ, ಉತ್ಸವಗಳು ಸರಳವಾಗಿ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ದನಗಳ ಜಾತ್ರೆ ರದ್ದು: ಅಯ್ಯನಗುಡಿ ಜಾತ್ರೆ ಎಂದೇ ಖ್ಯಾತವಾಗಿದ್ದ ಚನ್ನಪಟ್ಟಣದ ಕೆಂಗಲ್‌ ಆಂಜನೇಯ ಸ್ವಾಮಿ ದನಗಳ ಜಾತ್ರೆ ಕೋವಿಡ್‌ನಿಂದ ರದ್ದಾಗಿದೆ. ಇದು ರೈತರಲ್ಲಿ ಬೇಸರ ಮೂಡಿಸಿದೆ. ಜಾತ್ರೆ ಅಂಗವಾಗಿ ನಡೆಯುವ ರಥೋತ್ಸವ ಹಾಗೂ ಸಾರ್ವಜನಿಕರ ಪೂಜೆಗೆ ನಿಬಂರ್‍ಧ ಹಾಕಲಾಗಿದೆ.

ವಾರಾಂತ್ಯ ಕರ್ಫ್ಯೂ ತೆಗೆದು, ಶೇ.50ರಷ್ಟು ಅವಕಾಶ ಕೊಡಿ: ಸರ್ಕಾರಕ್ಕೆ ಉದ್ಯಮಿಗಳ ಒತ್ತಾಯ

ಗೌರಿಬಿದನೂರು ತಾಲೂಕಿನ ಅಲಕಾಪುರದ ಶ್ರೀ ಚನ್ನಸೋಮೇಶ್ವರ ದೇವಾಲಯದಲ್ಲಿ ಜ.14ರಿಂದ 27ರವರೆಗೆ ನಡೆಯಬೇಕಿದ್ದ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ.

* ಪಾವಗಡದ ಅಂತ್ಯಸುಬ್ರಹ್ಮಣ್ಯ ಸ್ವಾಮಿ ಭಾರಿ ಬ್ರಹ್ಮರಥೋತ್ಸವ ಹಾಗೂ ದನಗಳ ಜಾತ್ರೆ ರದ್ದು ಮಾಡಲಾಗಿದೆ.

* ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧ ಶ್ರೀ ಬನಶಂಕರಿದೇವಿಯ 2022ನೇ ಸಾಲಿನ ಜಾತ್ರಾ ಮಹೋತ್ಸವವನ್ನು ಜ.9ರಿಂದ 21ರವರೆಗೆ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ. ರಥೋತ್ಸವವೂ ಸರಳವಾಗಿ ನಡೆಯಲಿದ್ದು, ಭಕ್ತರಿಗೆ ಪ್ರವೇಶವಿರುವುದಿಲ್ಲ.

* ಬಾಗಲಕೋಟೆ ಜಿಲ್ಲೆಯ ಖ್ಯಾತ ಬಾದಾಮಿ ಬನಶಂಕರಿ ಜಾತ್ರೆ, ಕೂಡಲ ಸಂಗಮದ ಶರಣ ಮೇಳ ಸೇರಿದಂತೆ ನಾನಾ ಉತ್ಸವ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜ.17ರಂದು ನಡೆಯಬೇಕಿರುವ ಬನಶಂಕರಿ ಜಾತ್ರೆ, ಜ.15ರಂದು ಆಯೋಜಿಸಲಾಗುವ ಕೂಡಲಸಂಗಮದ ಶರಣ ಮೇಳಗಳನ್ನು ನಿಷೇಧಿಸಲಾಗಿದೆ. ನದಿ ಹಾಗೂ ಕಲ್ಯಾಣಿಗಳಲ್ಲಿ ಸ್ನಾನಕ್ಕೆ ಅವಕಾಶವಿಲ್ಲ.

* ಜಮಖಂಡಿಯ ಮುತ್ತೂರ ಗ್ರಾಮದ ಸುಪ್ರಸಿದ್ಧ ಮಹಾಲಕ್ಷ್ಮಿ ದೇವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

* ಜನವರಿ 12ರಿಂದ 18ರವರೆಗೆ ನಡೆಯಬೇಕಿದ್ದ ವಿಜಯಪುರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಜಾತ್ರೆ ಅಂಗವಾಗಿ ನಡೆಯಬೇಕಿದ್ದ ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರೆಯನ್ನು ಓಮಿಕ್ರಾನ್‌ ವೈರಸ್‌ ಭೀತಿ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

* ಚಿತ್ರದುರ್ಗ ಸಮೀಪದ ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಜಾತ್ರಾಮಹೋತ್ಸವ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ.

* ವಿಜಯಪುರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪ್ರಸಿದ್ಧ ಮೊರಬ ಗ್ರಾಮದ ಶ್ರೀವೀರಭದ್ರೇಶ್ವರ ರಥೋತ್ಸವನ್ನು ಕೊರೊನಾ ಮುಂಜಾಗ್ರತೆ ಕ್ರಮವಾಗಿ ರದ್ದುಪಡಿಸಲಾಗಿದೆ.

* ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹೈಯಾಳ(ಬಿ) ಗ್ರಾಮದ ಐತಿಹಾಸಿಕ ಹೈಯಾಳಲಿಂಗೇಶ್ವರ ಜಾತ್ರೆಯನ್ನು ಕೋವಿಡ್‌ 19 ಪ್ರಯುಕ್ತ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ರದ್ದುಪಡಿಸಲಾಗಿದೆ.

* ಬಯಲುಸೀಮೆಯ ವರ್ಷದ ಪ್ರಥಮ ಜಾತ್ರೆಯೆಂದೇ ಪ್ರಸಿದ್ಧವಾದ ಕಡೂರು ಹೇಮಗಿರಿ ಕ್ಷೇತ್ರದ ಶ್ರೀಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ನಡುವೆ ಶ್ರದ್ಧಾಭಕ್ತಿಗಳಿಂದ ನೆರವೇರಿತು.

* ಗದಗದ ಬಿಂಕದಕಟ್ಟಿ ಗ್ರಾಮದಲ್ಲಿ ಜ.17 ಹಾಗೂ ಜ.18ರಂದು ಬನದ ಹುಣ್ಣಿಮೆ ದಿನ ನಡೆಯುವ ಯಲ್ಲಮ್ಮದೇವಿ ಜಾತ್ರಾ ರಥೋತ್ಸವವನ್ನು ಕೋವಿಡ್‌ ಕಾರಣದಿಂದ ರದ್ದುಗೊಳಿಸಲಾಗಿದೆ.

ಕೋವಿಡ್ ಆತಂಕ: ಹಿರಿಯ ಅಧಿಕಾರಿಗಳ ಜೊತೆ ಬಸವರಾಜ ಬೊಮ್ಮಾಯಿ ವರ್ಚುವಲ್ ಸಭೆ!

*ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರೋತ್ಸವ ರದ್ದಾಗಿದೆ.

* ಕಡೂರಿನ ಮಲ್ಲೇಶ್ವರದ ಸ್ವಣಾಂರ್‍ಬ ದೇವಿ ಜಾತ್ರಾ ಮಹೋತ್ಸವವನ್ನು ಕೇವಲ ಸಾಂಪ್ರದಾಯಿಕ ಕೈಂಕರ್ಯಗಳಿಗೆ ಸೀಮಿತಗೊಳಿಸಿ ನೆರವೇರಿಸಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ.

* ಜ.18, 19ರಂದು ನಡೆಯಬೇಕಿದ್ದ ಶಿಕಾರಿಪುರದ ಶ್ರೀ ಮಾರಿಕಾಂಬ ಜಾತ್ರೆ ರದ್ದು ಗೊಳಿಸಿ, ಧಾರ್ಮಿಕ ವಿಧಿ ವಿಧಾನ ಮಾತ್ರ ಆಚರಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.



Read more

[wpas_products keywords=”deal of the day sale today offer all”]