ಹೈಲೈಟ್ಸ್:
- ಹಾಲು ತುಪ್ಪ ಕಾರ್ಯದ ವೇಳೆ 10 ವರ್ಷ ಮಗ ಪವನ್ ಅಪ್ಪನ ಕೊಲೆ ರಹಸ್ಯ ಬಿಚ್ಚಿಟ್ಟಿದ್ದ
- 11ನೇ ದಿನದ ಕಾರ್ಯಕ್ಕೂ ಮೃತನ ಪತ್ನಿ ಬರಲೇ ಇಲ್ಲ..
- ಇದರಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು
ತಂದೆಯನ್ನು ಕೊಲೆ ಮಾಡಿದ ಕೃತ್ಯವನ್ನು ಕಣ್ಣಾರೆ ಕಂಡ ಹತ್ತು ವರ್ಷದ ಮಗನ ಪವನ್ ನೀಡಿದ ಮಾಹಿತಿ ಮೇರೆಗೆ ಕೊಲೆಗೈದು ಪಕ್ಕದ ಆಂಧ್ರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆತನ ಪತ್ನಿ ಶೈಲಜಾ, ಆಕೆಯ ತಾಯಿ ಲಕ್ಷ್ಮೀದೇವಮ್ಮ, ಪ್ರಿಯಕರ ಹನುಮಂತ ಎಂಬಾತನನ್ನು ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ಗೋವಿಂದ ತಂಡ ಬಂಧಿಸಿದ್ದಾರೆ.
ಕಥೆ ಹೆಣೆದಿದ್ದ ಆರೋಪಿಗಳು: ಕಳೆದ ಡಿಸೆಂಬರ್ 27ರಂದು ಶೈಲಜಾ ಪತಿ ಸಾವಿನ ಬಗ್ಗೆ ಬಾಮೈದ ಚಂದ್ರಶೇಖರ್ಗೆ ಕರೆ ಮಾಡಿ ತಿಳಿಸಿದ್ದರು. ಮನೆಯ ಪಕ್ಕದಲ್ಲೇ ಇದ್ದ ಚಂದ್ರಶೇಖರ್ ಬಂದಾಗ, ಮೂರ್ಛೆ ರೋಗ ಬಂದು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆಂದು ತಿಳಿಸಿದ್ದರು. ಮೂರ್ಛೆ ರೋಗದ ಬಗ್ಗೆ ತಿಳಿದಿದ್ದ ಬಾಮೈದ ಕೂಡಾ ನಂಬಿ, ಅಂತಿಮ ಕಾರ್ಯ ಮುಗಿಸಿ ಸುಮ್ಮನಾಗಿದ್ದರು. ಆದರೆ ಮೂರನೇ ದಿನ ಹಾಲು ತುಪ್ಪ ಕಾರ್ಯದ ವೇಳೆ 10 ವರ್ಷ ಮಗ ಪವನ್ ಅಪ್ಪನ ಕೊಲೆ ರಹಸ್ಯವನ್ನ ತನ್ನ ಚಿಕ್ಕಪ್ಪ, ದೊಡ್ಡಪ್ಪನ ಮುಂದೆ ಬಾಯ್ಬಿಟ್ಟಿದ್ದ. ಕಾರ್ಯ ನಂತರ ಊರಿಗೆ ಹೋದ ಶೈಲಜಾ 11ನೇ ದಿನದ ಕಾರ್ಯಕ್ಕೂ ಬಂದಿರಲಿಲ್ಲ. ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅನುಮಾನಗೊಂಡ ಚಂದ್ರಶೇಖರ್, ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಕೊಲೆಗೆ ಅನೈತಿಕ ಸಂಬಂಧ ಕಾರಣ: ಶೈಲಜಾ ಜತೆ 12 ವರ್ಷಗಳ ಹಿಂದೆ ಮದುವೆಯಾಗಿದ್ದ ರಾಘವೇಂದ್ರ, ನೇಯ್ಗೆ ಕೆಲಸ ಮಾಡಿಕೊಂಡಿದ್. ಪತ್ನಿ ಗಾರ್ಮೆಂಟ್ಸ್ಗೆ ಹೋಗುತ್ತಿದ್ದರು. ಫ್ಯಾಕ್ಟರಿ ನೌಕರ ಹನುಮಂತು ಜೊತೆ ಇದ್ದ ಸಲುಗೆ, ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು. ಈ ವಿಚಾರ ಪತಿಗೆ ಗೊತ್ತಾಗಿ ದಂಪತಿ ನಡುವೆ ಜಗಳ ನಡೆದಿತ್ತು. ಇದು ಕೊಲೆವರೆಗೆ ತಂದು ನಿಲ್ಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]