Karnataka news paper

ರಸ್ತೆಯಲ್ಲಿ ರಾತ್ರೋ ರಾತ್ರಿ ಅನಧಿಕೃತ ಶೆಡ್ ನಿರ್ಮಾಣ; ಜೆಪಿ ನಗರದ ರಾಯಲ್ ಕೌಂಟಿ ಲೇಔಟ್ ನಿವಾಸಿಗಳಿಗೆ ಸಂಕಷ್ಟ!


ಹೈಲೈಟ್ಸ್‌:

  • ರಸ್ತೆಯಲ್ಲಿ ರಾತ್ರೋ ರಾತ್ರಿ ಅನಧಿಕೃತ ಶೆಡ್ ನಿರ್ಮಾಣ
  • ಜೆಪಿ ನಗರದ ರಾಯಲ್ ಕೌಂಟಿ ಲೇಔಟ್ ನಿವಾಸಿಗಳಿಗೆ ಸಂಕಷ್ಟ
  • ದೂರು ನೀಡಿದರೂ ಈವರೆಗೆ ಆಗಿಲ್ಲ ಗುತ್ತಿಗೆದಾರನ ವಿರುದ್ಧ ಕ್ರಮ

ಬೆಂಗಳೂರು: ಲೇಔಟ್‌ ಮುಂಭಾಗದ ರಸ್ತೆಯಲ್ಲಿ ಗುತ್ತಿಗೆದಾರರೊಬ್ಬರು ರಾತ್ರೋ ರಾತ್ರಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ ಪರಿಣಾಮ ಬೆಂಗಳೂರಿನ ಜೆಪಿ ನಗರ 8 ನೇ ಹಂತದ ರಾಯಲ್ ಕೌಂಟಿ ಲೇಔಟ್ ನಿವಾಸಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಜೆಪಿ ನಗರದ ಜಂಬೂ ಸಾವರಿ ದಿನ್ನೆ ಗೊಟ್ಟಿಗೆರೆ ವಾರ್ಡ್ ನಂಬರ್ 194 ನಲ್ಲಿರುವ ರಾಯಲ್ ಕೌಂಟಿ ಲೇಔಟ್ ಮುಂದಿರುವ ಸರ್ವಿಸ್ ರಸ್ತೆಯಲ್ಲಿ ಪುಟ್ಟರಾಜು ಎಂಬುವವರು ಅನಧಿಕೃತವಾಗಿ ಮಂಗಳವಾರ ರಾತ್ರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂಬುವುದು ಲೇಔಟ್ ನಿವಾಸಿಗಳ ಆರೋಪವಾಗಿದೆ. ಈ ನಿಟ್ಟಿನಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

ಗೊಟ್ಟಿಗೆರೆಯ ರಾಯಲ್ ಕೌಂಟಿ ಲೇಔಟ್‌ ನಲ್ಲಿ ಲತಾ ಕಾಮತ್ ಎಂಬುವವರಿಗೆ ಸೇರಿದ ಜಮೀನಿದೆ. ಜಮೀನಿನ ಮುಂಭಾಗದಲ್ಲಿ ಲೇಔಟ್‌ ನಿವಾಸಿಗಳಿಗೆ ಬಳಸಲು ಸರ್ವಿಸ್ ರಸ್ತೆಯೊಂದಿದೆ. ಆದರೆ ರಸ್ತೆಯಲ್ಲೇ ಪುಟ್ಟರಾಜು ಎಂಬ ಸ್ಥಳೀಯ ಗುತ್ತಿಗೆದಾರರೊಬ್ಬರು ಏಕಾಏಕಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಲೇಔಟ್ ನಿವಾಸಿಗಳು ಪ್ರಶ್ನಿಸಿ ತಗಾದೆ ತೆಗೆದರೂ ನನ್ನಲ್ಲಿ ದಾಖಲೆಗಳು ಇವೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುವುದು ನಿವಾಸಿಗಳ ಆರೋಪವಾಗಿದೆ.

ಬಿಬಿಎಂಪಿ ತೆಕ್ಕೆಗೆ ಸೇರುವ ಹಳ್ಳಿಗಳ ಅಭಿವೃದ್ಧಿಯ ದೆಸೆ ಬದಲಾಗಲಿದೆಯೇ..?

ಈ ಕುರಿತಾಗಿ ಮಾತನಾಡಿದ ಲೇಔಟ್ ನಿವಾಸಿ ಲತಾ ಕಾಮತ್, “ರಸ್ತೆಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಲೇಔಟ್ ನಿವಾಸಿಗಳಿಗೆ ಅನ್ಯಾಯವಾಗಿದೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಹಾಗೂ ಟಾಸ್ಕ್ ಫೋರ್ಸ್ ಅಧಿಕಾರಿಗಳಿಗೂ ದೂರು ಕೊಟ್ಟಿದ್ದೇವೆ” ಎಂದರು.

ರಾಯಲ್ ಕೌಂಟಿ ಲೇಔಟ್ ಅಸೋಸಿಯೇಷನ್ ಅಧ್ಯಕ್ಷ ರಾಮಕೃಷ್ಣ ಎಂಬುವವರು ಮಾತನಾಡಿ, “ಈ ರಸ್ತೆ ಲೇಔಟ್ ಸಂಬಂಧಿಸಿದ್ದು, ಸರ್ವಿಸ್ ರೋಡ್ ನಲ್ಲಿ ಅನಧಿಕೃತವಾಗಿ ಪುಟ್ಟರಾಜು ಎಂಬುವವರು ಶೆಡ್ ನಿರ್ಮಾಣ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ನನ್ನಲ್ಲಿ ದಾಖಲೆ ಇದೆ ಎಂದು ಹೇಳುತ್ತಾರೆ. ಶೆಡ್ ನಿರ್ಮಾಣ ಮಾಡಿದ ಜಾಗದಲ್ಲಿ ಒಳಚರಂಡಿ ಇದ್ದು, ಈ ಅನಧಿಕೃತ ಕಟ್ಟಡವನ್ನು ಕೂಡಲೇ ತೆರವು ಮಾಡಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ” ಎಂದರು.

ಲೇಔಟ್ ನಿವಾಸಿಗಳಿಂದ ದೂರು

notice

ಲೇಔಟ್ ಸೇರಿದ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ನಿವಾಸಿಗಳು ಬಿಬಿಎಂಪಿಗೆ ದೂರು ನೀಡಿದ್ದಾರೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೆ ಲಿಖಿತ ರೂಪದಲ್ಲಿ ದೂರನ್ನು ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಲೇಔಟ್ ನಿವಾಸಿಗಳ ನಿವಾಸಿ ಕಲ್ಯಾಣ ಸಂಘದಿಂದ ಮನವಿ ಮಾಡಲಾಗಿದೆ. ಇನ್ನು ನಕ್ಷೆಯಲ್ಲೂ ರಸ್ತೆ ಲೇಔಟ್‌ ಗೆ ಸೇರಿದ್ದು ಎಂದು ಉಲ್ಲೇಖಿತವಾಗಿದ್ದು ಈ ನಿಟ್ಟಿನಲ್ಲಿ ಕ್ರಮ ಅಕ್ರಮ ಕಟ್ಟಡ ತೆರವುಗೊಳಿಸಬೇಕು ಎಂಬುವುದು ನಿವಾಸಿಗಳ ಬೇಡಿಕೆಯಾಗಿದೆ.

ಲೇಔಟ್ ನಿವಾಸಿಗಳ ಆರೋಪದ ಕುರಿತಾಗಿ ಗೊಟ್ಟಿಗೆರೆ ವಾರ್ಡ್ ಇಂಜಿನಿಯರ್ ಮಾರುತಿ ಪ್ರತಿಕ್ರಿಯೆ ನೀಡಿ, ರಸ್ತೆಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಲೇಔಟ್ ನಿವಾಸಿಗಳು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಮಾಡಿದ ವ್ಯಕ್ತಿಗೆ ದಾಖಲೆ ನೀಡುವಂತೆ ಸೂಚಿಸಿದ್ದೇನೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.



Read more

[wpas_products keywords=”deal of the day sale today offer all”]