Karnataka news paper

ಕೇಜ್ರಿವಾಲ್‌ ಸುಳ್ಳುಗಳ ಸರದಾರ; ಅಮರೀಂದರ್‌ ನಾಚಿಕೆ ಇಲ್ಲದ ಮನುಷ್ಯ: ನವಜೋತ್‌ ಸಿಧು ಟೀಕಾ ಪ್ರಹಾರ


ಹೈಲೈಟ್ಸ್‌:

  • ಅರವಿಂದ ಕೇಜ್ರಿವಾಲ್‌ ಪಂಜಾಬ್‌ನಲ್ಲಿ ಸುಳ್ಳನ್ನು ಮಾರಾಟ ಮಾಡುತ್ತಿದ್ದಾರೆ.
  • ಅಮರೀಂದರ್ ಸಿಂಗ್‌ ಅವರಂಥ ನಾಚಿಕೆ ಇಲ್ಲದ ವ್ಯಕ್ತಿಯನ್ನು ನಾನು ಕಂಡಿಲ್ಲ
  • ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಟೀಕಾ ಪ್ರಹಾರ

ಚಂಡಿಗಢ: ಚುನಾವಣೆ ಘೋಷಣೆಯಾಗಿರುವ ಪಂಜಾಬ್‌ನ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮತ್ತೆ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಮಾಜಿ ಸಿಎಂ ಕ್ಯಾಪ್ಟನ್‌ ಅಮರೀಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಅರವಿಂದ ಕೇಜ್ರಿವಾಲ್‌ ಸುಳ್ಳುಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಮರೀಂದರ್‌ ಸಿಂಗ್‌ ನಾಚಿಕೆ ಇಲ್ಲದ ವ್ಯಕ್ತಿ ಎಂದು ಟೀಕೆ ಮಾಡಿದ್ದಾರೆ.

‘ಪಂಜಾಬ್‌ಗೆ ಬಂದು ಅರವಿಂದ ಕೇಜ್ರಿವಾಲ್ ಸುಳ್ಳುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಮ್ ಆದ್ಮೀ ಪಕ್ಷದ ಸುಳ್ಳುಗಳು ಬಯಲಾಗುತ್ತಿದೆ. ಆಮ್‌ ಆದ್ಮೀ ಪಕ್ಷದ ಹಾಗೆ ಕಾಂಗ್ರೆಸ್‌ ನಿರಂಕುಶ ಪಕ್ಷ ಅಲ್ಲ’ ಎಂದು ಹೇಳಿದ್ದಾರೆ.

ಅಮರೀಂದರ್‌ ಸಿಂಗ್‌ ದ್ರೋಹಿ.. ಅವರನ್ನು ಪಕ್ಷದಿಂದ ಬಿಸಾಕಿದೆವು: ನವಜೋತ್‌ ಸಿಂಗ್ ಸಿಧು ವಾಗ್ಬಾಣ
ಅಷ್ಟಕ್ಕೆ ಕೇಜ್ರಿವಾಲ್‌ ವಿರುದ್ಧ ಸಮಾಧಾನಗೊಳ್ಳದ ಸಿಧು, ‘ಕೇಜ್ರಿವಾಲ್‌ ಅವರು ಡ್ರಗ್‌ ಮಾಫಿಯಾದ ಬಗ್ಗೆ ಮಾತನಾಡುತ್ತಿಲ್ಲ. ಖುದ್ದು ಅವರೇ ಡ್ರಗ್‌ ಮಾಫಿಯಾದ ಮುಂದೆ ಮಂಡಿಯೂರಿದ್ದಾರೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಪಂಜಾಬ್‌ ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ವಿರುದ್ಧವೂ ಗುಡುಗಿದ ಅವರು, ‘ಕ್ಯಾಪ್ಟನ್‌ಗೆ ಕಾಂಗ್ರೆಸ್‌ ಬೇಕಾಗಿಲ್ಲ. ಅವರಷ್ಟು ನಾಚಿಕೆ ಇಲ್ಲದ ಬೇರೋಬ್ಬ ನಾಯಕನನ್ನು ನಾನು ನೋಡಿಯೋ ಇಲ್ಲ. ಈ ಹಿಂದೆ ಅವರು ಪಕ್ಷ ಕಟ್ಟಿದಾಗ 800 ಮತಗಳು ಕೂಡ ಸಿಕ್ಕಿರಲಿಲ್ಲ’ ಎಂದು ಎಂದಿನಂತೆ ತಮ್ಮ ಶೈಲಿಯಲ್ಲಿ ಟೀಕೆಗಳ ಮಳೆಗೈದರು.

ಅಲ್ಲದೇ, ಕ್ಯಾಪ್ಟನ್‌ ಒತ್ತಡದಲ್ಲೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಜಾರಿ ನಿರ್ದೇಶನಾಲಯದ ತಾಳಕ್ಕೆ ತಕ್ಕಂತೆ ಕುಣಿದರು ಎಂದು ಟೀಕೆ ಮಾಡಿದರು.

ಇದೇ ವೇಳೆ ಪಂಜಾಬ್‌ನಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಈ ವಿಷಯದಲ್ಲಿ ಸುಳ್ಳು ಹರಡಿತು ಎಂದು ಆರೋಪಿಸಿದರು. ಪ್ರಧಾನಿ ಮೋದಿ ಅವರು ಭಾಗವಹಿಸಬೇಕಾಗಿದ್ದ ಸಮಾವೇಶದಲ್ಲಿ ಜನರೇ ಬಂದಿರಲಿಲ್ಲ. ಹೀಗಾಗಿ ಪ್ರಧಾನ ಮಂತ್ರಿಯವರ ಭದ್ರತೆಯಲ್ಲಿ ಲೋಪ ಆಗಿದೆ ಎಂದು ಬಿಜೆಪಿಯವರು ಪುಕಾರು ಹಬ್ಬಿಸಿದರು ಎಂದು ಸಿಧು ಹೇಳಿದರು.

ಪ್ರಧಾನಿಗೆ ತೊಂದರೆ ಆಗಿದ್ದು 15 ನಿಮಿಷ ಮಾತ್ರ, ಆದರೆ ರೈತರು ಅನುಭವಿಸಿದ್ದು ಒಂದು ವರ್ಷ: ಸಿಧು ಟೀಕೆ
ಸಿಎಂ ಯಾರಾಗಬೇಕು ಎಂದು ಪಂಜಾಬ್‌ನ ಜನ ತೀರ್ಮಾನ ಮಾಡುತ್ತಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆಗೆ ದಿನಗಣನೆ ಇರುವಾಗಲೇ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು ಕಾಂಗ್ರೆಸ್ ಹೈ ಕಮಾಂಡ್‌ಗೆ ಮತ್ತೊಂದು ಸಂದೇಶ ರವಾನೆ ಮಾಡಿದ್ದಾರೆ.

ಪಂಜಾಬ್‌ನ ಮುಖ್ಯಮಂತ್ರಿ ಯಾರಾಗಬೇಕು ಎಂದು ತೀರ್ಮಾನ ಮಾಡುವುದು, ಪಂಜಾಬ್‌ನ ಜನರೇ ಹೊರೆತು, ಹೈ ಕಮಾಂಡ್‌ ಅಲ್ಲ ಎಂದು ಹೇಳುವ ಮೂಲಕ ಮತ್ತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಿದ್ದು ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ.

ಈ ಹಿಂದೆ ಕೂಡ ಸಿಧು ಹಲವು ಬಾರಿ, ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗ ಅಸಮಾಧನ ವ್ಯಕ್ತ ಪಡಿಸಿದ್ದರು. ಇದೀಗ ಸಿಎಂ ಆಯ್ಕೆ ನಿಮ್ಮ ಕೈಯಲ್ಲಿ ಇಲ್ಲ ಎಂದು ಹೈ ಕಮಾಂಡ್‌ಗೆ ಪರೋಕ್ಷವಾಗಿ ಹೇಳಿದ್ದಾರೆ.

ಪಂಜಾಬ್‌ ಸಿಎಂ ಯಾರು ಎಂದು ನಿರ್ಧರಿಸಲು ಅವರ್ಯಾರು?: ಕಾಂಗ್ರೆಸ್ ಹೈ ಕಮಾಂಡ್‌ಗೆ ಸಿಧು ಪರೋಕ್ಷ ಎಚ್ಚರಿಕೆ
ಮಂಗಳವಾರ ಮಾಧ್ಯಮಗೋಷ್ಠಿಯೊಂದರಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಂಜಾಬ್‌ನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಪಂಜಾಬ್‌ನ ಜನ ತೀರ್ಮಾನಿಸುತ್ತಾರೆಯೇ ಹೊರೆತು ಹೈ ಕಮಾಂಡ್‌ ಅಲ್ಲ ಎಂದು ಹೇಳಿದ್ದಾರೆ.

‘ತಲೆಯಲ್ಲಿ ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ. ಪಂಜಾಬ್‌ನ ಜನರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಹೈ ಕಮಾಂಡ್‌ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಎಂದು ನಿಮಗೆ ಹೇಳಿದವರು ಯಾರು? ತಮ್ಮ ಶಾಸಕ ಯಾರಾಗಬೇಕು ಎಂದು ಆಯ್ಕೆ ಮಾಡುವ ಜನರೇ ಅವರ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುನ್ನೂ ಆಯ್ಕೆ ಮಾಡುತ್ತಾರೆ’ ಎಂದು ಸಿಧು ಹೇಳಿದ್ದರು.



Read more

[wpas_products keywords=”deal of the day sale today offer all”]