Karnataka news paper

ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಶೀಟರ್ ನರಸಿಂಹನ ಕಾಲಿಗೆ ಗುಂಡು ಹಾರಿಸಿ ಬಂಧನ..!


ಹೈಲೈಟ್ಸ್‌:

  • ನರಸಿಂಗ್‌ ಅಲಿಯಾಸ್‌ ನರಸಿಂಹ ರೆಡ್ಡಿ (32) ಬಂಧಿತ ರೌಡಿ
  • ಈತನ ವಿರುದ್ಧ ನಾನಾ ಪೊಲೀಸ್‌ ಠಾಣೆಗಳಲ್ಲಿ 36 ಪ್ರಕರಣಗಳು ದಾಖಲಾಗಿವೆ
  • ಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ

ಬೆಂಗಳೂರು: ಕೊಲೆ, ಕೊಲೆ ಯತ್ನ, ದರೋಡೆ, ಪ್ರಾಣ ಬೆದರಿಕೆ ಸೇರಿದಂತೆ ನಾನಾ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿ ಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನರಸಿಂಗ್‌ ಅಲಿಯಾಸ್‌ ನರಸಿಂಹ ರೆಡ್ಡಿ (32) ಬಂಧಿತ. ಈತನ ವಿರುದ್ಧ ನಾನಾ ಪೊಲೀಸ್‌ ಠಾಣೆಗಳಲ್ಲಿ 36 ಪ್ರಕರಣಗಳು ದಾಖಲಾಗಿವೆ. ಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿದೆ.

ಈತನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಪೊಲೀಸ್‌ ಕಾನ್ಸ್‌ಟೆಬಲ್‌ ಮೋಹನ್‌ ಎಂಬುವರ ಕೈಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಯ ಪೂರ್ವಜರು ಹೊಸಕೆರೆ ಹಳ್ಳಿ ಸುತ್ತಮುತ್ತ ಜಮೀನುಗಳನ್ನು ಮಾರಾಟ ಮಾಡಿದ್ದಾರೆ. ಈ ವಿಚಾರ ತಿಳಿದುಕೊಂಡ ಆರೋಪಿ ನಿರ್ದಿಷ್ಟ ಸ್ಥಳಕ್ಕೆ ಹೋಗಿ, ಈ ಜಾಗ ತಮ್ಮ ಪೂರ್ವಜರದ್ದು, ತನಗೆ ಸೇರಬೇಕು ಎಂದು ಬೆದರಿಕೆ ಹಾಕುತ್ತಿದ್ದ. ಖರೀದಿ ಪತ್ರಗಳನ್ನು ತೋರಿಸಿದರೂ, ಹಣ ಕೊಟ್ಟು ಇತ್ಯರ್ಥಪಡಿಸಿಕೊಳ್ಳುವಂತೆ ಪ್ರಾಣ ಬೆದರಿಕೆ ಹಾಕುತ್ತಿದ್ದ.

ಅರಸೀಕೆರೆಯಲ್ಲಿ ರೌಡಿ ಶೀಟರ್ ಹತ್ಯೆ: ಇಬ್ಬರು ಆರೋಪಿಗಳ ಬಂಧನ
2017ರಲ್ಲಿ ವಾಣಿಜ್ಯ ಕಟ್ಟಡವೊಂದರ ಮಾಲೀಕರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮೂರು ತಿಂಗಳ ಹಿಂದೆ ನಾರಾಯಣ ಭಟ್‌ ಎಂಬುವರ ಬೈಕ್‌, ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ನಂತರ ಆಗ್ನೇಯ ವಿಭಾಗದಲ್ಲಿ ಮನೆ ಕಳವು, ದರೋಡೆ, ಸುಲಿಗೆ ಮಾಡಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಈತನ ಪತ್ತೆಗಾಗಿ ಗಿರಿ ನಗರ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸುನಿಲ್‌ ಕಂಠಿ, ಪ್ರವೀಣ, ರಘು ನಾಯ್ಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಒಂದು ವಾರದಿಂದ ಆರೋಪಿಯ ಚಲನ ವಲನಗಳ ಮೇಲೆ ನಿಗಾ ವಹಿಸಿತ್ತು.

ಬೆಂಗಳೂರು: ಸಾಲ ಕೊಡಿಸುವುದಾಗಿ 1.80 ಕೋಟಿ ರೂ. ವಂಚಿಸಿದ್ದ ನಾಲ್ವರ ಬಂಧನ
ಆರೋಪಿಯ ಕಾಲಿಗೆ ಗುಂಡೇಟು: ಆರೋಪಿಯು ಮಂಗಳವಾರ ಮುಂಜಾನೆ 5.45ರ ಸುಮಾರಿಗೆ ಹೊಸಕೆರೆ ಹಳ್ಳಿ ಕೋಡಿಯಲ್ಲಿರುವ ಮನೆಗೆ ಹೋಗುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಕೂಡಲೇ ಪಿಎಸ್‌ಐ ಸುನಿಲ್‌ ಕಂಠಿ ಮತ್ತು ಇಬ್ಬರು ಇತರೆ ಪಿಎಸ್‌ಐಗಳು ಹಾಗೂ ಕಾನ್ಸ್‌ಟೆಬಲ್‌ ಮೋಹನ್‌ ಜತೆ ಸ್ಥಳಕ್ಕೆ ಹೋಗಿದ್ದಾರೆ.

ಆಗ ಪೊಲೀಸರನ್ನು ಕಂಡ ಆರೋಪಿ, ಕಾನ್ಸ್‌ಟೆಬಲ್‌ ಮೋಹನ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಅವರ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಕೂಡಲೇ ಮೂವರು ಪಿಎಸ್‌ಐಗಳು ಸುತ್ತುವರಿದರೂ ಆರೋಪಿ ಮತ್ತೆ ಹಲ್ಲೆಗೆ ಮುಂದಾಗಿದ್ದು, ಆಗ ಪಿಎಸ್‌ಐ ಸುನಿಲ್‌ ಕಂಠಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಮತ್ತೊಮ್ಮೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಫೈನಾನ್ಶಿಯರ್‌ ಕೊಲೆಗೈದು ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್‌ ಕಾಲಿಗೆ ಗುಂಡೇಟು..!



Read more

[wpas_products keywords=”deal of the day sale today offer all”]