Karnataka news paper

ಸೌದಿ ಅರೇಬಿಯಾ – ಭಾರತೀಯ ಕಂಪನಿಗಳ ನಡುವೆ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆ..!


ಲೇಖಕರು: ಗಿರೀಶ್ ಲಿಂಗಣ್ಣ, ವ್ಯವಸ್ಥಾಪಕ ನಿರ್ದೇಶಕರು, ಎ. ಡಿ. ಡಿ. ಇಂಜಿನಿಯರಿಂಗ್ ಇಂಡಿಯಾ (ಇಂಡೋ – ಜರ್ಮನ್ ಸಂಸ್ಥೆ)

ರಕ್ಷಣೆ ಮತ್ತು ಅಂತರಿಕ್ಷ ಯಾನ ತಂತ್ರಜ್ಞಾನಗಳ ಪ್ರಚಾರದ ಮೂಲಕ ಭಾರತ ಮತ್ತು ಸೌದಿ ಅರೇಬಿಯಾವನ್ನು ಹತ್ತಿರ ತರಲು ಸೌದಿ ಅರೇಬಿಯಾದ ಪವರ್ ಫಾರ್ ಡಿಫೆನ್ಸ್ ಟೆಕ್ನಾಲಜೀಸ್ ಕಂಪನಿ (ಪಿಡಿಟಿಸಿ) ಸಂಸ್ಥೆಯು ಭಾರತದ ನವರತ್ನ ಡಿಫೆನ್ಸ್ ಪಿಎಸ್‌ಯು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ರಕ್ಷಣೆ, ಅಂತರಿಕ್ಷ ಯಾನ ಮತ್ತು ಭದ್ರತಾ ವಲಯದಲ್ಲಿ ಅತ್ಯಾಧುನಿಕ ಸ್ವಾಯತ್ತ ತಾಂತ್ರಿಕ ಪರಿಹಾರಗಳ ಪ್ರಚಾರ, ವರ್ಗಾವಣೆ ಮತ್ತು ನಿಯೋಜನೆಯ ಮೂಲಕ ಸೌದಿ ಮತ್ತು ಭಾರತದ ನಡುವೆ ಆಳವಾದ ಮತ್ತು ಉತ್ತಮವಾದ ವ್ಯಾಪಾರ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಳೆಸುವ ದೃಷ್ಟಿಯೊಂದಿಗೆ ಶೇಖ್ ಮೊಹಮ್ಮದ್ ಮುಸ್ತಫಾ-ಝೈನಿ ಅಲ್-ಶೈಬಿ ಅವರು ಪಿಡಿಟಿಸಿಯನ್ನು ಸ್ಥಾಪಿಸಿದರು.

ಒಪ್ಪಂದವು ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಸಾಮೂಹಿಕವಾಗಿ ತರುತ್ತದೆ. ‘ಸೌದಿ ಅರೇಬಿಯಾ ಮತ್ತು ಭಾರತ ತಮ್ಮ ಪ್ರದೇಶಗಳಲ್ಲಿ ವೃದ್ಧಿಸುತ್ತಿರುವ ಶಕ್ತಿಗಳಾಗಿದ್ದು, ಪ್ರಮುಖ ಪಾತ್ರ ವಹಿಸುತ್ತಿವೆ ಮತ್ತು ಈ ಪ್ರದೇಶಗಳು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಪರಿಹರಿಸುವಲ್ಲಿ ಸಹಜವಾಗಿಯೇ ತೊಡಗಿಸಿಕೊಳ್ಳುತ್ತಿವೆ’ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಅಂತಾರಾಷ್ಟ್ರೀಯ ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ಅನಿಲ್ ಪಂತ್ ಹೇಳಿದರು.

ಕೇವಲ ರಕ್ಷಣಾ ಆಮದುದಾರನಲ್ಲ!: ರಕ್ಷಣಾ ರಫ್ತಿನಲ್ಲಿ ಬೆರಗು ಮೂಡಿಸುವ ಸಾಧನೆ ಮಾಡುತ್ತಿದೆ ಭಾರತ
‘ರಕ್ಷಣಾ ಪಡೆಗಳಿಗೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ವ್ಯವಸ್ಥೆಗಳ ಪ್ರಮುಖ ತಯಾರಕರಾಗಿ ನಾವು ಕಿಂಗ್ಡಮ್ ಆಫ್ ಸೌದಿ ಅರೇಬಿಯಾ ಮತ್ತು ಭಾರತದ ನಡುವೆ ಭವಿಷ್ಯದಲ್ಲಿ ಇಂತಹ ಅನೇಕ ತಾಂತ್ರಿಕ ಪಾಲುದಾರಿಕೆಗಳನ್ನು ನಿರೀಕ್ಷಿಸುತ್ತೇವೆ. ಸಮುದ್ರ ತೀರದ ರಾಡಾರ್ ವ್ಯವಸ್ಥೆ, ಬೆದರಿಕೆ ಪತ್ತೆಗೆ ನೆರವಾಗುವ ರಾಡಾರ್ ಸಹಿತವಾದ ಸುಧಾರಿತ ವ್ಯವಸ್ಥೆಗಳು, ಡ್ರೋನ್ ರಕ್ಷಣೆಯ ವ್ಯವಸ್ಥೆ ಮುಂತಾದವುಗಳಲ್ಲಿ ತಂತ್ರಜ್ಞಾನ ಉತ್ಪನ್ನಗಳನ್ನು ಬಿಇಎಲ್ ಒದಗಿಸುತ್ತದೆ. ಈ ಒಪ್ಪಂದವು ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಭದ್ರಪಡಿಸುತ್ತದೆ ಮತ್ತು ಈ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಏರಿಸುತ್ತದೆ’

ಕೆಸಿಎಫ್ ಸೌದಿ ಸಮಿತಿಯಿಂದ ಮಂಗಳೂರಿನಲ್ಲಿ Confab-21 ಕಾರ್ಯಕ್ರಮ
ಸಂಶೋಧನೆ, ಅಭಿವೃದ್ಧಿ ಮತ್ತು ತಂತ್ರಜ್ಞಾನ ವಿನಿಮಯ ಕ್ಷೇತ್ರದಲ್ಲಿ ಭಾರತ – ಸೌದಿ ಅರೇಬಿಯಾ ನಡುವೆ ಬೆಳೆಯುತ್ತಿರುವ ಸಹಕಾರದಲ್ಲಿ ಈ ಒಪ್ಪಂದವು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ‘ನಾವು ಕೆಎಸ್‌ಎಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉತ್ಸುಕರಾಗಿದ್ದೇವೆ’ ಎಂದು ವಿದೇಶ ವ್ಯವಹಾರಗಳ ತಜ್ಞ ಮತ್ತು ಪಿಡಿಟಿಸಿ (ಕಿಂಗ್ಡಮ್ ಆಫ್ ಸೌದಿ ಅರೇಬಿಯಾ) ಕಾರ್ಯತಂತ್ರದ ಸಲಹೆಗಾರ ಗೋಪಿ ಕೃಷ್ಣಾ ರೆಡ್ಡಿ ಹೇಳಿದರು.

ಸೌದಿ ಅರೇಬಿಯಾದಲ್ಲಿ ಕನ್ನಡದ ಕಂಪನ್ನು ಪಸರಿಸಿದ ‘ಕರುನಾಡ ಸಂಭ್ರಮ’



Read more

[wpas_products keywords=”deal of the day sale today offer all”]