Karnataka news paper

ಮೇಕೆದಾಟು ಪಾದಯಾತ್ರೆ ನಡೆಸುತ್ತಿರೋ ನಮ್ಮ ಮೇಲೆ ಕೇಸ್ ಹಾಕಿರೋದು ಯಾವ ನ್ಯಾಯ? ಮಾಜಿ ಸಿಎಂ ಸಿದ್ದು ಪ್ರಶ್ನೆ


ಹೈಲೈಟ್ಸ್‌:

  • ಮೇಕೆದಾಟು ಯೋಜನೆ ವಿಚಾರ 1968ರಿಂದ ನಡೆಯುತ್ತಲೇ ಇದೆ
  • ಈ ಯೋಜನೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌ ಪಕ್ಷ
  • ಯೋಜನೆಯ ಡಿಪಿಆರ್‌ ತಯಾರು ಮಾಡಿದ್ದು ನಾವೇ ಎಂದಸಿದ್ದರಾಮಯ್ಯ

ಕನಕಪುರ (ರಾಮನಗರ): ಮೇಕೆದಾಟು ಯೋಜನೆ ವಿಚಾರ 1968ರಿಂದ ನಡೆಯುತ್ತಲೇ ಇದ್ದು, ಇದನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌. ಪಾಲಿ ನಾರಿಮನ್‌ ಜತೆ ಮಾತನಾಡಿ ಚಾಲನೆ ನೀಡಿದ್ದು, ಡಿಪಿಆರ್‌ ತಯಾರು ಮಾಡಿದ್ದು ನಾವೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕನಕಪುರ ನಗರದ ಮುನ್ಸಿಪಲ್‌ ಶಾಲೆ ರಸ್ತೆಯ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಕಾರದ ವಿರುದ್ಧ ಹರಿಹಾಯ್ದು, ನಮ್ಮ ಮೇಲೆ ಕೇಸ್‌ ಹಾಕಿರುವುದು ಯಾವ ನ್ಯಾಯ. ಇನ್ನಷ್ಟು ಜನರ ಮೇಲೆ ಪ್ರಕರಣ ದಾಖಲಿಸಿದರೆ ನಿಮ್ಮಷ್ಟು ಮೂರ್ಖರು ಇಲ್ಲ. ಯಾವುದೇ ಕೇಸ್‌ಗೆ ಹೆದರಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

ಮಿಸ್ಟರ್‌ ಕಾರಜೋಳ್‌, ನಾವು ಏನೂ ಮಾಡಲಿಲ್ಲ, ತಡ ಮಾಡಿದ್ದೇವೆ ಎಂದು ಸುಳ್ಳು ದಾಖಲೆ ತೋರಿಸುತ್ತಿರುವ ನೀವು ಎರಡೂವರೆ ವರ್ಷ ಏನು ಮಾಡಿದ್ದೀರಿ? ಹಿಂದೆ ನೀವೇ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೀರಿ ಮಿಸ್ಟರ್‌ ಕಾರಜೋಳ? ನಿಮಗೆ ರಾಜ್ಯದ ಜನ 25 ಸಂಸದರನ್ನು ಕೊಟ್ಟರಲ್ಲ, ಅವರ ಬಗ್ಗೆ ಕಾಳಜಿ ಇದೆಯಾ? ನಿಮಗೆ ಪ್ರಾಮಾಣಿಕತೆ ಇದೆಯಾ? ಬೆಂಗಳೂರು ಜನರಿಗೆ ಕುಡಿಯುವ ನೀರು ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸುಮಾರು 2.5 ಕೋಟಿ ಜನರಿಗೆ ಈ ಯೋಜನೆ ಅನುಕೂಲವಾಗಲಿದೆ. ಕಾವೇರಿ ಕೊಳ್ಳದ ಜಲಾಶಯಗಳಾದ ಕಬಿನಿ, ಹೇಮಾವತಿ, ಕೆಆರ್‌ಎಸ್‌ನ ಒತ್ತಡ ಕಡಿಮೆ ಮಾಡಲು ತಮಿಳುನಾಡಿಗೆ ಸಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ನೀರು ಕೊಡಲು, ವಿದ್ಯುತ್‌ ಉತ್ಪಾದನೆ ಮಾಡಲು ಎರಡೂ ರಾಜ್ಯಗಳಿಗೆ ಅನುಕೂಲ ಮಾಡಲು ಜಾರಿಗೆ ತನ್ನಿರಿ ಎಂದರು.

ಮೇಕೆದಾಟು ಪಾದಯಾತ್ರೆ: ಜ್ವರದ ಕಾರಣದಿಂದ ಬೆಂಗಳೂರಿಗೆ ಸಿದ್ದರಾಮಯ್ಯ ವಾಪಸ್‌!
ತಮಿಳುನಾಡಿನ ಬಿಜೆಪಿ ಪಕ್ಷ ಬಲಪಡಿಸಿಕೊಳ್ಳಲು, ತಮಿಳುನಾಡಿನ ಅಧ್ಯಕ್ಷ ಅಣ್ಣಾಮಲೈ ಧರಣಿ ಮಾಡಿದಾಗ ಸಿ. ಟಿ. ರವಿ ಹೇಳಿಕೆ ನೋಡಿ, ಯಾರ ಪರವಾಗಿ ನೀವು ನಿಂತಿದ್ದು, ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದೀರಿ. ರಾಜ್ಯದ ಜನರಿಗೆ ಅನ್ಯಾಯವಾಗಲು ಬಿಡಲ್ಲ, ನಿಮ್ಮ ಷಡ್ಯಂತರವನ್ನು ಬಯಲು ಮಾಡಲಿದ್ದೇವೆ. ಎರಡೂವರೆ ವರ್ಷ ಕಾದು ಈ ಯಾತ್ರೆ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಜಲ ಸಂಪನ್ಮೂಲ ಮಂತ್ರಿಗಳಾದ ಗೋವಿಂದ ಕಾರಜೋಳ, ರಾಜ್ಯದ ಜನತೆಯ ದಿಕ್ಕು ಬದಲಿಸಲು ದಿನಕ್ಕೊಂದು ಹೇಳಿಕೆ ನೀಡಿದರೆ ನಾವು ನಿಲ್ಲಿಸುವುದಿಲ್ಲ. ಹಾಗೆ ನೋಡಿದರೆ ಬಿಜೆಪಿಯವರು ಜಾಸ್ತಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಮೇಕೆದಾಟು ಯಾತ್ರೆಯಲ್ಲ, ಬರೀ ಮೈಲೇಜ್ ಯಾತ್ರೆ: ಅಶ್ವತ್ಥನಾರಾಯಣ ಲೇವಡಿ
ಬಿಜೆಪಿ ಲಾಕ್‌ಡೌನ್‌ ವಿಚಾರ: ಸರಕಾರ ಲಾಕ್‌ಡೌನ್‌ ಅಸ್ತ್ರ ಪ್ರಯೋಗ ಮಾಡದರೆ ಅದು ಬಿಜೆಪಿಯಿಂದ ಲಾಕ್‌ಡೌನ್‌ ಆಗಲಿದೆ. ಅದಕ್ಕೆ ಬಿಜೆಪಿಯೇ ಕಾರಣ, ನಾವಲ್ಲ. ಸರಕಾರ ಮುಂಜಾಗ್ರತೆ ಕ್ರಮ ವಹಿಸಬೇಕು. ಈ ಹಿಂದೆ ಲಾಕ್‌ಡೌನ್‌ ಜಾರಿಗೆ ತಂದು, ರೈತರು, ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು, ಕ್ಷೌರಿಕರು, ಚಾಲಕರು ಸೇರಿದಂತೆ ತಳ ವರ್ಗದ ಜನತೆಗೆ ತೊಂದರೆ ಕೊಟ್ಟು, ಇಂದಿಗೂ ಅವರಿಗೆ ಪರಿಹಾರ ಕೊಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌, ಶಾಸಕರಾದ ರವೀಂದ್ರ, ಪ್ರಿಯಾಂಕ ಖರ್ಗೆ ಹಾಗೂ ಸಲೀಮ್‌ ಅಹಮದ್‌, ಧೃವ ನಾರಾಯಣ್‌, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.

ಸಿದ್ದರಾಮಯ್ಯನವ್ರಿಗೆ ಜ್ವರ ಬಂತು ಅಂದಾಗ ನನಗೆ ಬಹಳ ಆತಂಕವಾಯ್ತು; ಗೋವಿಂದ ಕಾರಜೋಳ

Siddaramaiah

ಸಿದ್ದರಾಮಯ್ಯ, ಮಾಜಿ ಸಿಎಂ



Read more

[wpas_products keywords=”deal of the day sale today offer all”]