Karnataka news paper

‘ಶಾರ್ದುಲ್‌ ಇದ್ದಾರೆ, ಆದಷ್ಟು ಬೇಗ ಫಿಟ್‌ ಆಗಿ’ : ಹಾರ್ದಿಕ್‌ಗೆ ಚೋಪ್ರಾ ವಾರ್ನಿಂಗ್‌!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ.
  • ಭಾರತ ಟೆಸ್ಟ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಕಮ್‌ಬ್ಯಾಕ್‌ ಕಠಿಣ ಎಂದ ಆಕಾಶ್‌ ಚೋಪ್ರಾ.
  • ಶಾರ್ದುಲ್‌ ಠಾಕೂರ್ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ ಅಡ್ಡಿಯಾಗಿದ್ದಾರೆ: ಆಕಾಶ್‌

ಹೊಸದಿಲ್ಲಿ: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಗಮನಾರ್ಹ ಪ್ರದರ್ಶನ ತೋರುತ್ತಿರುವ ಶಾರ್ದುಲ್‌ ಠಾಕೂರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸೇರಿದಂತೆ ಹಲವರ ಅವಕಾಶವನ್ನು ಕಸಿದುಕೊಂಡಿದ್ದಾರೆಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸತತ ಗಾಯಕ್ಕೆ ತುತ್ತಾಗುತ್ತಿದ್ದರೆ ಭಾರತ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

“ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ನಾನು ನಿಯಮಿತವಾಗಿ ಕ್ರಿಕೆಟ್‌ ಆಡಲು ಸಾಧ್ಯವಾಗುತ್ತಿಲ್ಲವೆಂದು ಹಾರ್ದಿಕ್‌ ಪಾಂಡ್ಯ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಪ್ರಮಾಣಿಕವಾಗಿ ಹೇಳಬೇಕೆಂದರೆ, ಹಾರ್ದಿಕ್‌ ಪಾಂಡ್ಯ ಅವರ ಬೆನ್ನು ನೋವಿನ ಸಮಸ್ಯೆ ಇದೇ ರೀತಿ ಮುಂದುವರಿದು ಬೌಲ್ ಮಾಡಲು ಸಾಧ್ಯವಾಗದೇ ಹೋದಲ್ಲಿ, ನಿಜಕ್ಕೂ ಅವರ ವೃತ್ತಿ ವೃತ್ತಿ ತುಂಬಾ ಕಠಿಣವಾಗಲಿದೆ,” ಎಂದು ಚೋಪ್ರಾ ಹೇಳಿದ್ದಾರೆ.

ಕೇಪ್‌ ಟೌನ್‌ ಟೆಸ್ಟ್‌ಗೆ ಟೀಮ್‌ ಇಂಡಿಯಾ XIನಲ್ಲಿ 2 ಬದಲಾವಣೆ ಸಾಧ್ಯತೆ!

ಇಲ್ಲಿಯವರೆಗೂ 11 ಟೆಸ್ಟ್‌ ಪಂದ್ಯಗಳಾಡಿರುವ ಹಾರ್ದಿಕ್‌ ಪಂಡ್ಯ 500ಕ್ಕೂ ಹೆಚ್ಚಿನ ರನ್‌ ಹಾಗೂ 17 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಒಮ್ಮೆ 5 ವಿಕೆಟ್‌ ಸಾಧನೆ ಮಾಡಿದ್ದಾರೆ. “ಒಂದು ವೇಳೆ ಅವರು ಸಂಪೂರ್ಣವಾಗಿ ಗುಣಮುಖರಾಗಿ ಬೌಲ್‌ ಮಾಡಲು ಶಕ್ತರಾದರೆ ಹಾಗೂ ದೀರ್ಘ ಸ್ಪೆಲ್‌ ಮಾಡುವಂತಾದರೆ, ಹಳೆಯ ಹಾರ್ದಿಕ್‌ ಪಾಂಡ್ಯ ಅವರ ರೀತಿ ಉಳಿಯಲಿದ್ದಾರೆ,” ಎಂದರು.

“ಭಾರತ ಟೆಸ್ಟ್‌ ತಂಡಕ್ಕೆ ನಾಲ್ಕನೇ ವೇಗದ ಬೌಲರ್ ಹಾಗೂ ಪೂರ್ಣ ಬ್ಯಾಟ್ಸ್‌ಮನ್‌ ಅಗತ್ಯವಾದರೆ, ಈ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ತುಂಬಲಿದ್ದಾರೆ. ಆ ಮೂಲಕ ಸ್ಟಾರ್‌ ಆಲ್‌ರೌಂಡರ್‌ ತಂಡಕ್ಕೆ ಬಲಿಷ್ಠ ಸಂಯೋಜನೆಯನ್ನು ತಂದುಕೊಡಲಿದ್ದಾರೆ. ಇದನ್ನು ನಾನು ಬಲವಾಗಿ ನಂಬುತ್ತೇನೆ ಏಕೆಂದರೆ, ಐವರು ಬೌಲರ್‌ಗಳಲ್ಲಿ ನಾಲ್ಕನೇ ವೇಗಿಯಾಗಿ ಅವರು ಆಡಿಸಿದರೆ, ಅವರು ಬ್ಯಾಟ್ಸ್‌ಮನ್‌ ಆಗಿಯೂ ತಂಡಕ್ಕೆ ನೆರವಾಗಲಿದ್ದಾರೆ. ಬೌಲಿಂಗ್‌ಗೆ ಹೋಲಿಕೆ ಮಾಡಿದರೆ ಬ್ಯಾಟ್ಸ್‌ಮನ್‌ ಆಗಿ ಹಾರ್ದಿಕ್‌ ಒಂದು ಪಟ್ಟು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ,” ಎಂದು ತಿಳಿಸಿದ್ದಾರೆ.

ಕನ್ನಡಿಗರೇ ಪ್ರಾಬಲ್ಯ ಸಾಧಿಸಿರುವ ಎಲೈಟ್‌ ಲಿಸ್ಟ್‌ಗೆ ಸೇರುವ ಸನಿಹದಲ್ಲಿ ಶಮಿ!

“ಒಂದು ವೇಳೆ ಹಾರ್ದಿಕ್‌ ಪಾಂಡ್ಯ ಸಂಫೂರ್ಣ ಫಿಟ್‌ ಆಗಿ ಬೌಲ್ ಮಾಡಲು ಸಮರ್ಥರಾದರೆ, ಬ್ಯಾಟಿಂಗ್‌ನಲ್ಲಿನ ಅವರ ಸಾಮರ್ಥ್ಯದೊಂದಿಗೆ ಶಾರ್ದುಲ್‌ ಠಾಕೂರ್‌ ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ ಎಂಬುದು ನನ್ನ ಅನಿಸಿಕೆ. ಆದರೆ ಅವರು ಇನ್ನೂ ಫಿಟ್‌ ಆಗಿಲ್ಲ. ಮತ್ತೊಂದೆಡೆ ತಮ್ಮ ಫಾರ್ಮ್‌ನೊಂದಿಗೆ ಶಾರ್ದುಲ್‌ ಠಾಕೂರ್‌ ಪ್ರತಿಯೊಬ್ಬರ ಅವಕಾಶವನ್ನು ಕಸಿದುಕೊಳ್ಳುತ್ತಿದ್ದಾರೆ,” ಎಂದು ಆಕಾಶ್‌ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಭಾರತ ತಂಡದಲ್ಲಿ ಶಾರ್ದುಲ್‌ ಠಾಕೂರ್‌ ಅತ್ಯುತ್ತಮ ಲಯದಲ್ಲಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಲ್ಲಿ ಶಾರ್ದುಲ್‌ 61 ರನ್‌ ನೀಡಿ 7 ವಿಕೆಟ್‌ ಸಾಧನೆ ಮಾಡಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಮೊದಲ ಭಾರತೀಯ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದರು ಹಾಗೂ ಆರ್‌ ಅಶ್ವಿನ್‌(66ಕ್ಕೆ 7) ಅವರನ್ನು ಹಿಂದಿಕ್ಕಿದ್ದರು.

ವೈಫಲ್ಯದಲ್ಲಿ ಮುಳುಗಿರುವ ಪೂಜಾರ-ರಹಾನೆಗೆ ಕೊಹ್ಲಿ ಪೂರ್ಣ ಬೆಂಬಲ!

2019ರ ಏಕದಿನ ವಿಶ್ವಕಪ್‌ ಮುಗಿದ ಬಳಿಕ ಬೆನ್ನು ಶಸ್ತ್ರಿ ಚಿಕಿತ್ಸೆಗೆ ಒಳಗಾಗಿದ್ದ ಹಾರ್ದಿಕ್‌ ಪಾಂಡ್ಯ ಹಲವು ತಿಂಗಳ ಬಳಿಕ ಸಂಪೂರ್ಣ ಫಿಟ್‌ ಆಗಿದ್ದರು. ಇದರ ಹೊರತಾಗಿಯೂ ಶಸ್ತ್ರ ಚಿಕಿತ್ಸೆಯ ಬಳಿಕ ಸತತ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಿಯಮಿತವಾಗಿ ಬೌಲ್‌ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ಭಾರತ ಟೆಸ್ಟ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್‌ ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.



Read more

[wpas_products keywords=”deal of the day gym”]