Karnataka news paper

ಲಕ್ಷಣ ಇಲ್ಲದ, ಅಪಾಯಕಾರಿ ಸ್ವರೂಪ ಇಲ್ಲದವರ ಕೋವಿಡ್ ಪರೀಕ್ಷೆ ಬೇಡ: ಕೇಂದ್ರದ ಮಹತ್ವದ ಸೂಚನೆ


ಹೈಲೈಟ್ಸ್‌:

  • ಕೊರೊನಾ ವೈರಸ್ ಪರೀಕ್ಷೆಗೆ ಸಂಬಂಧಿಸಿದಂತೆ ಐಸಿಎಂಆರ್ ಹೊಸ ಸೂಚನೆ
  • ಕೋವಿಡ್ ರೋಗಿಗಳ ಸಂಪರ್ಕಿತ ರೋಗಲಕ್ಷಣವಿಲ್ಲದ ವ್ಯಕ್ತಿಗಳ ಪರೀಕ್ಷೆ ಬೇಡ
  • ಅಂತಾರಾಜ್ಯ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ
  • ರೋಗಿಗಳ ಪರೀಕ್ಷೆ ಕೊರತೆ ಕಾರಣ ಶಸ್ತ್ರಚಿಕಿತ್ಸೆಯಂತಹ ಪ್ರಕ್ರಿಯೆ ತಡವಾಗಬಾರದು

ಹೊಸದಿಲ್ಲಿ: ಕೊರೊನಾ ವೈರಸ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಅಧಿಕ ಅಪಾಯದಲ್ಲಿ ಇದ್ದಾರೆ ಎಂದು ಗುರುತಿಸದ ಹೊರತು, ಎಲ್ಲ ಕೋವಿಡ್ 19 ಸೋಂಕಿತರ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಸರ್ಕಾರದ ಉನ್ನತ ವೈದ್ಯಕೀಯ ಸಮಿತಿ ಸೋಮವಾರ ಹೊಸ ಸೂಚನೆ ಹೊರಡಿಸಿದೆ.

ಕೋವಿಡ್ 19 ಸೋಂಕಿಗೆ ಒಳಗಾದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸುವ ಕ್ರಮವನ್ನು ಅನುಸರಿಸಲಾಗುತ್ತಿತ್ತು. ಅಲ್ಲದೆ, ಬಹುತೇಕ ರಾಜ್ಯಗಳು ತಮ್ಮ ಗಡಿಗಳನ್ನು ದಾಟಿ ಬರುವ ಅನ್ಯ ರಾಜ್ಯದವರನ್ನು ಪರೀಕ್ಷೆಗೆ ಒಳಪಡಿಸುವ ನಿಯಮಗಳನ್ನು ಜಾರಿಗೆ ತಂದಿದ್ದವು. ಇವುಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕುಶ ಹಾಕಿದೆ.
3 ತಿಂಗಳಲ್ಲಿ ಕೋವಿಡ್‌ ಆರ್ಭಟ ಅಂತ್ಯ..! ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆ..
ಸಮುದಾಯದೊಳಗಿನ ರೋಗ ಲಕ್ಷಣರಹಿತ ವ್ಯಕ್ತಿಗಳು, ಹೋಮ್ ಐಸೋಲೇಷನ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಿಡುಗಡೆಯಾದ ರೋಗಿಗಳು ಮತ್ತು ಆರೋಗ್ಯ ಕೇಂದ್ರದಿಂದ ಡಿಸ್ಚಾರ್ಜ್ ಆದ ಕೋವಿಡ್ ರೋಗಿಗಳು ಹಾಗೂ ಅಂತಾರಾಜ್ಯ ಆಂತರಿಕ ಪ್ರಯಾಣಗಳನ್ನು ನಡೆಸುವ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಐಸಿಎಂಆರ್ ಹೇಳಿದೆ.

ಕೆಮ್ಮು, ಜ್ವರ, ಗಂಟಲು ಕೆರೆತ, ವಾಸನೆ ಅಥವಾ ರುಚಿ ಶಕ್ತಿ ಕಳೆದುಕೊಳ್ಳುವುದು, ಉಸಿರಾದ ಸಮಸ್ಯೆ ಹಾಗೂ ಇತರೆ ಉಸಿರಾಟ ಸಂಬಂಧಿ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದೆ.

ಭಾರತದ ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ರೇವು ಪಟ್ಟಣಗಳಿಗೆ ಬಂದಿಳಿಯುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಬೇಕು. ಗರ್ಭಿಣಿಯರು ಅಥವಾ ಪ್ರಸವಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರು ಸೇರಿದಂತೆ, ಶಸ್ತ್ರಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಇಲ್ಲದ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಪಡುವ ರೋಗಲಕ್ಷಣವಿಲ್ಲದ ರೋಗಿಗಳಲ್ಲಿ ತೀರಾ ಅಗತ್ಯ ಇದ್ದಾಗ ಅಥವಾ ಲಕ್ಷಣ ಕಾಣಿಸಿಕೊಂಡಾಗ ಸನ್ನಿವೇಶದ ಹೊರತಾಗಿ ಅವರನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಲಾಕ್‌ಡೌನ್‌ ಅವಧಿಯಲ್ಲಿ ಕಾಂಡೋಮ್‌ ಮರೆತ ಜನ; ಸಹಜವಾಗಿ ಗರ್ಭ ಧರಿಸಿದವರ ಸಂಖ್ಯೆ ಹೆಚ್ಚಳ
ಹಾಗೆಯೇ ಸರ್ಜರಿಗಳು ಮತ್ತು ಡೆಲಿವರಿಗಳಂತಹ ತುರ್ತು ಪ್ರಕ್ರಿಯೆಗಳು ಪರೀಕ್ಷೆಯ ಕೊರತೆ ಕಾರಣಕ್ಕೆ ವಿಳಂಬ ಆಗಬಾರದು. ಪರೀಕ್ಷೆ ಸೌಲಭ್ಯದ ಕೊರತೆಯಿಂದ ರೋಗಿಗಳನ್ನು ಬೇರೆ ಆರೋಗ್ಯ ಕೇಂದ್ರಕ್ಕೆ ಶಿಫಾರಸು ಮಾಡಬಾರದು ಎಂದೂ ಸೂಚನೆ ನೀಡಿದೆ.

ಜಿನೋಮ್ ಸೀಕ್ವೆನ್ಸಿಂಗ್ ಅನ್ನು ನಿಗಾವಣೆ ಉದ್ದೇಶಕ್ಕಾಗಿ ನಡೆಸಬೇಕಾಗುತ್ತದೆ. ಇದನ್ನು ಚಿಕಿತ್ಸೆ ಉದ್ದೇಶಕ್ಕಾಗಿ ನಡೆಸುವ ಅಗತ್ಯವಿಲ್ಲ. INSACOG ಶಿಫಾರಸುಗಳಿಗೆ ಅನುಗುಣವಾಗಿ ಪಾಸಿಟಿವ್ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬಹುದು ಎಂದು ಐಸಿಎಂಆರ್ ತಿಳಿಸಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅವರಲ್ಲಿ ಅಧಿಕ ಮಂದಿ ಲಕ್ಷಣ ರಹಿತರಾಗಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬರನ್ನೂ, ಅಂತಾರಾಜ್ಯ ಸಂಚಾರ ನಡೆಸುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಅನಗತ್ಯ ಪರೀಕ್ಷೆಗಳು ನಡೆಯುತ್ತಿರುವುದರಿಂದ ಪರೀಕ್ಷೆ ವರದಿ ಬರುವುದು ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ತಪ್ಪಿಸಲು ಕೆಲವು ಪರೀಕ್ಷೆಗಳನ್ನು ಕೈಬಿಡುವಂತೆ ಸೂಚನೆ ನೀಡಲಾಗಿದೆ. ಓಮಿಕ್ರಾನ್ ತಳಿ ಹರಡುವಿಕೆ ಸಂದರ್ಭದಲ್ಲಿ ಎಲ್ಲ ಕೋವಿಡ್ ಪಾಸಿಟಿವ್ ವರದಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿತ್ತು. ಅದಕ್ಕೂ ಕಡಿವಾಣ ಹಾಕಲು ಐಸಿಎಂಆರ್ ಮುಂದಾಗಿದೆ.



Read more

[wpas_products keywords=”deal of the day sale today offer all”]