Karnataka news paper

ಎಲ್ಲಾ ಯೋಜನೆಗಳಿಗೂ ಆಧಾರ್‌ ಬಳಕೆಗೆ ಸರಕಾರ ಕೇಳಲಿದೆ ನಿಮ್ಮ ಒಪ್ಪಿಗೆ! ಏನಿದರ ಲಾಭ?


ಹೈಲೈಟ್ಸ್‌:

  • ಕೇಂದ್ರದಿಂದ ಶೀಘ್ರವೇ ಜನರಿಗೆ ಸಮ್ಮತಿಯ ಫಾರ್ಮ್‌
  • ಎಲ್ಲ ಯೋಜನೆಗಳಿಗೆ ಆಧಾರ್‌ ಮಾಹಿತಿ ಜೋಡಣೆ
  • ಡೇಟಾಬೇಸ್‌ ಸಿದ್ಧಪಡಿಸುವುದು ಸರಕಾರದ ಉದ್ದೇಶ
  • ಯೋಜನೆಗಳ ಒಮ್ಮೆ ಒಪ್ಪಿಗೆ ನೀಡಿದರೆ ಮತ್ತೆ ಬೇಕಿಲ್ಲ
  • ಪದೇ ಪದೇ ಯೋಜನೆಗಳಿಗೆ ಆಧಾರ್‌ ಮಾಹಿತಿ ನೀಡುವ ತಾಪತ್ರಯವಿಲ್ಲ

ಹೊಸದಿಲ್ಲಿ: ಭವಿಷ್ಯದಲ್ಲಿ ಜಾರಿಗೆ ತರುವ ಎಲ್ಲ ಯೋಜನೆಗಳಿಗೆ ಆಧಾರ್‌ ಮಾಹಿತಿ ಜೋಡಣೆ ಮಾಡುವ ದಿಸೆಯಲ್ಲಿ ಜನರ ‘ಸ್ವಯಂಪ್ರೇರಿತ ಒಪ್ಪಿಗೆ’ ಪಡೆಯಲು ಕೇಂದ್ರ ಸರಕಾರ ನಿರ್ಧರಿಸಿದೆ. ಜತೆಗೆ ಆಧಾರ್‌ ಸಂಯೋಜಿತ ಡೇಟಾಬೇಸ್‌ ಸಿದ್ಧಪಡಿಸುವುದೂ ಸರಕಾರದ ಆಶಯವಾಗಿದೆ.

ಕೇಂದ್ರ ಸರಕಾರದ ಎಲ್ಲ ಸಚಿವಾಲಯ ಹಾಗೂ ಇಲಾಖೆಗಳು ಆಧಾರ್‌ ಮಾಹಿತಿ ಸಂಗ್ರಹ ಕುರಿತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಕ್ಕೆ ಮನವಿ ಮಾಡಿರುವುದರಿಂದ ಯುಐಡಿಎಐ ಇಂತಹ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ, ಈಗಾಗಲೇ ಕೆಲವು ಸಚಿವಾಲಯಗಳು ಜನರು ಒದಗಿಸಿದ ಮಾಹಿತಿಯನ್ನು ಸಂಗ್ರಹಿಸಿವೆ.

”ಕೇಂದ್ರ ಸರಕಾರವು ಶೀಘ್ರದಲ್ಲೇ ಜನರಿಗೆ ಇ-ಮೇಲ್‌ ಮೂಲಕ ಫಾರ್ಮ್‌ ಕಳುಹಿಸಲಿದೆ. ಜತೆಗೆ ಎಸ್‌ಎಂಎಸ್‌ ಸಂದೇಶ ಕಳುಹಿಸಿ ಆಧಾರ್‌ ವೆಬ್‌ಸೈಟ್‌ನಲ್ಲಿಯೇ ಫಾರ್ಮ್‌ ಭರ್ತಿ ಮಾಡಲು ಮನವಿ ಮಾಡಲಿದೆ. ಜನರು ಒಪ್ಪಿಗೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಪ್ರತಿ ಯೋಜನೆಗೂ ಪ್ರತ್ಯೇಕವಾಗಿ ಆಧಾರ್‌ ಮಾಹಿತಿ ನೀಡುವುದು ತಪ್ಪುತ್ತದೆ,” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವೋಟರ್‌ ಐಡಿಗೂ ಆಧಾರ್‌ ಲಿಂಕ್‌, ಚುನಾವಣಾ ಸುಧಾರಣೆ ತರುವ ವಿಧೇಯಕ ಮಂಡನೆಗೆ ಸಂಪುಟ ಅಂಗೀಕಾರ
ಫಾರ್ಮ್‌ನಲ್ಲಿ ಏನಿರಲಿದೆ?

ಆಧಾರ್‌ ಸಂಖ್ಯೆ, ಕುಟುಂಬ ಸದಸ್ಯರ ಸಂಖ್ಯೆ ಹಾಗೂ ಅರ್ಜಿದಾರರ ಒಂದು ಭಾವಚಿತ್ರ ಒದಗಿಸಬೇಕಾಗುತ್ತದೆ. ಇದಾದ ಬಳಿಕ ಸರಕಾರದ ಎಲ್ಲ ಯೋಜನೆಗಳಿಗೆ ಮಾಹಿತಿಯನ್ನು ಒದಗಿಸಿ, ಆಧಾರ್‌ ಸಂಯೋಜಿತ ಡೇಟಾಬೇಸ್‌ ರಚಿಸುವುದು ಸರಕಾರದ ಉದ್ದೇಶವಾಗಿದೆ. ಡೇಟಾಬೇಸ್‌ ಮಾಹಿತಿಯನ್ನು ಆಯಾ ರಾಜ್ಯಗಳೂ ಬಳಸಬಹುದಾಗಿದೆ.

ಜನರ ಆಯ್ಕೆ ಏನು?

ಜನರು ಎಲ್ಲ ಯೋಜನೆಗಳಿಗೂ ಆಧಾರ್‌ ಮಾಹಿತಿ ಪಡೆಯಲು ಒಪ್ಪಿಗೆ ಸೂಚಿಸಬಹುದು ಇಲ್ಲವೇ ನಿರಾಕರಿಸಬಹುದು. ನಿರಾಕರಿಸಿದವರು ಈಗ ಇರುವಂತೆಯೇ ಸರಕಾರ ಯೋಜನೆಗಳಿಗೆ ಪ್ರತ್ಯೇಕವಾಗಿ ಆಧಾರ್‌ ಮಾಹಿತಿ ನೀಡಬೇಕಾಗುತ್ತದೆ. ಉದ್ದೇಶಿತ ಯೋಜನೆ ಪ್ರಕಾರ, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಒಪ್ಪಿಗೆ ನೀಡಿದರೆ ಸಾಕಾಗುತ್ತದೆ.

ಪಿಎಂ ಕಿಸಾನ್‌ 10ನೇ ಕಂತಿನ ಹಣ ಶೀಘ್ರ ಬಿಡುಗಡೆ, ಆಧಾರ್‌ ಲಿಂಕ್‌ ಮಾಡಲು ಹೀಗೆ ಮಾಡಿ
129 ಕೋಟಿ – ಭಾರತದಲ್ಲಿಆಧಾರ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ

2009 ಜ. 28 – ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆರಂಭ

12 ವರ್ಷದ ಹಿಂದೆ ಆರಂಭ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ವು ಆಧಾರ್‌ ಕಾರ್ಡ್‌ ನೀಡುತ್ತದೆ. ಈ ವ್ಯವಸ್ಥೆಯನ್ನು 12 ವರ್ಷದ ಹಿಂದೆ ಅಂದರೆ, 2009 ಜನವರಿ 28ರಂದು ಆರಂಭಿಸಲಾಯಿತು. ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತಾದರೂ ಆ ನಂತರದಲ್ಲಿಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಜೆ. ಸತ್ಯನಾರಾಯಣನ್‌ ಅವರು ಈಗ ಯುಐಡಿಎಐನ ಅಧ್ಯಕ್ಷರಾಗಿದ್ದಾರೆ.

ನೇರ ನಗದ ವರ್ಗಾವಣೆ

ವ್ಯಕ್ತಿಯ ಗುರುತಿನ ಚೀಟಿಯಾಗಿ ಆರಂಭವಾಗಿದ್ದ ಆಧಾರ್‌ ಆ ನಂತರದಲ್ಲಿ ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಪ್ರಮುಖ ಮಾಧ್ಯಮವಾಗಿ ಬದಲಾಯಿತು. ಕೇಂದ್ರ ಸರಕಾರ ನೇರ ನಗದು ವರ್ಗಾವಣೆ ಮೂಲಕ, ಯಾವುದೇ ಮಧ್ಯವರ್ತಿಗಳಿಲ್ಲದೇ ಫಲಾನುಭವಿಗಳನ್ನು ತಲುಪಲು ಸಾಧ್ಯವಾಯಿತು.



Read more

[wpas_products keywords=”deal of the day sale today offer all”]