ಹೈಲೈಟ್ಸ್:
- ಭಾರತ-ದಕ್ಷಿಣ ಆಫ್ರಿಕಾ ನಡುವಣ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ.
- ಕೇಪ್ ಟೌನ್ನಲ್ಲಿ ನಡೆಯಲಿರುವ 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ.
- ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ಗೆ 2 ಬದಲಾವಣೆ ಸೂಚಿಸಿದ ಸಂಜಯ್.
ಸೆಂಚೂರಿಯನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 112 ರನ್ಗಳ ಭರ್ಜರಿ ಜಯ ದಾಖಲಿಸಿತು. ಆದರೆ, ಗಾಯದ ಸಮಸ್ಯೆ ಕಾರಣ ವಿರಾಟ್ ಕೊಹ್ಲಿ ದ್ವಿತೀಯ ಟೆಸ್ಟ್ಗೆ ಅಲಭ್ಯರಾದಾಗ ಕೆಎಲ್ ರಾಹುಲ್ ಸಾರಥ್ಯದಲ್ಲಿ ಆಡಿದ್ದ ಭಾರತ ತಂಡ 7 ವಿಕೆಟ್ಗಳ ಸೋಲನುಭವಿಸಿತ್ತು. ಹೀಗಾಗಿ ಸರಣಿಯ ಕ್ಲೈಮ್ಯಾಕ್ಸ್ ಟೆಸ್ಟ್ ಆಗಿರುವ ಕೇಪ್ ಟೌನ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಲೆಸಿದೆ.
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಾಂಜ್ರೇಕರ್, ಮಹತ್ವದ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಮಹತ್ವದ ಬದಲಾವಣೆ ತಂದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ಇಎಸ್ಪಿಎನ್ ಕ್ರಿಕ್ಇನ್ಫೋ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಂಜ್ರೇಕರ್, ಹನುಮ ವಿಹಾರಿ ಜಾಗಕ್ಕೆ ವಿರಾಟ್ ಕೊಹ್ಲಿ ಮತ್ತು ಗಾಯಾಳು ಮೊಹಮ್ಮದ್ ಸಿರಾಜ್ ಸ್ಥಾನದಲ್ಲಿ ಅನುಭವಿ ಇಶಾಂತ್ ಶರ್ಮಾ ಆಡಬೇಕಿತ್ತು ಎಂದಿದ್ದಾರೆ.
‘ನನ್ನ ಸಾಮರ್ಥ್ಯ ಸಾಬೀತುಪಡಿಸುವ ಅಗತ್ಯತೆ ನನಗಿಲ್ಲ’ ಟೀಕಾಕಾರರಿಗೆ ಕೊಹ್ಲಿ ತಿರುಗೇಟು!
“ಮನಸ್ಸು ಭಾರವಾಗುತ್ತದೆ. ಆದರೆ ವಿರಾಟ್ ಕೊಹ್ಲಿ ಸಲುವಾಗಿ ಹನುಮ ವಿಹಾರಿ ಸ್ಥಾನ ಮಾಡಿಕೊಡಲೇ ಬೇಕು. ಈ ನಡುವೆ ಅಜಿಂಕ್ಯ ರಹಾನೆ ಅವರನ್ನು ಕೈ ಬಿಡಬೇಕು ಎಂದನ್ನಿಸಿದ್ದೂ ನಿಜ. ಆದರೆ, ಎರಡನೇ ಟೆಸ್ಟ್ನಲ್ಲಿ ಅವರು ಬಾರಿಸಿದ್ದ ಹೋರಾಟಯುತ ಅರ್ಧಶತಕದ ಒಂದೇ ಒಂದು ಕಾರಣಕ್ಕೆ ಅವರಿಗೆ ಮತ್ತೊಂದು ಅವಕಾಶ ಕೊಡಲಾಗಿದೆ. ಈ ಬಗ್ಗೆ ಚರ್ಚೆ ಮಾಡಬಹುದು ಕೂಡ,” ಎಂದು ಮಾಂಜ್ರೇಕರ್ ಹೇಳಿದ್ದಾರೆ.
ಈ ನಡುವೆ ಮೊಹಮ್ಮದ್ ಸಿರಾಜ್ ಗಾಯಗೊಂಡಿರುವ ಕಾರಣ ಅವರ ಸ್ಥಾನದಲ್ಲಿ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಇಲ್ಲಿ ಅನುಭವಿ ವೇಗಿ ಇಶಾಂತ್ಗೆ ಮಣೆ ಹಾಕುವುದೇ ಸರಿ ಎಂದು ಮಾಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
‘ಪಂತ್ ಈಗ ಸೂಪರ್ ಸ್ಟಾರ್ ಅಲ್ಲ, 3ನೇ ಟೆಸ್ಟ್ ಆಡಿಸಬೇಡಿ’ : ಸೋಢಿ!
ಸಂಜಯ್ ಆಯ್ಕೆಯ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ
1. ಕೆಎಲ್ ರಾಹುಲ್ (ಓಪನರ್)
2. ಮಯಾಂಕ್ ಅಗರ್ವಾಲ್ (ಓಪನರ್)
3. ಚೇತೇಶ್ವರ್ ಪೂಜಾರ (ಬ್ಯಾಟ್ಸ್ಮನ್)
4. ವಿರಾಟ್ ಕೊಹ್ಲಿ (ಬ್ಯಾಟ್ಸ್ಮನ್/ ಕ್ಯಾಪ್ಟನ್)
5. ಅಜಿಂಕ್ಯ ರಹಾನೆ (ಬ್ಯಾಟ್ಸ್ಮನ್)
6. ರಿಷಭ್ ಪಂತ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್)
7. ಶಾರ್ದುಲ್ ಠಾಕೂರ್ (ಆಲ್ರೌಂಡರ್)
8. ಆರ್ ಅಶ್ವಿನ್ (ಆಫ್ ಸ್ಪಿನ್ನರ್)
9. ಜಸ್ಪ್ರೀತ್ ಬುಮ್ರಾ (ಬಲಗೈ ವೇಗಿ)
10. ಮೊಹಮ್ಮದ್ ಶಮಿ (ಬಲಗೈ ವೇಗಿ)
11. ಇಶಾಂತ್ ಶರ್ಮಾ (ಬಲಗೈ ವೇಗಿ)
Read more
[wpas_products keywords=”deal of the day gym”]