Karnataka news paper

ಕೇಸ್‌ ಹೆಚ್ಚಿದ್ದರೂ ರೋಗ ತೀವ್ರತೆ ಕಡಿಮೆ, ಲಾಕ್‌ಡೌನ್‌ ಅಗತ್ಯವಿಲ್ಲ : ಡಾ.ವಿದ್ಯಾಸಾಗರ್‌


ಹೈಲೈಟ್ಸ್‌:

  • ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕೊರೊನಾ ಸೋಂಕು
  • ರೋಗ ತೀವ್ರತೆ ಕಡಿಮೆ, ಲಾಕ್‌ಡೌನ್‌ ಅಗತ್ಯವಿಲ್ಲ
  • ಕೊರೊನಾ ಸಮಿತಿ ಅಧ್ಯಕ್ಷ ಡಾ.ವಿದ್ಯಾಸಾಗರ್‌ ಮಾಹಿತಿ

ಹೈದರಾಬಾದ್‌: ”ದೇಶದಲ್ಲಿ ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೂ ಹೆದರುವ ಅಗತ್ಯವಿಲ್ಲ. ಈ ಬಾರಿ ಸೋಂಕಿನಿಂದ ಉಂಟಾಗುತ್ತಿರುವ ರೋಗಲಕ್ಷಣಗಳು ಅತ್ಯಂತ ಗಂಭೀರವಾಗಿಲ್ಲ,” ಎಂದು ರಾಷ್ಟ್ರೀಯ ಕೊರೊನಾ ಸೂಪರ್‌ಮಾಡೆಲ್‌ ಸಮಿತಿ ಅಧ್ಯಕ್ಷ ಡಾ.ವಿದ್ಯಾಸಾಗರ್‌ ಎಂ. ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್‌ ಐಐಟಿ ಪ್ರಾಧ್ಯಾಪಕರೂ ಆಗಿರುವ ಡಾ.ವಿದ್ಯಾಸಾಗರ್‌ ಅವರು, ”ನಿತ್ಯ 1 ಲಕ್ಷ ವರದಿಯಾಗುವುದನ್ನು ಕಂಡು ಆತಂಕದಿಂದ ಶಾಲೆಗಳನ್ನು ಮುಚ್ಚುವುದು, ಕಚೇರಿ ನಿರ್ಬಂಧ ಹೇರುವುದು ಮತ್ತು ಲಾಕ್‌ಡೌನ್‌ ವಿಧಿಸುವುದು ಅಗತ್ಯವಿಲ್ಲ. ರೋಗ ನಿರೋಧಕತೆ ಕ್ಷೀಣಿಸಿದವರಲ್ಲಿ ಕೊರೊನಾ ವೇಗವಾಗಿ ಪ್ರಸರಣ ಮಾಡುತ್ತಿದೆ ಅಷ್ಟೆ. ಇದು ಮಾರಣಾಂತಿಕ ಅಲೆ ಎನ್ನಲು ಸಾಕ್ಷ್ಯಗಳಿಲ್ಲ. ಜತೆಗೆ ಲಾಕ್‌ಡೌನ್‌ , ಕಫ್ರ್ಯೂಗಳಿಂದ ವೈರಾಣು ಪ್ರಸರಣ ತಡೆಯಲು ಸಾಧ್ಯವಿಲ್ಲ,” ಎಂದು ವಿವರಿಸಿದ್ದಾರೆ.

”ಸದ್ಯ ಸೋಂಕಿತರಲ್ಲಿ ಮಾರಣಾಂತಿಕ ಎನ್ನುವಂತಹ ಲಕ್ಷಣಗಳಾಗಲೀ, ಅಡ್ಡಪರಿಣಾಮಗಳಾಗಲೀ ಕಂಡುಬರುತ್ತಿಲ್ಲ. ಜನರು ಕ್ಷಿಪ್ರಗತಿಯಲ್ಲೇ ಓಮಿಕ್ರಾನ್‌ ಹಾಗೂ ಕೊರೊನಾ ಸೋಂಕಿನಿಂದ ಪೂರ್ಣ ಚೇತರಿಕೆ ಕಾಣುತ್ತಿದ್ದಾರೆ. ಹಾಗಾಗಿ ಜನರನ್ನು ಲಾಕ್‌ಡೌನ್‌, ಕರ್ಫ್ಯೂಗಳೆಂಬ ಆತಂಕಕ್ಕೆ ಆಡಳಿತಗಳು ದೂಡುವುದು ಬೇಕಿಲ್ಲ,” ಎಂದು ವಿದ್ಯಾಸಾಗರ್‌ ಅಭಿಪ್ರಾಯಪಟ್ಟಿದ್ದಾರೆ.

ಫೆಬ್ರವರಿ ಅಂತ್ಯದೊಳಗೆ ದೇಶದಲ್ಲಿ ಓಮಿಕ್ರಾನ್‌ ಉತ್ತುಂಗ – ತಜ್ಞರ ಅಂದಾಜು

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ನಿಂದ ಎದ್ದಂತಹ ಹೊಸ ಸಾಂಕ್ರಾಮಿಕ ಅಲೆಯ ಆರಂಭದಲ್ಲಿ ಶೇ.12ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ , ಸದ್ಯ ಭಾರತದಲ್ಲಿ ಆಸ್ಪತ್ರೆ ದಾಖಲಾತಿ ಕೇವಲ ಶೇ.3.5ರಷ್ಟಿದೆ. ನಿತ್ಯ 2 ಲಕ್ಷದಷ್ಟು ಹೊಸ ಸೋಂಕಿತರು ವರದಿಯಾಗುತ್ತಿದ್ದರೂ ಬ್ರಿಟನ್‌ನಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರು 100ರಲ್ಲಿ ಒಬ್ಬರು ಮಾತ್ರ.

ಡೆಲ್ಟಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು 10 ದಿನಗಳು ಬೇಕಾಗುತ್ತಿತ್ತು. ಆದರೆ, ಸದ್ಯ ಸೋಂಕಿತರು 7 ದಿನಗಳ ಒಳಗೆ ಡಿಸ್ಚಾರ್ಜ್ ಆಗುತ್ತಿದ್ದಾರೆ. ಆಮ್ಲಜನಕದ ಅಗತ್ಯ ಕೂಡ ಅಷ್ಟಾಗಿ ಬೇಕಾಗುತ್ತಿಲ್ಲ ಎನ್ನುವ ಅಂಶಗಳು ಮೂರನೇ ಅಲೆಯು ಕಡಿಮೆ ತೀವ್ರವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ವಿದ್ಯಾಸಾಗರ್‌ ಅಂಕಿ-ಅಂಶಗಳನ್ನು ನೀಡಿದ್ದಾರೆ.



Read more

[wpas_products keywords=”deal of the day sale today offer all”]