Karnataka news paper

ಸಂಸತ್‌ ರದ್ದುಗೊಳಿಸಿ ಸಿಂಗಪುರಕ್ಕೆ ಹಾರಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ!


ಹೈಲೈಟ್ಸ್‌:

  • ಸಂಸತ್‌ ರದ್ದುಗೊಳಿಸಿ ಸಿಂಗಪುರಕ್ಕೆ ತೆರಳಿದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ
  • ಸಂಸತ್‌ ಅಧಿವೇಶನವನ್ನು ಒಂದು ವಾರ ಮುಂದೂಡಿ ಅಧಿಸೂಚನೆ ಹೊರಡಿಸಿದ ಅಧ್ಯಕ್ಷ
  • ಜನವರಿ 11ರ ಬದಲಾಗಿ ಜನವರಿ 18ರಿಂದ ಶ್ರೀಲಂಕಾ ಸಂಸತ್‌ ಅಧಿವೇಶನ

ಕೊಲಂಬೊ (ಶ್ರೀಲಂಕಾ): ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಶ್ರೀಲಂಕಾದ ಸಂಸತ್‌ ಅನ್ನು ರದ್ದುಪಡಿಸಿ, ಕಲಾಪವನ್ನು ಒಂದು ವಾರಗಳ ಕಾಲ ಮುಂದೂಡಿ, ಅನಧಿಕೃತ ಭೇಟಿಗಾಗಿ ಸಿಂಗಪುರಕ್ಕೆ ತೆರಳಿದ್ದಾರೆ. ರಾಜಪಕ್ಸ ಅವರ ಕಲಾಪ ಮುಂದೂಡುವ ನಡೆ ಗೊಂದಲಮಯವಾಗಿದ್ದು, ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಸಂಸತ್‌ ಅನ್ನು ಒಂದು ವಾರ ಅಮಾನತುಗೊಳಿಸುವ ರಾಜಪಕ್ಸ ಅವರ ನಿರ್ಧಾರದ ಬಗ್ಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶ್ರೀಲಂಕಾದ ಸಂಸತ್‌ ಅಧಿವೇಶನ ಶುಕ್ರವಾರ ಅಂತ್ಯವಾಗಿತ್ತು. ಅದಾದ ಬಳಿಕ ಜನವರಿ 11ರಿಂದ ಮತ್ತೆ ಸಂಸತ್‌ ಕಲಾಪ ಆರಂಭವಾಗಬೇಕಿತ್ತು. ಆದರೆ, ರಾಜಪಕ್ಸ ಅವರು ಸಂಸತ್‌ ಕಲಾಪವನ್ನು ಒಂದು ವಾರ ರದ್ದುಪಡಿಸಿರುವುದರಿಂದ ಜನವರಿ 18ರಿಂದ ಆರಂಭವಾಗಲಿದೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಡಿಸೆಂಬರ್ 12ರಂದು ಗೆಜೆಟ್‌ ಅಧಿಸೂಚನೆ ಹೊರಡಿಸುವ ಮೂಲಕ ಅಧಿವೇಶನವನ್ನು ರದ್ದುಪಡಿಸಿದ್ದಾರೆ. “ನಾನು ಈ ಅಧಿಸೂಚನೆಯ ಮೂಲಕ ಡಿಸೆಂಬರ್ 12, 2021ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸಂಸತ್‌ ಅನ್ನು ರದ್ದುಪಡಿಸುತ್ತೇನೆ. ಈ ಮೂಲಕ ಮುಂದಿನ ಅಧಿವೇಶನವನ್ನು ಜನವರಿ 18ರಂದು ಬೆಳಗ್ಗೆ 10ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ಸಂಸತ್‌ ಅನ್ನು ಮುಂದೂಡಿದ ಕೆಲವೇ ಗಂಟೆಗಳ ಬಳಿಕ 72 ವರ್ಷದ ಗೊತಬಯ ರಾಜಪಕ್ಸ ಅವರು ಅನಧಿಕೃತ ಭೇಟಿಗಾಗಿ ಸಿಂಗಪುರಕ್ಕೆ ತೆರಳಿದ್ದಾರೆ. ಅಧ್ಯಕ್ಷರು ವೈದ್ಯಕೀಯ ಉದ್ದೇಶಗಳಿಗಾಗಿ ಖಾಸಗಿ ಭೇಟಿಯಲ್ಲಿದ್ದಾರೆ ಎಂದು ಅಧ್ಯಕ್ಷೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷರ ಗೈರಿನಿಂದ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ವಿಷಯಗಳನ್ನು ಚರ್ಚೆ ನಡೆಸಿಲ್ಲ ಎಂದು ಇಂಧನ ಸಚಿವ ಉದಯ್‌ ಗಮ್ಮನಪಿಲ ಸುದ್ದಿಗಾರರಿಗೆ ತಿಳಿಸಿದ್ದಾರೆ. ತೀವ್ರ ವಿದೇಶಿ ಕರೆನ್ಸಿ ಬಿಕ್ಕಟ್ಟಿನ ದೃಷ್ಟಿಯಿಂದ ಶ್ರೀಲಂಕಾ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಬೇಲ್‌ಔಟ್ ಪ್ಯಾಕೇಜ್‌ ಪಡೆಯಲು ಮುಂದಾಗುವ ಸಾಧ್ಯತೆಯನ್ನು ಚರ್ಚಿಸಲು ಶ್ರೀಲಂಕಾ ಸರ್ಕಾರ ಸಚಿವ ಸಂಪುಟ ಸಭೆ ಸೇರಿತ್ತು.

ಶ್ರೀಲಂಕಾ ತಲುಪಿದ ಪಾಂಪಿಯೋ: ದ್ವೀಪ ರಾಷ್ಟ್ರದ ಅಧ್ಯಕ್ಷರೊಂದಿಗೆ ಮಾತುಕತೆ!
ಶ್ರೀಲಂಕಾದ ವಿದೇಶಿ ಮೀಸಲುಗಳು ಕೇವಲ ಒಂದು ತಿಂಗಳ ಆಮದುಗಳನ್ನು ಸಾಕಾಗುವಷ್ಟು ಕೆಳಮಟ್ಟಕ್ಕೆ ಇಳಿದಿವೆ. ಅಮೆರಿಕದ ಇಂಧನ ಕಂಪನಿಯೊಂದಿಗೆ ವಿವಾದಾತ್ಮಕ ವಿದ್ಯುತ್ ಒಪ್ಪಂದದ ಬಗ್ಗೆ ಚರ್ಚಿಸಲು ಕೂಡ ಸಚಿವ ಸಂಪುಟ ನಿಗದಿಯಾಗಿತ್ತು. ಇದಕ್ಕಾಗಿ ಸರ್ಕಾರದ ಮಿತ್ರಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಲಂಕಾದಲ್ಲಿ‘ಅಣ್ತಮ್ಮ’ ಅಧಿಕಾರಕ್ಕೆ: ಗೊಟಬಯ ಅಧ್ಯಕ್ಷ, ಮಹಿಂದಾ ಪ್ರಧಾನಿ!
ಅಧ್ಯಕ್ಷರ ಕ್ರಮದಿಂದ ಸಂಸತ್ತಿನಲ್ಲಿನ ಎಲ್ಲಾ ಸ್ಥಾಯಿ ಸಮಿತಿಗಳನ್ನು ಪುನರ್‌ರಚಿಸಬೇಕಾಗುತ್ತದೆ. ಸಾರ್ವಜನಿಕ ಉದ್ಯಮಗಳು ಮತ್ತು ಸಾರ್ವಜನಿಕ ಖಾತೆಗಳ ಮೇಲಿನ ಎರಡು ಮೇಲ್ವಿಚಾರಣಾ ಸಮಿತಿಗಳು ಸರ್ಕಾರಿ ಸಂಸ್ಥೆಗಳನ್ನು ನಡೆಸುವಲ್ಲಿ ಅನೇಕ ಅಕ್ರಮಗಳನ್ನು ತೋರಿಸುತ್ತಿವೆ. ಸಂಸತ್‌ ಅಧಿವೇಶನದ ದಿನಾಂಕ ಮತ್ತು ಸಮಯವನ್ನು ಸಂಸತ್‌ನಲ್ಲಿ ಪ್ರತಿನಿಧಿಸುವ ರಾಜಕೀಯ ಪಕ್ಷದ ನಾಯಕರು ಹೌಸ್ ಸ್ಪೀಕರ್‌ಗೆ ಅನುಗುಣವಾಗಿ ಹೊಂದಿಸುತ್ತಾರೆ.

ಶ್ರೀಲಂಕಾ ನೂತನ ಅಧ್ಯಕ್ಷ ಗೊಟಬಯ ಪ್ರಮಾಣ ವಚನ : ಮಿತ್ರ ರಾಷ್ಟ್ರಗಳ ಜತೆ ಸ್ನೇಹ ಸಂಕಲ್ಪ
ಆದಾಗ್ಯೂ, ಸಂವಿಧಾನದ 70ನೇ ವಿಧಿಯ ಅಡಿಯಲ್ಲಿ ಸಂಸತ್‌ ಅನ್ನು ಮುಂದೂಡುವ ಅಧಿಕಾರವನ್ನು ಅಧ್ಯಕ್ಷರು ಹೊಂದಿದ್ದಾರೆ. ಇನ್ನು, ಕೊಲಂಬೊ ಗೆಜೆಟ್ ಪತ್ರಿಕೆಯ ಪ್ರಕಾರ, ಕಲಾಪವನ್ನು ರದ್ದುಪಡಿಸಿದ ಸಮಯದಲ್ಲಿ, ಸ್ಪೀಕರ್ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತಾರೆ. ಜೊತೆಗೆ ಸದಸ್ಯರು ಸಂಸತ್ತಿನ ಸಭೆಗಳಿಗೆ ಹಾಜರಾಗದಿದ್ದರೂ ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿದೆ.



Read more