Source : ANI
ನೀಲಗಿರಿ(ತಮಿಳು ನಾಡು): ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಭೀಕರ ಮಿಲಿಟರಿ ಹೆಲಿಕಾಪ್ಟರ್ ಅಪಘಾತ ದುರಂತದಲ್ಲಿ ಮೃತಪಟ್ಟ ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಕಳೇಬರಕ್ಕೆ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೌರವ ನಮನ ಸಲ್ಲಿಸಿದರು.
ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಸಕಲ ಮಿಲಿಟರಿ ಮತ್ತು ಸರ್ಕಾರಿ ಗೌರವಗಳೊಂದಿಗೆ ಪುಷ್ಪಗಳಿಂದ ಅಲಂಕೃತ ಮಾಡಿದ್ದ ವಾಹನದಲ್ಲಿ ಮೃತರ ಕಳೇಬರವನ್ನು ಮೆರವಣಿಗೆ ಗೌರವಗಳ ಮೂಲಕ ಹೊರಗೆ ತಂದು ಇಟ್ಟು ಭಾರತದ ತ್ರಿವರ್ಣ ಧ್ವಜವನ್ನು ಹೊದಿಸಲಾಯಿತು. ನೀಲಗಿರಿಯಲ್ಲಿರುವ ಮದ್ರಾಸ್ ರೆಜಿಮೆಂಟಲ್ ಕೇಂದ್ರದಲ್ಲಿ ಇಂದು ಬೆಳಗ್ಗೆ ಸಕಲ ಮಿಲಿಟರಿ ಮತ್ತು ಸರ್ಕಾರಿ ಗೌರವಗಳೊಂದಿಗೆ ಗೌರವ ನಮನ ಸಲ್ಲಿಸಲಾಯಿತು. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗೌರವ ಸಲ್ಲಿಸಿದರು.
நீலகிரி மாவட்டம், வெலிங்டன் இராணுவ பயிற்சி கல்லூரி மைதானத்தில், ஹெலிகாப்டர் விபத்தில் உயிரிழந்த இந்திய முப்படை தலைமை தளபதி ஜெனரல் திரு. பிபின் ராவத் அவர்களின் உடலுக்கு மாண்புமிகு முதலமைச்சர் @mkstalin
அவர்கள் மலர்வளையம் வைத்து அஞ்சலி செலுத்தினார். pic.twitter.com/YvmXenfu9V— CMOTamilNadu (@CMOTamilnadu) December 9, 2021
ತೆಲಂಗಾಣ ಮತ್ತು ಪುದುಚೆರಿ ರಾಜ್ಯಪಾಲೆ ಡಾ ತಮಿಳಿಸೈ ಸೌಂದರರಾಜನ್ ಸಹ ಮದ್ರಾಸ್ ರೆಜಿಮೆಂಟ್ ಗೆ ಬಂದು ಗೌರವ ನಮನ ಸಲ್ಲಿಸಿದರು. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ರಕ್ಷಣಾ ಸಿಬ್ಬಂದಿಯ ಪಾರ್ಥಿವ ಶರೀರವನ್ನು ತಮಿಳು ನಾಡು ಸರ್ಕಾರದ ವಾಹನದಲ್ಲಿ ಕೊಂಡೊಯ್ಯಲಾಯಿತು. ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ವೆಲ್ಲಿಂಗ್ಟನ್ನಲ್ಲಿರುವ ಮದ್ರಾಸ್ ರೆಜಿಮೆಂಟಲ್ ಸೆಂಟರ್ನಿಂದ ಪಾರ್ಥಿವ ಶರೀರಗಳನ್ನು ಕೊಯಮತ್ತೂರಿನ ಸುಲೂರ್ ಏರ್ ಬೇಸ್ಗೆ ಉಚಿತ ಹರ್ಸ್ ಸರ್ವೀಸ್ ವಾಹನಗಳಲ್ಲಿ ಕಳುಹಿಸುವ ಮೂಲಕ ದೆಹಲಿಗೆ ರವಾನಿಸಲಾಗಿದೆ.
Mortal remains of Chief of Defence Staff Bipin Rawat, his wife and 11 other defence personnel being carried in TN Govt. Free Hearse Service vehicles from Madras Regimental Centre in Wellington to the Sulur Air Base in Coimbatore.@xpresstn @NewIndianXpress pic.twitter.com/HPjpIZAy84
— S Mannar Mannan (@mannar_mannan) December 9, 2021
Tamil Nadu CM #MKStalin and Telangana Governor #TamilisaiSoundararajan paid floral tributes to the mortal remains of CDS Gen #BipinRawat and others who died in a #HelicopterCrash in Tamil Nadu’s #Coonoor.
Express photos | @rk_clicks. pic.twitter.com/1EFDWupR02— The New Indian Express (@NewIndianXpress) December 9, 2021