Sharmila B | Vijaya Karnataka Web | Updated: Jan 8, 2022, 2:00 PM
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್ ಸವಾರರನ್ನು ತಡೆದು ಬೈಕ್ಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ. ಇನ್ನು, ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಚೀಟಿಗಳನ್ನು ತೋರಿಸುತ್ತಿದ್ದಾರೆ. ಇನ್ನು ಮಾಸ್ಕ್ ಧರಿಸದೇ ಮಹಿಳೆಯರು ರಸ್ತೆಯಲ್ಲಿ ತಿರುಗಾಡುತ್ತಿದ್ದು, ಅವರನ್ನು ಪೊಲೀಸರು ಪ್ರಶ್ನಿಸಿದರೆ ದೇವಸ್ಥಾನಕ್ಕೆ ಹೋಗಿದ್ವಿ ಎಂದು ನೆಪ ಹೇಳುತ್ತಿರುವುದು ಕಂಡುಬಂತು.

ಸಾಂದರ್ಭಿಕ ಚಿತ್ರ
ಹೈಲೈಟ್ಸ್:
- ವಾರಂತ್ಯದ ಕರ್ಫ್ಯೂಗೆ ರಾಯಚೂರಿನಲ್ಲಿ ಸಿಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು
- ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್ ಸವಾರರನ್ನು ತಡೆದು ಬೈಕ್ಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ
- ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರು ಕೂಡ ಸಾರ್ವಜನಿಕರು ಬೇಕಾ ಬಿಟ್ಟಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್ ಸವಾರರನ್ನು ತಡೆದು ಬೈಕ್ಗಳನ್ನು ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ. ಇನ್ನು, ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ಚೀಟಿಗಳನ್ನು ತೋರಿಸುತ್ತಿದ್ದಾರೆ. ಇನ್ನು ಮಾಸ್ಕ್ ಧರಿಸದೇ ಮಹಿಳೆಯರು ರಸ್ತೆಯಲ್ಲಿ ತಿರುಗಾಡುತ್ತಿದ್ದು, ಅವರನ್ನು ಪೊಲೀಸರು ಪ್ರಶ್ನಿಸಿದರೆ ದೇವಸ್ಥಾನಕ್ಕೆ ಹೋಗಿದ್ವಿ ಎಂದು ನೆಪ ಹೇಳುತ್ತಿರುವುದು ಕಂಡುಬಂತು.
ಇನ್ನು, ಕೆಲವು ಕಡೆ ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿರುವವರ ವಾಹನದ ಬೀಗವನ್ನು ಕಸಿದುಕೊಂಡು ಪೊಲೀಸರ ಜೊತೆ ಸಾರ್ವಜನಿಕರು ವಾಗ್ವಾದ ನಡೆಸಿದರು. ಇನ್ನು, ಕೆಲವರು ಕಳೆದ ಲಾಕ್ಡೌನ್ನಲ್ಲಿ ವಿತರಿಸಿದ ಪಾಸನ್ನು ಈ ಬಾರಿ ತೋರಿಸಿಕೊಂಡು ಹೋಗಲು ಪ್ರಯತ್ನಿಸಿದರು. ಡಿವೈಎಸ್ಪಿ ಶಿವನಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ರಸ್ತೆಗಿಳಿದು ವಾಹನಗಳನ್ನು ಪರಿಶೀಲಿಸಿದರು.
ದಿನಸಿ ಅಂಗಡಿಗಳು, ತರಕಾರಿ ವ್ಯಾಪಾರ, ಹೂ, ಹಣ್ಣು ಹೋಟೆಲ್ಗಳು ಓಪನ್ ಆಗಿದ್ದರೂ ಕೂಡ ಗ್ರಾಹಕರಿಲ್ಲದೆ ವ್ಯಾಪಾರ ನಷ್ಟವಾಗಿದೆ ಎಂದು ದಿನಸಿ ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡರು. ನಗರದ ಪ್ರತಿಯೊಂದು ವೃತ್ತದಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಪರಿಶೀಲಿಸಿದರು. ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಣಗುಡುತ್ತಿದ್ದವು.
ಸಮೀಪದ ನಗರಗಳ ಸುದ್ದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
ಕೀವರ್ಡ್ಸ್
Kannada News from Vijaya Karnataka, TIL Network
Read more
[wpas_products keywords=”deal of the day sale today offer all”]