Karnataka news paper

ಕೋವಿಡ್ 19 ನಿರ್ಬಂಧ: ಐಸಿಯುನಲ್ಲಿ ಚಿತ್ರಮಂದಿರಗಳು


ಹೈಲೈಟ್ಸ್‌:

  • ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಠಿಣ ನಿರ್ಬಂಧಗಳನ್ನು ಸರ್ಕಾರ ವಿಧಿಸಿದೆ
  • ಕರ್ನಾಟಕದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ
  • ಚಿತ್ರಮಂದಿರಗಳಿಗೆ 50% ಆಸನ ಭರ್ತಿಗೆ ಮಾತ್ರ ಅವಕಾಶ
  • ಬೇಸರಗೊಂಡಿರುವ ಚಿತ್ರಮಂದಿರದ ಮಾಲೀಕರು, ಚಿತ್ರತಂಡಗಳು

ಹರೀಶ್‌ ಬಸವರಾಜ್‌
ಕೋವಿಡ್‌ ಹೆಚ್ಚಾಗುತ್ತಿದೆ ಎಂದಾಕ್ಷಣ ಮೊದಲು ಆತಂಕಕ್ಕೆ ಒಳಗಾಗುವುದು ಚಿತ್ರರಂಗ ಮತ್ತು ಚಿತ್ರಮಂದಿರಗಳು. ಎಲ್ಲ ಹಳಿಗೆ ಬಂದು ಚಿತ್ರಮಂದಿರಗಳಿಗೆ ಜನ ಬರುತ್ತಿದ್ದಾರೆ. ಒಳ್ಳೆಯ ಸಿನಿಮಾಗಳು ಉತ್ತಮ ಕಲೆಕ್ಷನ್‌ ಮಾಡುತ್ತಿವೆ ಎನ್ನುವ ಹೊತ್ತಿಗೆ ಕೋವಿಡ್‌ ನಿರ್ಬಂಧಗಳು ಜಾರಿಗೆ ಬರುತ್ತಿವೆ. ಇದು ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದನ್ನು ಗಮನಿಸಿದರೆ ಚಿತ್ರಮಂದಿರಗಳು ಕಳೆದ 21 ತಿಂಗಳಲ್ಲಿ ಸರಾಗವಾಗಿ ಉಸಿರಾಡಿದ್ದು ಮೂರೇ ತಿಂಗಳು!

ಕೋವಿಡ್‌ನ ಮೊದಲ ಅಲೆಯಲ್ಲಿ ಚಿತ್ರಮಂದಿರಗಳನ್ನು ಮುಚ್ಚಿದ ಬಳಿಕ ಶೇ.100 ಸೀಟುಭರ್ತಿಗೆ ಅವಕಾಶ ನೀಡಿದ್ದು 2021ರ ಜನವರಿಯಲ್ಲಿ. ಆ ಬಳಿಕ ಮತ್ತೆ ಕೋವಿಡ್‌ನ ಎರಡನೇ ಅಲೆ ಬಂದು ಎಲ್ಲವನ್ನೂ ಸ್ಥಗಿತಗೊಳಿಸಿತು. ಈ ಮೂಲಕ ಸುಮಾರು 10 ತಿಂಗಳ ಕಾಲ ಚಿತ್ರರಂಗ ಒಂದು ರೀತಿಯಲ್ಲಿಅಘೋಷಿತ ಬಂದ್‌ ಆಚರಿಸಿದಂತಾಯಿತು. ‘ಕಳೆದ 21 ತಿಂಗಳಲ್ಲಿ14 ತಿಂಗಳು ಲಾಕ್‌ಡೌನ್‌ ಆಗಿತ್ತು, ಮೂರೂವರೆ ತಿಂಗಳು ಶೇ. 50ರಷ್ಟು ಸೀಟುಭರ್ತಿ ಇತ್ತು. ಶೇ. 100 ಆಸನಭರ್ತಿ ನೀಡಿ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಕಾರ್ಯ ನಿರ್ವಹಿಸುವಂತೆ ಮಾಡಿದ್ದು ಕೇವಲ ಮೂರು ತಿಂಗಳು. ಒಂದರ್ಥದಲ್ಲಿ ಚಿತ್ರಮಂದಿರದವರು, ಸಿನಿಮಾದವರನ್ನ ನೆಮ್ಮದಿಯಾಗಿ ಉಸಿರಾಡುವಂತೆ ಮಾಡಿದ್ದು ಇವಿಷ್ಟೇ ದಿನಗಳು. ಈಗ ಲಾಕ್‌ಡೌನ್‌ ಮಾಡಿಲ್ಲ. ಶೇ.50 ಸೀಟು ಭರ್ತಿಗೆ ಅವಕಾಶ ನೀಡಿದ್ದೇವೆ ಎನ್ನುತ್ತಾರೆ. ಆದರೆ ಜನ ಬರುವುದಿಲ್ಲ, ಸಿನಿಮಾ ಮಂದಿ ಚಿತ್ರ ಬಿಡುಗಡೆ ಮಾಡುವುದಿಲ್ಲ’ ಎಂದಿದ್ದಾರೆ ವೀರೇಶ್‌ ಚಿತ್ರಮಂದಿರದ ಮಾಲೀಕ ಕೆ.ವಿ.ಚಂದ್ರಶೇಖರ್‌.

ಕೊರೊನಾ ಎಫೆಕ್ಟ್: ಶಾಶ್ವತವಾಗಿ ಪ್ರದರ್ಶನ ನಿಲ್ಲಿಸಿದ ಮೈಸೂರಿನ ಖ್ಯಾತ ಸರಸ್ವತಿ ಚಿತ್ರಮಂದಿರ!
ನೂರು ಚಿತ್ರಮಂದಿರ ಸಕ್ರಿಯ:
ಶೇ. 50 ಸೀಟಿಂಗ್‌ ಪದ್ಧತಿಯಲ್ಲಿ ಎಲ್ಲಾ ಚಿತ್ರಮಂದಿರಗಳು ತೆರೆಯುವುದಿಲ್ಲ. ಶೇ.100 ಸೀಟಿಂಗ್‌ ಪದ್ಧತಿಯಿಲ್ಲದೆ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಇರುವ ನಾಲ್ಕೈದು ಸಿನಿಮಾಗಳನ್ನು ಎಷ್ಟು ಚಿತ್ರಮಂದಿರಗಳಿಗೆ ಹಾಕಲು ಸಾಧ್ಯ? ಬೆಂಗಳೂರಿನಂತಹ ಮಹಾನಗರದಲ್ಲಿಯೇ ಹಲವು ಚಿತ್ರಮಂದಿರಗಳನ್ನು ಮುಚ್ಚಲಾಗುತ್ತದೆ. ಇನ್ನು ಗ್ರಾಮಾಂತರ ಮತ್ತು ತಾಲೂಕು ಕೇಂದ್ರಗಳಲ್ಲಿ ತೆರೆಯಲು ಸಾಧ್ಯವೇ? ಎಂಬ ಅಭಿಪ್ರಾಯ ಚಿತ್ರಮಂದಿರದ ಮಾಲೀಕರಿಂದ ವ್ಯಕ್ತವಾಗುತ್ತಿದೆ. ಲವಲvkಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕರ್ನಾಟಕದಾದ್ಯಂತ ಕೇವಲ 100 ಚಿತ್ರಮಂದಿರಗಳಷ್ಟೇ ಕಾರ್ಯ ನಿರ್ವಹಿಸುತ್ತವೆ. ಉಳಿದವು, ಶೇ. 100 ಆಸನ ಭರ್ತಿಯಾಗುವವರೆಗೂ ಮುಚ್ಚಲ್ಪಡುತ್ತವೆ.

ಈಗ ಚಿತ್ರಮಂದಿರಕ್ಕೆ ಮತ್ತೆ ಜನರನ್ನು ಕರೆತರೋದು ಸವಾಲಿನ ಕೆಲಸ: ಜಯತೀರ್ಥ!
ಚಿತ್ರತಂಡಗಳ ಬೇಸರ:
ಚಿತ್ರಮಂದಿರದಲ್ಲಿಉತ್ತಮವಾಗಿ ಪ್ರದರ್ಶನ­ವಾಗು­ತ್ತಿರುವ ‘ಬಡವ ರಾಸ್ಕಲ್‌’ ಸೇರಿದಂತೆ ಇನ್ನೂ ಹಲವು ಸಿನಿಮಾ ತಂಡಗಳು ವೀಕೆಂಡ್‌ ಕರ್ಫ್ಯೂ ಬಗ್ಗೆ ಬೇಸರ ವ್ಯಕ್ತಪಡಿಸಿವೆ. ‘ವಾರಾಂತ್ಯದಲ್ಲಿ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಆದರೆ ಸರ್ಕಾರ ಕರ್ಫ್ಯೂ ವಿಧಿಸಿರುವುದರಿಂದ ನಷ್ಟವಾಗುತ್ತದೆ. ಏಕೆಂದರೆ, ವಾರದ ದಿನಗಳಲ್ಲಿ ಶೇ. 50ರಷ್ಟು ಸೀಟಿಂಗ್‌ ಪದ್ಧತಿಯಲ್ಲಿಅಷ್ಟೊಂದು ಕಲೆಕ್ಷನ್‌ ಆಗುವುದಿಲ್ಲ. ವಾರಾಂತ್ಯದಲ್ಲಿ ಶೇ.50ರಷ್ಟು ಸೀಟುಗಳು ಪೂರ್ತಿ ತುಂಬುವಂತಹ ಅವಕಾಶವನ್ನು ಸರ್ಕಾರವೇ ಕಿತ್ತುಕೊಂಡಿದೆ’ ಎಂದು ಚಿತ್ರತಂಡಗಳು ಮತ್ತು ಚಿತ್ರಮಂದಿರದ
ಮಾಲೀಕರು ಹೇಳಿದ್ದಾರೆ.

ಥಿಯೇಟರ್‌ನಲ್ಲಿ ಒಂದೊಂದು ಸೀಟ್ ಅಂತರದಲ್ಲಿ ಕೂರಬೇಕು ಎನ್ನೋದು ಹಾಸ್ಯಾಸ್ಪದ: ಕವಿರಾಜ್!
ಕಠಿಣ ನಿಯಮ ತನ್ನಿ, ನಿರ್ಬಂಧ ಬೇಡ:
ಲವಲvk ಜತೆ ಮಾತನಾಡಿದ ಹಲವು ಚಿತ್ರಮಂದಿರಗಳ ಮಾಲೀಕರು, ‘ನಾವು ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಎರಡು ಡೋಸ್‌ ವ್ಯಾಕ್ಸಿನ್‌ ಆದವರನ್ನು ಮಾತ್ರ ಚಿತ್ರಮಂದಿರದೊಳಗೆ ಬಿಡುವುದು, ಸ್ಯಾನಿಟೈಸೇಶನ್‌, ಕಡ್ಡಾಯ ಮಾಸ್ಕ್‌ ಧರಿಸುವಿಕೆ ಹೀಗೆ ಹಲವು ನಿಯಮಗಳನ್ನು ಪಾಲಿಸುತ್ತಿದ್ದೇವೆ. ಬೇಕಾದರೆ ಇಂತಹ ಇನ್ನೂ ನಿಯಮಗಳನ್ನು ಜಾರಿಗೆ ತಂದರೆ ನಾವು ಪಾಲಿಸುತ್ತೇವೆ. ಆದರೆ ನಿರ್ಬಂಧಗಳನ್ನು ವಿಧಿಸದೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು’ ಎಂದಿದ್ದಾರೆ.



Read more

[wpas_products keywords=”deal of the day sale today offer all”]