ಹೈಲೈಟ್ಸ್:
- ಕಣ್ಣು ಕಳೆದುಕೊಂಡ ಬಾಲಕ, ಶಿಕ್ಷಕರ ವಿರುದ್ಧ ಪ್ರಕರಣ
- ಕೂಡ್ಲಿಗಿ ತಾಲೂಕಿನ ಚೌಡಾಪುರದ ಸರಕಾರಿ ಶಾಲೆಯಲ್ಲಿ ಘಟನೆ
- ಏಟು ಬಿದ್ದ ಪರಿಣಾಮ ಕಣ್ಣಿಗೆ ತೀವ್ರ ಗಾಯ
ಡಿ.31ರಂದು ಶಾಲೆಗೆ ಹೋದ ನಮ್ಮ ಪುತ್ರ ಎಂ.ಬಿ.ಪ್ರಜ್ವಲ್ಗೆ ಶಿಕ್ಷಕರು ಹೊಡೆದಿದ್ದಾರೆ. ಏಟು ಬಿದ್ದ ಪರಿಣಾಮ ಕಣ್ಣಿಗೆ ತೀವ್ರ ಗಾಯವಾಗಿದ್ದು, ಕಣ್ಣಿನಲ್ಲಿ ರಕ್ತ ಸುರಿಯುತ್ತಿತ್ತು. ಈ ಕುರಿತು ಶಿಕ್ಷಕರನ್ನು ವಿಚಾರಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಬಾಲಕನ ತಂದೆ ಮಡಿವಾಳರ ಬೀರೇಂದ್ರ ಕುರ್ಮಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೂಡ್ಲಿಗಿಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕಣ್ಣಿನ ಗುಡ್ಡೆ ಹೋಗಿದೆ ಎಂದು ವೈದ್ಯರು ತಿಳಿಸಿದ್ದು, ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಎಡಗಣ್ಣು ಸಂಪೂರ್ಣ ಹೋಗಿದೆ, ದೃಷ್ಟಿ ಬರುವುದಿಲ್ಲ, ಬಲಗಣ್ಣಿಗೂ ತೊಂದರೆಯಾಗಬಹುದು ಎಂದು ಶಸ್ತ್ರಚಿಕಿತ್ಸೆ ನೆರವೇರಿಸಿದರು.
ಚನ್ನಗಿರಿ ಹೈಸ್ಕೂಲ್ ಟೀಚರ್ ತಲೆ ಮೇಲೆ ಕಸದ ಬುಟ್ಟಿ..! ವಿದ್ಯಾರ್ಥಿಗಳ ಪುಂಡಾಟಿಕೆಗೆ ಸಾರ್ವಜನಿಕರ ಆಕ್ರೋಶ
ಆರೋಪಿತರಾದ ಮುಖ್ಯ ಶಿಕ್ಷಕ ಸುಭಾಷಪ್ಪ ಗೊರವರ, ಸಹ ಶಿಕ್ಷಕರಾದ ಶಶಿಕುರ್ಮಾ, ಟಿ.ರವಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ವಿದ್ಯಾರ್ಥಿಯ ತಂದೆ ನೀಡಿದ ದೂರಿನನ್ವಯ ಕಾನಾಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಡ್ಲಿಗಿ ಬಿಇಒ ಹಾಗೂ ತಹಸೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಚೌಡಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣರಾದ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಕಾನಾಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]