ಪಶ್ಚಿಮ ವಲಯದಲ್ಲಿ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ ಪಡೆದರೆ, ಗುಜರಾತ್ನ ವಡೋದರ ಹಾಗೂ ರಾಜಸ್ಥಾನದ ಬನ್ಸ್ವಾರ ಜಿಲ್ಲೆಗಳು ಜಂಟಿಯಾಗಿ ದ್ವೀತಿಯ ಸ್ಥಾನ ಗಳಿಸಿವೆ. ಈಶಾನ್ಯ ವಲಯದಲ್ಲಿ ಅಸ್ಸಾಂನ ಗೋಪಾಲ್ಪರ ಮತ್ತು ಅರುಣಾಚಲ ಪ್ರದೇಶದ ಸಿಯಾಂಗ್ ಮೊದಲ ಹಾಗೂ ಎರಡನೇ ಅಗ್ರ ಜಿಲ್ಲೆಯಾಗಿ ಹೊರ ಹೊಮ್ಮಿವೆ. ಪ್ರಶಸ್ತಿ ಘೋಷಣೆ ಬಳಿಕ ಮಾತನಾಡಿದ ಜಲಶಕ್ತಿ ಖಾತೆ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ‘ದೇಶಾದ್ಯಂತ ಕೃಷಿ, ನೀರಾವರಿ, ಕೈಗಾರಿಕೆ, ಕುಡಿಯುವ ನೀರು ಸೇರಿದಂತೆ ಹಲವು ಕ್ಷೇತ್ರಗಳಿಗೆ ವಾರ್ಷಿಕ 1,000 ಶತಕೋಟಿ ಕ್ಯುಬಿಕ್ ಮೀಟರ್ ನೀರಿನ ಅವಶ್ಯಕತೆ ಇದೆ. ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿರುವ ಕಾರಣ ಬೇಡಿಕೆಗಿಂತ ಲಭ್ಯತೆ ಕಡಿಮೆ ಇದೆ. ಅದರಲ್ಲೂ, 2050ರ ವೇಳೆಗೆ ಬೇಡಿಕೆ ಪ್ರಮಾಣ 1,400-1,500 ಶತಕೋಟಿ ಕ್ಯುಬಿಕ್ ಮೀಟರ್ಗೆ ತಲುಪುವ ಸಾಧ್ಯತೆ ಇದೆ. ಹಾಗಾಗಿ, ಜಲ ಸಂರಕ್ಷಣೆಗೆ ಎಲ್ಲರೂ ಒಗ್ಗೂಡಿ, ಸಕಾರಾತ್ಮಕ ಮನೋಭಾವದಿಂದ ಕಾಯರ್ನಿವಹಿಸಬೇಕಿದೆ’ ಎಂದರು.
Read more
[wpas_products keywords=”deal of the day sale today offer all”]