Karnataka news paper

ವಾರಾಂತ್ಯ ಕರ್ಫ್ಯೂ ಇದ್ದರೂ ಪ್ರವಾಸಿಗರಿಗೆ ಅನುಮತಿ


ಬೆಂಗಳೂರು: ಕೋವಿಡ್‌ ಹಿನ್ನೆಲೆ ವಾರಾಂತ್ಯ ಕಫ್ರ್ಯೂ ಜಾರಿ ಮಾಡಿದ ರಾಜ್ಯ ಸರಕಾರದ ನಿರ್ಧಾರದಿಂದ ಪ್ರವಾಸಿಗರಲ್ಲಿದ್ದ ಗೊಂದಲವನ್ನು ರಾಜ್ಯ ಸರಕಾರ ದೂರ ಮಾಡಿದೆ.

ವಾರಾಂತ್ಯದಲ್ಲಿ ಮನರಂಜನೆಗಾಗಿ ಹೋಟೆಲ್‌, ರೆಸಾರ್ಟ್‌ ಮತ್ತು ಅರಣ್ಯ ಪ್ರದೇಶದ ಸಫಾರಿಗೆ ನೋಂದಣಿ ಮಾಡಿಸಿರುವ ಪ್ರವಾಸಿಗರಿಗೆ ಕೋವಿಡ್‌ ನಿಯಮ ಪಾಲನೆಯೊಂದಿಗೆ ಅನುಮತಿ ನೀಡಿ ಶುಕ್ರವಾರ ಆದೇಶ ಜಾರಿ ಮಾಡಿದೆ.

ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಶುರು: ಏನಿರುತ್ತೆ..? ಏನಿರಲ್ಲ..? ಅನಗತ್ಯವಾಗಿ ಓಡಾಡಿದರೆ ಕ್ರಿಮಿನಲ್‌ ಕೇಸ್‌..!

ಕೋವಿಡ್‌ ಮಾರ್ಗಸೂಚಿ ಜಾರಿ ಹಿನ್ನೆಲೆ ರಾಜ್ಯದ ಪ್ರವಾಸೋದ್ಯಮದ ಮೇಲೆ ಬೀರುವ ಋುಣಾತ್ಮಕ ಪರಿಣಾಮವನ್ನು ತಗ್ಗಿಸಲು, ಕಳೆದೆರಡು ಕೋವಿಡ್‌ ಅಲೆಯಿಂದಾಗಿ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಮತ್ತು ಈಗಾಗಲೇ ಸಫಾರಿ, ರೆಸಾರ್ಟ್‌ಗಳಿಗೆ ತೆರಳಲು ಹೋಟೆಲ್‌ ಬುಕ್‌ ಮಾಡಿದ್ದ ಪ್ರವಾಸಿಗರಿಗೆ ಅನುಕೂಲವಾಗಲು ರಾಜ್ಯ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಪ್ರವಾಸಿಗರು ಸರಕಾರದ ಆದೇಶವನ್ನು ಸ್ವಾಗತಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಆರ್ಭಟ, 8 ಸಾವಿರ ದಾಟಿದ ಹೊಸ ಕೇಸ್‌, ಪಾಸಿಟಿವಿಟಿ ದರ 4.15%ಗೆ ಜಂಪ್‌!

ಸರಕಾರದ ಆದೇಶವೇನು?

– ಹೋಟೆಲ್‌, ರೆಸಾರ್ಟ್‌ ಮತ್ತು ಸಫಾರಿಗೆ ವಾರಂತ್ಯದಲ್ಲಿನೋಂದಣಿ ಮಾಡಿಸಿರುವ ಪ್ರವಾಸಿಗರು ಸೂಕ್ತ ದಾಖಲೆಗಳೊಂದಿಗೆ ಕಾರು, ಟ್ಯಾಕ್ಸಿ ಮತ್ತು ಇತರೆ ಸಾರಿಗೆ ಮೂಲಗಳನ್ನು ಬಳಸಿ ತೆರಳಬಹುದು.
– ಅತಿಥಿ ನಿವಾಸ, ಹೋಟೆಲ್‌ಗಳಲ್ಲಿಪ್ರವಾಸಿಗರು ತಂಗಲು ಯಾವುದೇ ನಿರ್ಬಂಧವಿಲ್ಲ.
– ಹೋಟೆಲ್‌, ರೆಸಾರ್ಟ್‌ಗಳು ನೀಡುವ ಸೌಲಭ್ಯವನ್ನು ಅತಿಥಿಗಳಿಗೆ ಮಾತ್ರ ನೀಡತಕ್ಕದ್ದು.
– ಬುಕಿಂಗ್‌ ದಾಖಲೆಯೊಂದಿಗೆ ಹೋಟೆಲ್‌ ಪ್ರವೇಶಿಸಬಹುದು/ನಿರ್ಗಮಿಸಬಹುದು.
– ಕೋವಿಡ ನಿಯಮಾವಳಿಗೆ ಒಳಪಟ್ಟು ಅರಣ್ಯ ಪ್ರದೇಶದಲ್ಲಿನ ಸಫಾರಿಗೆ ಅನುಮತಿ ನೀಡಲಾಗಿದೆ.

ಕರ್ನಾಟಕ-ತಮಿಳುನಾಡು ಗಡಿಗೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ

ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿಕರ್ನಾಟಕ-ತಮಿಳುನಾಡು ಗಡಿ ತಾಲೂಕಿನ ಅತ್ತಿಬೆಲೆ ಚೆಕ್‌ ಪೋಸ್ಟ್‌ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅವರು, ‘‘ಶನಿವಾರದಿಂದ ವಾಹನ ತಪಾಸಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಚೆಕ್‌ ಪೋಸ್ವ್‌ನಲ್ಲಿತಪಾಸಣೆ ಬಿಗಿಗೊಳಿಸಲು ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಾಹನ ತಪಾಸಣೆಗಾಗಿ ಪೊಲೀಸರ ಜತೆ 200ಕ್ಕೂ ಹೆಚ್ಚು ಹೋಮ್‌ ಗಾರ್ಡ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ’’ ಎಂದು ಅವರು ತಿಳಿಸಿದರು.

ಪ್ರತ್ಯೇಕ ಅಪಘಾತ: ಮದ್ಯದ ಅಮಲಿನಲ್ಲಿ ವಾಹನ ಚಾಲನೆ, ಇಬ್ಬರು ಟೆಕ್ಕಿಗಳು ಸೇರಿ ಮೂವರ ಸಾವು

‘‘ಓಂ ಶಕ್ತಿ, ಶಬರಿಮಲೆಗೆ ಹೋಗಿ ಬರುವ ಯಾತ್ರಾರ್ಥಿಗಳು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ರಿಪೋರ್ಟ್‌ ತರಬೇಕು. ಇಲ್ಲವಾದರೆ ಸ್ಥಳದಲ್ಲಿಅವರನ್ನು ತಪಾಸಣೆ ಮಾಡಿದ ಬಳಿಕ ರಾಜ್ಯದ ಒಳಗೆ ಪ್ರವೇಶ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.



Read more

[wpas_products keywords=”deal of the day sale today offer all”]